ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 13 AUGUST 2023
SHIMOGA : ಅಪರಾಧ ಪ್ರಕರಣಗಳ ಉತ್ತಮ ತನಿಖೆಗಾಗಿ ರಾಜ್ಯದ ಐವರು ಪೊಲೀಸ್ ಅಧಿಕಾರಿಗಳಿಗೆ 2023ನೇ ಸಾಲಿನ ಕೇಂದ್ರ ಗೃಹ ಸಚಿವರ ಪದಕ ನೀಡಲಾಗಿದೆ. ಈ ಪೈಕಿ ಶಿವಮೊಗ್ಗದ ಇನ್ಸ್ಪೆಕ್ಟರ್ಗು (Inspector) ಪದಕ ಲಭಿಸಿದೆ.
ಶಿವಮೊಗ್ಗ ವಿನೋಬನಗರ ಠಾಣೆ ಇನ್ಸ್ಪೆಕ್ಟರ್ ರುದ್ರೇಗೌಡ ಆರ್.ಪಾಟೀಲ್ ಅವರಿಗೆ ಪದಕ ನೀಡಲಾಗಿದೆ.
ಯಾವ ತನಿಖೆಗೆ ಪದಕ ಲಭಿಸಿದೆ?
ರುದ್ರೇಗೌಡ ಆರ್.ಪಾಟೀಲ್ ಅವರು ಚನ್ನಗರಿ ಸರ್ಕಲ್ನಲ್ಲಿ ಕೆಲಸ ಮಾಡತ್ತಿದ್ದಾಗ ಸೂಳೆಕೆರೆ ಹತ್ತಿರದ ಗುಡ್ಡದ ಕಾಲುವೆ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಕೊಲೆ ಹೇಗಾಗಿತ್ತು ಎಂಬುದು ಸುಳಿವು ಸಿಗದಂತಾಗಿತ್ತು. ಶ್ವಾನದಳ ಉಪಯೋಗಿಸಿ ತನಿಖೆ ನಡೆಸಿದಾಗ 11 ಕಿ.ಮೀ ದೂರದಲ್ಲಿ ಒಂದು ಸುಳಿವು ಸಿಕ್ಕಿತ್ತು.
ಇದನ್ನೂ ಓದಿ – ರಾತ್ರೋರಾತ್ರಿ ರೆಸಾರ್ಟ್ ಮೇಲೆ 50ಕ್ಕೂ ಹೆಚ್ಚು ಪೊಲೀಸರಿಂದ ದಾಳಿ, ಏನೇನೆಲ್ಲ ಸಿಕ್ತು?
ವಿಚಾರಣೆ ತೀವ್ರಗೊಳಿಸಿದಾಗ ಅಪರಿಚಿತ ವ್ಯಕ್ತಿ ಆ ಸ್ಥಳಕ್ಕೆ ಬಂದಿರುವ ಮಾಹಿತಿ ಲಭಿಸಿತ್ತು. ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡಿದ್ದರು. ಸುಳಿವೆ ಇಲ್ಲದೆ ಪ್ರಕರಣ ಭೇದಿಸಿದ್ದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
.jpeg)
LATEST NEWS
- ಶಿವಮೊಗ್ಗದಲ್ಲಿ ಬಂಜಾರ ಮುಖಂಡರು ಪೊಲೀಸ್ ವಶಕ್ಕೆ, ಸಭೀಕರಿಲ್ಲದೆ ನಡೆಯಿತು ಸೇವಾಲಾಲ್ ಜಯಂತಿ

- ಶಿವಮೊಗ್ಗದಲ್ಲಿ ಕೆಎಎಸ್ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ, ಆಗಿದ್ದೇನು?

- ಬಿಳಕಿಯಲ್ಲಿ ಅಂಗನವಾಡಿ ಸಹಾಯಕಿ ಮೃತದೇಹ ಪತ್ತೆ

- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

About The Editor
ನಿತಿನ್ ಆರ್.ಕೈದೊಟ್ಲು






