ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್‌ ರಚನೆ, ಯಾರಿಗೆ ಯಾವ ಜವಾಬ್ದಾರಿ?

Published On : ಮಾರ್ಚ್ 28, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಜಿಲ್ಲೆಯ ದೀವರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿ (office bearers) ಪುನರ್ ರಚನೆ ಆಗಿದೆ. 2026-27 ಮತ್ತು 2027-28ನೇ ಸಾಲಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ – ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

ಸಮಿತಿಯ ಅಧ್ಯಕ್ಷರಾಗಿ ಟಿ.ಕುಪ್ಪಯ್ಯ, ಉಪಾಧ್ಯಕ್ಷರಾಗಿ ಎಂ.ಕೆ. ರಮೇಶ್, ಜಿ.ಎಂ. ವೀರಭದ್ರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್. ಮಂಜಪ್ಪ ಆಯ್ಕೆ ಆಗಿದ್ದು, ಕಾರ್ಯದರ್ಶಿಗಳಾಗಿ ಕೆ.ಎಸ್. ಉದಯ ಕುಮಾರ್, ಡಿ. ಮಹಾಬಲೇಶ್ವರ ಆಯ್ಕೆ ಆಗಿದ್ದಾರೆ. ಖಜಾಂಚಿಯಾಗಿ ಯು.ಸಿ. ಹುಚ್ಚರಾಯಪ್ಪ, ಸಹಕಾರ್ಯದರ್ಶಿಗಳಾಗಿ ಯು. ಸುಬ್ರಹ್ಮಣ್ಯ ಹಾಗೂ ಪ್ರಭಾಕರ್ ಬಿ. ಮಲೆಶಂಕರ ಆಯ್ಕೆಯಾಗಿದ್ದಾರೆ.

Sunrise Facility Services, Sri sai Trust Shimoga

ಸಂಘಟನಾ ಕಾರ್ಯದರ್ಶಿಗಳಾಗಿ ಎಸ್.ಎಸ್. ಚಂದ್ರಶೇಖರ, ಬಿ. ಭಾರತಿ, ಹೆಚ್.ಡಿ. ಸುಜಿತ್, ಮಂಜಪ್ಪ ಕೆ.ಮಾಲ್ವೆ, ಸುಧಾಕರ ಕೆ. ನಾಯ್ಕ, ಬಿ.ಆರ್. ಗಿರಿಯಪ್ಪ, ಚಂದ್ರಶೇಖರ ಕೆ.ಎಂ, ಎಲ್. ಭರ್ಮಪ್ಪ, ಪುಟ್ಟಸ್ವಾಮಿ ಪಿ. ಚಂಗೊಳ್ಳಿ, ಲೋಹಿತ್ ಅವರು ಆಯ್ಕೆ ಆಗಿದ್ದಾರೆ.

ನಿರ್ದೇಶಕರಾಗಿ ಎಚ್. ನಾಗರಾಜ್, ಶ್ರೀನಿವಾಸ ಜಿ. ನಾಯ್ಕ, ಎಂ.ಪಿ. ಲೋಕೇಶ್ವರ, ಬಿ. ಬಸವಣ್ಯಪ್ಪ ಸೌಭಾಗ್ಯ ಪುರದಾಳು, ಲಕ್ಷ್ಮಣ್ ಚಂಗೊಳ್ಳಿ, ಬಿ. ದಾನಪ್ಪ, ಶಾಂತಕುಮಾರ ಡಿ. ನಾಯ್ಕ, ಆರ್. ಪಾಂಡುರಂಗಪ್ಪ, ಮಹೇಶ್ ಅವರು ಆಯ್ಕೆ ಆಗಿದ್ದಾರೆ ಎಂದು ತಿಳಿಸಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 28, 2026

Leave a Comment