SHIVAMOGGA LIVE NEWS | RAIN EFFECT | 19 ಮೇ 2022
ಭಾರಿ ಮಳೆ ಹಿನ್ನೆಲೆ ಹೊಸಮನೆ ಬಡಾವಣೆ ಪುನಃ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿದ್ದು ಸ್ಥಳೀಯ ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ.
ಬೆಳಗ್ಗೆಯಿಂದ ಸುರಿದ ಮಳೆಗೆ ಹೊಸಮನೆ ಬಡಾವಣೆಯ ಕೆಲವು ಕಡೆ ನೀರು ನುಗ್ಗಿದೆ. ಮನೆಗಳು ಜಲಾವೃತವಾಗಿವೆ. ದಿನಸಿ ಸೇರಿದಂತೆ ಮನೆಯೊಳಗಿದ್ದ ಹಲವು ವಸ್ತುಗಳು ಪೀಠೋಪಕರಣಗಳು ಹಾನಿಯಾಗಿವೆ.
ಪಕ್ಕದ ಚಾನೆಲ್ ತುಂಬಿ ಹರಿದಿದ್ದರಿಂದ ನೀರು ಬಡಾವಣೆಗೆ ನುಗ್ಗಿದೆ. ಚರಂಡಿ ನೀರು ಕೂಡ ಸರಾಗವಾಗಿ ಮುಂದೆ ಸಾಗದೆ ಇದ್ದಿದ್ದರಿಂದ ಮನೆಗಳಿಗೆ ನುಗ್ಗಿದೆ. ಇನ್ನು ಇಲ್ಲಿನ ರಾಜಾ ಕಾಲುವೆಯಲ್ಲಿ ಹೂಳು ತೆಗೆಸದೆ ಇರುವುದು ಕೂಡ ಜಲಾವೃತವಾಗಲು ಪ್ರಮುಖ ಕಾರಣ ಎಂದು ಕಾರ್ಪೊರೇಟರ್ ರೇಖಾ ರಂಗನಾಥ್ ಆಪಾದಿಸಿದರು.
ಸ್ಥಳಕ್ಕೆ ಕಾರ್ಪೊರೇಟರ್ ದೌಡು
ಮನೆಗಳು ಮುಳುಗಡೆ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ಕಾರ್ಪೊರೇಟರ್ ರೇಖಾ ರಂಗನಾಥ್, ಪತಿ ರಂಗನಾಥ್ ಅವರು ಸ್ಥಳಕ್ಕೆ ದೌಡಾಯಿಸಿದರು. ಸಂಕಷ್ಟಕ್ಕೆ ಸಿಲುಕಿದವರಿಗೆ ಕೂಡಲೆ ಊಟೋಪಚಾರದ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಇನ್ನು, ಚಾನೆಲ್’ನಿಂದ ನೀರು ಹೊರಗೆ ಹರಿದು ಹೋಗದಂತೆ ತಡೆಯಲು ಮರಳಿನ ಮೂಟೆಗಳನ್ನು ಇಡಿಸಲಾಯಿತು.
ಇದನ್ನೂ ಓದಿ – ಮಳೆ ಅವಾಂತರ 4 | ಶಿವಮೊಗ್ಗ ನೂರಡಿ ರಸ್ತೆಯಲ್ಲಿ ಒಂದಡಿಗಿಂತಲು ಹೆಚ್ಚು ನೀರು
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200