ಶಿವಮೊಗ್ಗ ಲೈವ್.ಕಾಂ |SHIMOGA NEWS | 25 NOVEMBER 2020
ಹೊಸಮನೆ ಬಡಾವಣೆಯ ಚಾನೆಲ್ ಪಕ್ಕದಲ್ಲಿ 260 ಮೀಟರ್ ಉದ್ದದ ಪಾರ್ಕ್ ಕಾಮಗಾರಿಗೆ ಕಾರ್ಪೊರೇಟರ್ ರೇಖಾ ರಂಗನಾಥ್ ಅವರು ಗುದ್ದಲಿ ಪೂಜೆ ನೆರವೇರಿಸಿದರು. 50 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
ಜೈಲ್ ರಸ್ತೆಯ ಎಡ ಭಾಗದಲ್ಲಿ ಚಾನೆಲ್ನ ಆರಂಭದಿಂದ ನಾಗಪ್ಪ ದೇವಸ್ಥಾನದವರೆಗೆ ಪಾರ್ಕ್ ನಿರ್ಮಾಣ ಆಗಲಿದೆ. ವಾಕಿಂಗ್ ಪಾಥ್, ಮಕ್ಕಳ ಆಟೋಪಕರಣ, ಜಿಮ್ ಉಪಕರಣಗಳು ಈ ಪಾರ್ಕ್ನಲ್ಲಿ ಇರಲಿವೆ.
ಕಾಂಗ್ರೆಸ್ ಮುಖಂಡ ಕೆ.ರಂಗನಾಥ್, ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಮುಖಂಡರಾದ ಜ್ಯೋತಿ ಅರಳಪ್ಪ, ಶರತ್, ಚೇತನ್, ಪವನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ನಗರಾಧ್ಯಕ್ಷ ಗಿರೀಶ್ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]