ಬೆಳಂಬೆಳಗ್ಗೆ ಜೈಲ್ ಸರ್ಕಲ್ ಮಧ್ಯೆ ದಿಢೀರ್ ಪ್ರತ್ಯಕ್ಷವಾಯ್ತು ಹುತ್ತ, ಹೆಡೆ ಬಿಚ್ಚಿದ ನಾಗರ, ‘ರಾಜಕೀಯ ದ್ವೇಷ’ವೆ ಇದಕ್ಕೆಲ್ಲ ಕಾರಣ..!

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 16 ನವೆಂಬರ್ 2019

ಜೈಲ್ ಸರ್ಕಲ್ ಮಧ್ಯೆ ದಿಢೀರ್ ಪ್ರತ್ಯಕ್ಷವಾಯ್ತು ಹುತ್ತ..! ಜನರನ್ನು ಭಯಬೀಳಿಸಿದವು ಬುಸ್ ಬುಸ್ ನಾಗಪ್ಪ..!

ಸಮರ್ಪಕವಾಗಿ ಗುಂಡಿ ಮುಚ್ಚದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಶಿವಮೊಗ್ಗದ ಪ್ರಜಾಕೀಯ ಪಕ್ಷ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು. ಇದನ್ನು ಕಂಡು ಜೈಲ್ ಸರ್ಕಲ್’ನಲ್ಲಿ ಜನರು ಆಶ್ಚರ್ಯಚಕಿತರಾದರು.

ಹೇಗಿತ್ತು ಪ್ರತಿಭಟನೆ?

ಇವತ್ತು ಬೆಳಗ್ಗೆ ಜೈಲ್ ಸರ್ಕಲ್’ನ ಮಧ್ಯಭಾಗದಲ್ಲಿ ಹುತ್ತದ ಮಾದರಿ ನಿರ್ಮಿಸಲಾಗಿತ್ತು. ಅದರ ಮೇಲೆ ಹೆಡೆ ಬಿಚ್ಚಿದ ಮಾದರಿಯಲ್ಲಿದ್ದ ಎರಡು ಪ್ಲಾಸ್ಟಿಕ್ ನಾಗರ ಹಾವುಗಳನ್ನು ಇರಿಸಲಾಗಿತ್ತು. ಹುತ್ತದ ಮಾದರಿ ಸುತ್ತ ಅರಿಶಿಣ, ಕುಂಕಮ ಹಚ್ಚಿ, ಹೂವಿನ ಹಾರ ಹಾಕಲಾಗಿತ್ತು. ಊದುಬತ್ತಿ ಹಚ್ಚಿಡಲಾಗಿತ್ತು. ಸರ್ಕಲ್ ಮಧ್ಯೆ ದಿಢೀರ್ ಪ್ರತ್ಯಕ್ಷವಾದ ಹುತ್ತು ಮತ್ತು ಅದಕ್ಕೆ ಮಾಡಲಾಗಿದ್ದ ಪೂಜೆ ಕಂಡು ವಾಹನ ಸವಾರರು ದಂಗಾದರು.

ಪ್ರತಿಭಟನೆಗೆ ಕಾರಣವೇನು?

ಜೈಲ್ ಸರ್ಕಲ್’ನ ಮಧ್ಯೆದಲ್ಲಿ ಗುಂಡಿ ಬಿದ್ದಿತ್ತು. ಅದನ್ನು ಮುಚ್ಚಿ, ಸಮತಟ್ಟು ಮಾಡುವ ಬದಲು, ರಸ್ತೆಯಿಂದ ಎರಡು ಅಡಿ ಎತ್ತರದಷ್ಟು ಮಣ್ಣು ಹಾಕಲಾಗಿದೆ.  ಬೈಕ್ ಸವಾರರ ಪಾಲಿಗಂತು ಇದು ಯಮಸ್ವರೂಪಿಯಾಗಿತ್ತು. 24 ಗಂಟೆ ಕಳೆದರು ಯಾರೊಬ್ಬರು ಇದನ್ನು ಸರಿಪಡಿಸುವ ಗೋಜಿಗೆ ಹೋಗಿರಲಿಲ್ಲ.

https://www.facebook.com/venktesh.venku.71/videos/793588517761174/?t=242

ಪ್ರಜಾಕೀಯದಿಂದ ವಿಭಿನ್ನ ಪ್ರತಿಭಟನೆ

ಸರಿಯಾಗಿ ಗುಂಡಿ ಮುಚ್ಚದಿರುವ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಶಿವಮೊಗ್ಗದ ಪ್ರಜಾಕೀಯ ಘಟಕ ವಿಭಿನ್ನ ಪ್ರತಿಭಟನೆ ನಡೆಸಿತು. ಪ್ರಜಾಕೀಯದ ಜಿಲ್ಲಾ ಸಂಚಾಲಕ ವೆಂಕಟೇಶ್, ಕೃಷ್ಣಮೂರ್ತಿ, ಡ್ಯಾನಿ, ಪ್ರದೀಪ್, ರಾಕೇಶ್, ಗೌತಮ್ ಅವರು ಹುತ್ತದ ಮಾದರಿ ನಿರ್ಮಿಸಿದರು. ಅದರ ಮುಂದೆ ರಾಜಕೀಯದ ಕೊಡುಗೆ ಎಂದು ಬೋರ್ಡು ನೆಟ್ಟರು. ಸವಾರರು ಇಲ್ಲಿ ಎಚ್ಚರದಿಂದ ವಾಹನ ಚಲಾಯಿಸುವಂತೆ ಜಾಗೃತಿ ಮೂಡಿಸಿದರು.

‘ಪ್ರಜೆಗಳೆ ಪ್ರಶ್ನೆ ಮಾಡಬೇಕು..’

ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಪ್ರಜಾಕೀಯದ ಜಿಲ್ಲಾ ಸಂಚಾಲಕ ವೆಂಕಟೇಶ್, ‘ರಾಜಕೀಯ ಕಾರಣಕ್ಕೆ ಜನರನ್ನು ಬೆದರಿಸುತ್ತಾರೆ. ಆದರೆ ಜನರೆ ಹೊರಗೆ ಬಂದು ಪ್ರಶ್ನೆ ಮಾಡಬೇಕು. ಆಗ ಇಂತಹ ಸಮಸ್ಯೆ ನಿವಾರಣೆಯಾಗುತ್ತದೆ. ಜನ ಜಾಗೃತಿಗಾಗಿ ವಿಭಿನ್ನವಾಗಿ ಪ್ರತಿಭಟಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment