ಶಿವಮೊಗ್ಗದಲ್ಲಿ ವಚನ ಗಾಯನ, 25ಕ್ಕೂ ಹೆಚ್ಚು ತಂಡ ಭಾಗಿ

Published On : ಜನವರಿ 19, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪಾಲಿಕೆ ಘಟಕ ಹಾಗೂ ಮಾಧ್ಯಮ ಘಟಕದ ಆಶ್ರಯದಲ್ಲಿ ವೆಂಕಟೇಶ ನಗರದಲ್ಲಿ ಬಸವ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಚನ ಗಾಯನ ಸ್ಪರ್ಧೆಯನ್ನು ಸಂಸದ ಬಿ.ವೈ.ರಾಘವೇಂದರ ಉದ್ಘಾಟಿಸಿದರು. (Radio studio)

” ವಿದ್ಯಾನಗರದಲ್ಲಿ ಶೀಘ್ರ ಎಫ್.ಎಂ. ರೇಡಿಯೊ ಸ್ಟೂಡಿಯೋ ಕಾರ್ಯಾರಂಭ ಮಾಡಲಿದೆ. ಪ್ರತಿದಿನ ವಚನ ಗಾಯನ, ಶರಣರ ತತ್ವಗಳು ಹಾಗೂ ಧಾರ್ಮಿಕ ಚಿಂತನೆಗೆ ರೇಡಿಯೋದಲ್ಲಿ ಅವಕಾಶ ನೀಡಲಾಗುವುದು. ಯುವ ಪೀಳಿಗೆಯು ಜೀವನದ ಪ್ರತಿ ಹಂತವನ್ನು ಕೀಳರಿಮೆಯಿಲ್ಲದೇ ಆತ್ಮವಿಶ್ವಾಸದಿಂದ ಎದುರಿಸಲು ಪೂರಕ ವಾತಾವರಣ ರೂಪಿಸಲು ಪ್ರಯತ್ನಿಸಲಾಗುವುದು.”
ಬಿ.ವೈ.ರಾಘವೇಂದ್ರ, ಸಂಸದ

ವಚನ ಗಾಯನ ಸ್ಪರ್ಧೆಯಲ್ಲಿ 25ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮಹಾಸಭಾ ಪಾಲಿಕೆ ಘಟಕ ಅಧ್ಯಕ್ಷ ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್‌. ರುದ್ರೇಗೌಡ, ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಪ್ರಮುಖರಾದ ಬಳ್ಳಕೆರೆ ಸಂತೋಷ್, ಹೆಚ್.ಸಿ. ಯೋಗೇಶ್, ಗಾಯಕ ಹುಮಾಯೂನ್ ಹರ್ಲಾಪುರ್, ವಿ.ಟಿ.ಅರುಣ್, ಕತ್ತಿಗೆ ಉಮೇಶ್, ಕೆ. ಆರ್.ಸೋಮನಾಥ್‌ ಉಪಸ್ಥಿತರಿದ್ದರು.

190126 Vachanga gayana competation in Shimoga city
Total-Readers-of-Shivamogga-Live

ಇದನ್ನೂ ಓದಿ » ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜನವರಿ 19, 2026

Leave a Comment