ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದ ರಂಗಾಯಣ, ರಂಗಬೆಳಕು ಹಾಗೂ ಕಡೆಕೊಪ್ಪಲ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ರಂಗ ಸಂಕ್ರಾಂತಿ ನಾಟಕೋತ್ಸವ-2026 (Drama Festival) ಅನ್ನು ಆಯೋಜಿಸಲಾಗಿದೆ. ಜನವರಿ 14 ರಿಂದ ಜನವರಿ 19 ರವರೆಗೆ ಒಟ್ಟು ಆರು ದಿನ ರಂಗ ಹಬ್ಬ ನಡೆಯಲಿದ್ದು, ಪ್ರತಿದಿನ ಸಂಜೆ 6:30ಕ್ಕೆ ನಗರದ ಅಶೋಕ ನಗರದಲ್ಲಿರುವ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಯಾವ್ಯಾವ ನಾಟಕ ಯಾವಾಗಿದೆ?
ಜನವರಿ 14 (ಬುಧವಾರ): ‘ಕಾಲಚಕ್ರ’ ಜಯವಂತ ದಳ್ವಿ ಅವರ ಮರಾಠಿ ಮೂಲದ ಈ ನಾಟಕವನ್ನು ಹೆಚ್.ಕೆ. ಕರ್ಕಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರ ವಿನ್ಯಾಸ ಮತ್ತು ನಿರ್ದೇಶನವನ್ನು ಹುಲಗಪ್ಪ ಕಟ್ಟಿಮನಿ ಅವರು ಮಾಡಿದ್ದಾರೆ. ಈ ನಾಟಕವನ್ನು ಕಲಬುರಗಿಯ ರಂಗಾಯಣದ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ.
ಜನವರಿ 15 (ಗುರುವಾರ): ‘ಕೂಡಲ್ಲ ಅಂದ್ರೆ ಕೂಡಲ್ಲ’ ದಾರಿಯೋ ಫೋ ಅವರ ಕಾಂಟ್ ಪೇ ವೋಂಟ್ ಪೇ ಆಧಾರಿತ ಈ ನಾಟಕದ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನವನ್ನು ಶಕೀಲ್ ಅಹ್ಮದ್ ನಿರ್ವಹಿಸಿದ್ದಾರೆ. ಶ್ರೀರಂಗಪಟ್ಟಣದ ‘ನಿದಿರ್ಗಂತ’ ತಂಡದವರು ಇದನ್ನು ಪ್ರದರ್ಶಿಸಲಿದ್ದಾರೆ.
ಜನವರಿ 16 (ಶುಕ್ರವಾರ): ‘ಕಂದಗಲ್ಲ ಭಾರತ’ ಶ್ರೀ ಕಂದಗಲ್ಲ ಹನುಮಂತರಾಯ ವಿರಚಿತ ಮಹಾಭಾರತ ನಾಟಕಗಳ ಆಧಾರಿತ ರಂಗರೂಪವಿದು. ಇದರ ರಂಗರೂಪ ಮತ್ತು ನಿರ್ದೇಶನವನ್ನು ಪ್ರಕಾಶ ಗರುಡ ಅವರು ಮಾಡಿದ್ದಾರೆ. ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು ಈ ನಾಟಕವನ್ನು ವೇದಿಕೆಗೆ ತರಲಿದ್ದಾರೆ.

ಜನವರಿ 17 (ಶನಿವಾರ): ‘ಅತ್ತೆಗೊಂದು ಕಾಲ ಸೊಸೆಗೊಂದು ಕಾಲ’ ಈ ನಾಟಕದ ರಚನೆ, ಪರಿಕಲ್ಪನೆ ಮತ್ತು ನಿರ್ದೇಶನವನ್ನು ಜಿ. ಪರಶುರಾಮ್, ಸೂರನಗದ್ದೆ ಅವರು ಮಾಡಿದ್ದಾರೆ. ಸಾಗರದ ಸೂರನಗದ್ದೆಯ ಶ್ರೀ ಬೀರೇಶ್ವರ ಕಲಾ ಬಳಗ ತಂಡದಿಂದ ಈ ಪ್ರದರ್ಶನ ನಡೆಯಲಿದೆ.
ಜನವರಿ 18 (ಭಾನುವಾರ): ‘ಮಹಾತ್ಮರ ಬರುವಿಕೆಗಾಗಿ’ ಆರ್.ಕೆ. ನಾರಾಯಣ್ ಅವರ ಇಂಗ್ಲಿಷ್ ಮೂಲದ ಕೃತಿಯನ್ನು ಬಿ.ಎನ್. ಮಂಗಳ ಅವರು ಕನ್ನಡಕ್ಕೆ ತಂದಿದ್ದಾರೆ. ಶ್ರೀಕಾಂತ್ ಎನ್.ವಿ. ಅವರ ನಿರ್ದೇಶನದಲ್ಲಿ ಕಾರ್ಕಳದ ಯಕ್ಷ ರಂಗಾಯಣದ ರೆಪರ್ಟರಿ ಕಲಾವಿದರು ಇದನ್ನು ಅಭಿನಯಿಸಲಿದ್ದಾರೆ.
ಜನವರಿ 19 (ಸೋಮವಾರ): ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’ ತೌಫಿಕ್-ಅಲ್-ಹಕೀಮ್ ಅವರ ಮೂಲ ನಾಟಕವನ್ನು ಎಂ.ಎಸ್.ಕೆ. ಪ್ರಭು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಿ.ಆರ್. ವೆಂಕಟರಮಣ ಐತಾಳ ಅವರ ನಿರ್ದೇಶನದಲ್ಲಿ ಕಾರ್ಕಳದ ಯಕ್ಷ ರಂಗಾಯಣ ತಂಡದಿಂದ ಈ ನಾಟಕ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ » ಹೊಸನಗರದ ಬಿದನೂರು ಮಾರಿಕಾಂಬಾ ಜಾತ್ರೆಗೆ ಸಿದ್ಧತೆ ಪೂರ್ಣ, ಯಾವ್ಯಾವ ದಿನ ಏನೇನು ಕಾರ್ಯಕ್ರಮವಿದೆ?
ಪ್ರತಿ ನಾಟಕಕ್ಕೆ ಪ್ರವೇಶ ದರ ತಲಾ ₹30 ನಿಗದಿಪಡಿಸಲಾಗಿದೆ. ಕಲಾಭಿಮಾನಿಗಳು ಈ ನಾಟಕೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಜೆ. ಹಾಗೂ ನಿರ್ದೇಶಕ ಪ್ರಸನ್ನ ಡಿ. ಸಾಗರ ಅವರು ತಿಳಿಸಿದ್ದಾರೆ.
LATEST NEWS
- ಕೋಟೆ ಮಾರಿಕಾಂಬ ಜಾತ್ರೆ, ದರ್ಶನ ಮುಗಿಸಿ ಹೊರಬಂದ ವೃದ್ಧೆಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

- ಶಿವಮೊಗ್ಗದ JNN ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್ಸ್, ಯಾವ್ಯಾವ ಸ್ಪರ್ಧೆಗಳಲ್ಲಿ ಯಾರೆಲ್ಲ ಗೆದ್ದಿದ್ದಾರೆ?

- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

About The Editor
ನಿತಿನ್ ಆರ್.ಕೈದೊಟ್ಲು





