SHIVAMOGGA LIVE NEWS | 1 DECEMBER 2023
SHIMOGA : ನಗರದ ಬೈಪಾಸ್ ರಸ್ತೆಯ ವಾದಿ-ಎ-ಹುದಾ ಬಳಿ ಡಿವೈಡರ್ ಅಳವಡಿಸದಂತೆ ರಾಜ್ಯ ನಿಸ್ವಾರ್ಥ ಜನಶಕ್ತಿ ವೇದಿಕೆ ವತಿಯಿಂದ ಸಂಘಟನೆಯ ರಾಜ್ಯಾಧ್ಯಕ್ಷ ಎಂ.ಸಮೀವುಲ್ಲಾ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಡಿವೈಡರ್ ಅಳವಡಿಸಿದರೆ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಇದೆ ರಸ್ತೆಯಲ್ಲಿ ಇಂದಿರಾನಗರ, ಸೂಳೆಬೈಲು ರಸ್ತೆ ಡಿವೈಡರ್ ಇಲ್ಲ. ಇದೆ ಮಾದರಿ ವಾದಿ-ಎ-ಹುದಾಗು ಡಿವೈಡರ್ ಅಳವಡಿಸಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
![]() |
ಆಟೋ ಕಾಂಪ್ಲೆಕ್ಸ್ನಲ್ಲಿ ರಾಜ್ಯೋತ್ಸವ
SHIMOGA : ಶಿವಮೊಗ್ಗ ಸಾಗರ ರಸ್ತೆಯ ಆಟೋ ಕಾಂಪ್ಲೆಕ್ಸ್ನ ಕಾರ್ಮಿಕರ ಜ್ಯೋತಿ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವ (karnataka rajyotsava) ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರುಗಳಾದ ಗೌರವಾಧ್ಯಕ್ಷ ಎನ್.ರಮೇಶ್ ಬಾಬು, ಅಧ್ಯಕ್ಷ ಶಿವಾಜಿ, ಉಪಧ್ಯಕ್ಷ ಖಲೀಲ್, ಕಾರ್ಯದರ್ಶಿ ಸೈಯದ್ ಖಾದರ್, ಸಹ ಕಾರ್ಯದರ್ಶಿ ಗೋಪಿ, ಜಬ್ಬರ್, ಖಜಾಂಜಿ ಪ್ರಕಾಶ್, ಮನ್ಸೂರ್ ಸೇರಿದಂತೆ ಮುಂತಾದವರು ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200