4 ವರ್ಷದಲ್ಲಿ 14 ತಹಶೀಲ್ದಾರ್ ವರ್ಗಾವಣೆ, ಶಿವಮೊಗ್ಗದಲ್ಲಿ ನೌಕರರಿಂದ ಮೌನ ಹೋರಾಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 24 JANUARY 2023

SHIMOGA : ಸೊರಬ ತಾಲೂಕಿನಲ್ಲಿ 2018ರಿಂದ ಈವರೆಗೂ 14 ತಹಶೀಲ್ದಾರ್ಗಳ ವರ್ಗಾವಣೆ ಖಂಡಿಸಿ ರಾಜ್ಯ ಕಂದಾಯ ಇಲಾಖೆ (Revenue Department) ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

Protest-against-Tahasildhars-Tranfer

ನೌಕರರ ದಿಢೀರ್ ವರ್ಗಾವಣೆಯಿಂದ ಜನ ಸ್ನೇಹಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ನೌಕರರ (Revenue Department) ಕುಟುಂಬದ ಮೇಲೂ ಪರಿಣಾಮ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಸೊರಬ ತಾಲೂಕಿನಲ್ಲಿ ಪ್ರತಿ ತಿಂಗಳು ವರ್ಗಾವಣೆ ಆದೇಶಗಳು ಹೊರ ಬೀಳುತ್ತಿವೆ. ಬಜೆಟ್ ಪೂರ್ವ ಮತ್ತು ಚುನಾವಣೆ ಸಂದರ್ಭ ಯಾವುದೆ ವರ್ಗಾವಣೆ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ. ಹಾಗಿದ್ದೂ ಸೊರಬ ಶಾಸಕರ ಪತ್ರದ ಉಲ್ಲೇಖ ಹಾಕಿ ಶಿರಸ್ತೇದಾರ್, ರೆವಿನ್ಯೂ ಇನ್ಸ್ ಪೆಕ್ಟರ್, ಎಫ್.ಡಿ.ಎ ಒಬ್ಬರನ್ನು ಡೆಪ್ಯುಟೇಷನ್ ಮಾಡಲಾಗಿದೆ. ಕಳೆದ 4 ವರ್ಷದಲ್ಲಿ ಸೊರಬ ತಾಲೂಕಿನಲ್ಲಿ 14 ತಹಶೀಲ್ದಾರ್ ಅವರ ವರ್ಗಾವಣೆ ಮಾಡಲಾಗಿದೆ. ಹೀಗೆ ಅಕಾಲಿಕ ವರ್ಗಾವಣೆಯಿಂದ ಸುಗಮ ಆಡಳಿತಕ್ಕೆ ತೊಂದರೆಯಾಗುತ್ತಿದೆ’ ಎಂದು ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಆರೋಪಿಸಿದರು.

Revenue Department protest

‘ಕಂದಾಯ ಇಲಾಖೆಯಲ್ಲಿನ ಈ ಪರಿ ವರ್ಗಾವಣೆಯಾಗುತ್ತಿರುವುದನ್ನು ಕಂಡು ರಾಜ್ಯವೆ ಬೆಚ್ಚಿ ಬಿದ್ದಿದೆ. ತಹಶೀಲ್ದಾರ್ ಗಳು ಯಾವುದಾದರು ತಾಲೂಕಿಗೆ ಹೋಗುಲು ಹೆದರುವಂತಾಗಿದೆ. ಜನಪ್ರತಿನಿಧಿಗಳು ಎಲ್ಲಾ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ತಾಲೂಕು ಅಭಿವೃದ್ಧಿಯಾಗಲಿದೆ’ ಎಂದು ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಅವರು ತಿಳಿಸಿದರು.

kandaya2

ಸೊರಬ ತಾಲೂಕಿನಲ್ಲಿ ಅಧಿಕಾರಿಗಳ ಅಕಾಲಿಕ ವರ್ಗಾವಣೆ ನಿಲ್ಲಬೇಕು. ಅಲ್ಲದೆ ಈವರೆಗೂ ನಡೆದಿರುವ ವರ್ಗಾವಣೆಗಳ ವಿವರವನ್ನು ಪಡೆದು ಸರ್ಕಾರದ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

kandaya3

ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಉಮೇಶ್ ಕುಮಾರ್, ಖಜಾಂಚಿ ಮಹಾರುದ್ರಪ್ಪ ಸೇರಿದಂತೆ ಕಂದಾಯ ಇಲಾಖೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ, ಏನದು? ಕಾರಣವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment