ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021
ತಾಳಗುಪ್ಪ ಸಮೀಪ ರೈಲ್ವೆ ಹಳಿ ಜಲಾವೃತವಾಗಿದೆ. ಹಾಗಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಲಾಗಿದೆ.
ಇನ್ನು ಇವತ್ತು ರಾತ್ರಿ ತಾಳಗುಪ್ಪದಿಂದ ಶಿವಮೊಗ್ಗ, ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ತೆರಳಬೇಕಿದ್ದ 06228 ಸಂಖ್ಯೆಯ ರೈಲನ್ನು ಸಂಚಾರವನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಮೈಸೂರು ವಿಭಾಗದ ಸೀನಿಯರ್ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಇಂಟರ್ಸಿಟಿ ರೈಲು ಶಿವಮೊಗ್ಗದಲ್ಲೆ ಸ್ಟಾಪ್
ಬೆಂಗಳೂರು ತಾಳಗುಪ್ಪ (ರೈಲು ಸಂಖ್ಯೆ 06529) ರೈಲು ಸಂಚಾರವನ್ನು ಶಿವಮೊಗ್ಗದವರೆಗೆ ಸೀಮಿತಗೊಳಿಸಲಾಗಿದೆ. ಜುಲೈ 23ರಂದು ಶಿವಮೊಗ್ಗದಿಂದ ತಾಳಗುಪ್ಪಗೆ ರೈಲು ಸಂಚರಿಸುವುದಿಲ್ಲ.
ಜುಲೈ 24ರಂದು ತಾಳಗುಪ್ಪ ಬೆಂಗಳೂರು (ರೈಲು ಸಂಖ್ಯೆ 06530) ರೈಲು ಸಂಚಾರ ಶಿವಮೊಗ್ಗದಿಂದ ಶುರುವಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200