SHIVAMOGGA LIVE NEWS | 29 MAY 2024
SHIMOGA : ಕಳೆದ ಕೆಲವು ದಿನದಿಂದ ನಗರದ ಎನ್.ಆರ್.ಪುರ ರಸ್ತೆಯಲ್ಲಿ ಬೀದಿ ದೀಪಗಳು (Street Light) ಕಣ್ಣಾಮುಚ್ಚಾಲೆ ಆಡುತ್ತಿವೆ. ಇದರಿಂದ ರಸ್ತೆಯಲ್ಲಿ ಕಡು ಕತ್ತಲೆ ಆವರಿಸಿದ್ದು, ನಾಗರಿಕರು ಆತಂಕಕ್ಕೀಡಾಗಿದ್ದಾರೆ.
ಶಿವಮೊಗ್ಗದ ಎಂಆರ್ಎಸ್ ಸರ್ಕಲ್ನಿಂದ ಒಡ್ಡಿನಕೊಪ್ಪ ಗ್ರಾಮದವರೆಗೆ ಎನ್.ಅರ್.ಪುರ ರಸ್ತೆಯ ಡಿವೈಡರ್ ಮೇಲೆ ಒಂದು ಬದಿಗೆ ಮಾತ್ರ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಈ ವಿದ್ಯುತ್ ದೀಪಗಳು ಕಳೆದ ಕೆಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿವೆ. ಒಂದೆರಡು ದಿನ ಬೆಳಕು ಕಾಣಿಸಿಕೊಂಡರೆ ಮತ್ತಷ್ಟು ದಿನ ಕತ್ತಲು ಆವರಿಸುತ್ತಿದೆ.
ಕಳ್ಳತನ ಭೀತಿ, ಕುಡುಕರು, ಅಪಘಾತದ ಆತಂಕ
ಇದೆ ರಸ್ತೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಶಿವಮೊಗ್ಗದಿಂದ ಎನ್.ಆರ್.ಪುರ, ಬಿ.ಆರ್.ಪಿ ಕಡೆಗೆ ತೆರಳಲು ಇದು ಹೆದ್ದಾರಿ. ಜ್ಯೋತಿನಗರ ಬಡಾವಣೆ, ಒಡ್ಡಿನಕೊಪ್ಪ ಗ್ರಾಮಕ್ಕೆ ಇದು ಸಂಪರ್ಕ ರಸ್ತೆ. ಬೀದಿ ದೀಪಗಳು ಬೆಳಗದಿದ್ದರೆ ರಸ್ತೆಯಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತದೆ. ರಸ್ತೆಯ ಅಕ್ಕಪ್ಕದಲ್ಲಿ ಮನೆಗಳಿದ್ದು ಜನ ಮನೆಯಿಂದ ಹೊರ ಬರಲು ಹೆದರುವ ಸ್ಥಿತಿ ಇದೆ. ಎಂಆರ್ಎಸ್ ಕಾಂಪೌಂಡ್ಗೆ ಹೊಂದಿಕೊಂಡಂತೆ ರಾತ್ರಿ ವೇಳೆ ಕಾರು, ಆಟೋ, ಲಾರಿ, ಬೈಕುಗಳನ್ನು ನಿಲ್ಲಿಸಿಕಂಡು ರಸ್ತೆಯಲ್ಲೆ ಮದ್ಯ ಸೇವಿಸುತ್ತಾರೆ ಎಂಬ ಆರೋಪವಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಅಡಿಕೆ ಗೋದಾಮುಗಳ ಮೇಲೆ 40 ಅಧಿಕಾರಿಗಳ ತಂಡದಿಂದ ದಿಢೀರ್ ದಾಳಿ
‘ರಸ್ತೆಯಲ್ಲಿ ವಿದ್ಯುತ್ ದೀಪಗಳನ್ನು ಸರಿಯಾಗಿ ಹಾಕುತ್ತಿಲ್ಲ. ರಾತ್ರಿ ಹೊತ್ತು ಇದು ಕುಡುಕರ ಅಡ್ಡೆಯಾಗಿ ಪರಿವರ್ತನೆ ಆಗುತ್ತದೆ. ಸಂಜೆ ವೇಳೆ ಹಲವರು ವಾಕಿಂಗ್ ಮಾಡುತ್ತಾರೆ. ಕಳ್ಳರೋ, ಕಿಡಿಗೇಡಿಗಳೋ ಬಡಾವಣೆಗೆ ನುಗ್ಗುತ್ತಾರೇನೋ ಅನ್ನುವ ಭಯವಿದೆ. ಈ ಭಾಗದಲ್ಲಿ ಪೊಲೀಸ್ ಗಸ್ತು ಕೂಡ ಇಲ್ಲ. ಈ ಬಡಾವಣೆ ಶಾಂತಮಯವಾಗಿದೆ. ಆದರೆ ಭದ್ರತೆಯ ಅಗತ್ಯವಿದೆ’ ಅನ್ನುತ್ತಾರೆ ಜ್ಯೋತಿನಗರ ಬಡಾವಣೆ ನಿವಾಸಿ ಕೃಷ್ಣಮೂರ್ತಿ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200