SHIVAMOGGA LIVE NEWS
SHIMOGA | ಸಾಗರ ಜಂಬಗಾರು (SAGARA JAMBAGARU) ಮತ್ತು ಆನಂದಪುರ (ANANDAPURA) ನಡುವೆ ರೈಲ್ವೆ ಹಳಿ ಮೇಲೆ ಸಂಭಾವ್ಯ ಅನಾಹುತ ತಪ್ಪಿಸಿದ ಅಸಿಸ್ಟೆಂಟ್ ಲೋಕೋ ಪೈಲೆಟ್ ಸೇರಿ ನಾಲ್ವರನ್ನು ಗೌರವಿಸಲಾಯಿತು. ನೈಋತ್ಯ ರೈಲ್ವೆ (SOUTH WESTERN RAILWAY) ವತಿಯಿಂದ ನಾಲ್ವರು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ತಪ್ಪಿದ ಅನಾಹುತ
2022ರ ಜುಲೈ 16ರಂದು ಮೈಸೂರ – ತಾಳಗುಪ್ಪ (MYSORE – TALAGUPPA) ರೈಲು ಚಲಿಸುತ್ತಿದ್ದಾಗ ರೈಲು ಜೋರಾಗಿ ಅಲುಗಾಡಿದ ಅನುಭವವಾಗಿದೆ. ಹಳಿಯಲ್ಲಿ ತಾಂತ್ರಿಕ ಸಮಸ್ಯೆ ಆಗಿರುವುದು ಅಸಿಸ್ಟೆಂಟ್ ಲೋಕೊ ಪೈಲೆಟ್ ಸೆಲ್ವ ಗಣಪತಿ ಅವರ ಅನುಭವಕ್ಕೆ ಬಂದಿದೆ. ಸಾಗರ ಜಂಬಗಾರು – ಆನಂದಪುರ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಈ ಕುರಿತು ಸೆಲ್ವ ಗಣಪತಿ ಅವರು ಕೂಡಲೆ ನಿಲ್ದಾಣಕ್ಕೆ ಮಾಹಿತಿ ನೀಡಿದ್ದರು.
ಇಂಜಿನಿಯರ್’ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ತಾಂತ್ರಿಕ ದೋಷ (TECHNICAL PROBLEM) ಉಂಟಾಗಿತ್ತು. ಕೂಡಲೆ ಅದನ್ನು ಸರಿಪಡಿಸಲಾಯಿತು. ಅನಾಹುತ ತಪ್ಪಿಸಿದ ಅಸಿಸ್ಟೆಂಟ್ ಲೋಕೋ ಪೈಲೆಟ್ ಸೆಲ್ವ ಗಣಪತಿ ಅವರನ್ನು ನೈಋತ್ಯ ರೈಲ್ವೆ ಗೌರವಿಸಿದೆ.
ಯಡಮಂಗಲ ರೈಲ್ವೆ ನಿಲ್ದಾಣ ಮೂಲಕ ತೆರಳುತ್ತಿದ್ದ ಗೂಡ್ಸ್ ರೈಲಿನ (RAILWAY) ತಾಂತ್ರಿಕ ದೋಷ ಗಮನಿಸಿ ಮುಂದಿನ ನಿಲ್ದಾಣಕ್ಕೆ ಮಾಹಿತಿ ನೀಡಿದ ಸ್ಟೇಷನ್ ಮಾಸ್ಟರ್ ದೇವೇಂದ್ರ ಭಗತ್, ಚಲಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ರಿಪೋರ್ಟ್ ಮಾಡಿದ ಹೊಳಲ್ಕೆರೆ ಸ್ಟೇಷನ್ ಮಾಸ್ಟರ್ ಬಿ.ಆರ್.ನಾಗರಾಜ್, ಯಡೆಕುಮಾರಿ – ಸಕಲೇಶಪುರ ನಡುವೆ ಹಳಿ ಮೇಲೆ ಬಂಡೆಗಲ್ಲು ಬಿದ್ದಿದ್ದನ್ನು ರಿಪೋರ್ಟ್ ಮಾಡಿದ ಟ್ರ್ಯಾಕ್ ಮೈಂಟೇನರ್ ರವೀಂದ್ರ ಪಟ್ನಂ ಅವರನ್ನು ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರು ಸನ್ಮಾನಿಸಿದರು.
ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ರೈಲ್ವೆ ಟೈಮಿಂಗ್ಸ್, ಯಾವ ರೈಲು ಎಷ್ಟೊತ್ತಿಗೆ ಹೊರಡುತ್ತೆ?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200