SHIVAMOGGA LIVE NEWS | 11 ಮಾರ್ಚ್ 2022
ನೀರಿನ ಕಂದಾಯ ಪಾವತಿಗೆ ಶಿವಮೊಗ್ಗ ನಗರದಾದ್ಯಂತ ವಿಶೇಷ ಕೌಂಟರ್ ಆರಂಭಿಸಲಾಗುತ್ತಿದೆ. ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗವು ಕೌಂಟರ್ ಪ್ರಾರಂಭಿಸುತ್ತಿದೆ. ಮಾರ್ಚ್ 13ರಂದು 2021-22 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ಈ ಕೌಂಟರ್’ಗಳನ್ನು ತೆಗೆಯಲಾಗುತ್ತಿದೆ.
ಎಲ್ಲೆಲ್ಲಿ ಇರುತ್ತೆ ಕೌಂಟರ್?
ಸೀಗೆಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ, ಗೋಪಾಳ 100 ಅಡಿ ರಸ್ತೆ, ಮೋರ್ ಎದುರು, ಕೋಟೆ ರಸ್ತೆ ಅರಮನೆ ಎದುರು, ಪದ್ಮಾ ಟಾಕೀಸ್ ಎದುರು ಗೋಪಾಳ ಮುಖ್ಯರಸ್ತೆ, ಶಿವನ ಪಾರ್ಕ್ ಹತ್ತಿರ ಸಿದ್ದೇಶ್ವರನಗರಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್ಗಳನ್ನು ತೆರೆಯಲಾಗಿದೆ.
ನೀರಿನ ಸಂಪರ್ಕ ಕಡಿತದ ಎಚ್ಚರಿಕೆ
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200