ಶಿವಮೊಗ್ಗದಲ್ಲಿ ಬಸ್‌ ಹತ್ತಿ ಅಣ್ಣನಿಗೆ ಫೋನ್‌ ಮಾಡಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 3 MAY 2024

SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಬರಣ ಕಳ್ಳತನ ಪ್ರಕರಣ ಮತ್ತೆ ಶುರುವಾಗಿದೆ. ಶಿವಮೊಗ್ಗ ನಿಲ್ದಾಣದ ದಾವಣಗೆರೆ ಪ್ಲಾಟ್‌ಫಾರಂನಲ್ಲಿ ಬಸ್‌ ಹತ್ತುವಾಗ ವ್ಯಾನಿಟಿ ಬ್ಯಾಗ್‌ ಜಿಪ್‌ ತೆಗೆದು ಒಳಗೆ ಚಿನ್ನಾಭರಣ ಇದ್ದ ಬ್ಯಾಗ್‌ ಕಳವು ಮಾಡಲಾಗಿದೆ.

ಕಳ್ಳತನ ಆಗಿದ್ದು ಹೇಗೆ?

ಶಿವಮೊಗ್ಗದ ಜೆಸಿ ನಗರದ ಶಿಲ್ಪಾ ಎಂಬುವವರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ದಾವಣಗೆರೆ ಪ್ಲಾಟ್‌ಫಾರಂನಿಂದ ಬಸ್‌ ಹತ್ತುವಾಗ ಘಟನೆ ಸಂಭವಿಸಿದೆ. ರಶ್‌ ಇದ್ದಿದ್ದರಿಂದ ಶಿಲ್ಪಾ ಅವರ ಪತಿ ಬಸ್‌ ಹತ್ತಿ ಸೀಟ್‌ ಹಿಡಿದಿದ್ದರು. ಮಕ್ಕಳೊಂದಿಗೆ ಬಸ್‌ ಹತ್ತಿದ ಶಿಲ್ಪಾ, ತಮ್ಮ ಸಹೋದರನಿಗೆ ಕರೆ ಮಾಡಲು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮೊಬೈಲ್‌ ತೆಗೆಯಲು ಮುಂದಾದರು. ಆಗ ವ್ಯಾನಿಟಿ ಬ್ಯಾಗ್‌ ಜಿಪ್‌ ತೆರೆದಿತ್ತು.

ಬ್ಯಾಗಿನೊಳಗಿದ್ದ ಬ್ಯಾಗ್‌ ನಾಪತ್ತೆ

ವ್ಯಾನಿಟಿ ಬ್ಯಾಗಿನೊಳಗೆ ಇದ್ದ ಮತ್ತೊಂದು ಬ್ಯಾಗ್‌ ನಾಪತೆಯಾಗಿತ್ತು. ಅದರಲ್ಲಿ 1.18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇತ್ತು. ರಶ್‌ ಇದ್ದಾಗ ಬಸ್‌ ಹತ್ತುವಾಗ ವ್ಯಾನಿಟಿ ಬ್ಯಾಗ್‌ ಜಿಪ್‌ ತೆಗೆದು ಚಿನ್ನಾಭರಣವಿದ್ದ ಬ್ಯಾಗ್‌ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಸಾಂಪ್ರದಾಯಿಕ ಉಡುಪು ತೊಟ್ಟು ಶಿವಮೊಗ್ಗ ಸಿಟಿಯಲ್ಲಿ ಅಧಿಕಾರಿಗಳ ಮೆರವಣಿಗೆ, ಹೇಗಿತ್ತು? ಕಾರಣವೇನು?

Leave a Comment