ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಡಿಸೆಂಬರ್ 2020
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಶಿವಮೊಗದಲ್ಲಿ ವಿದ್ಯಾರ್ಥಿ ಕಾಂಗ್ರೆಸ್ (ಎನ್ಎಸ್ಯುಐ) ವತಿಯಿಂದ ತಟ್ಟೆ ಬಡಿಯುವ ಚಳವಳಿ ನಡೆಸಲಾಯಿತು. ಭಾರತೀಯ ಕಿಸಾನ್ ಯುನಿಯನ್ ಕರೆ ಹಿನ್ನೆಲೆಯಲ್ಲಿ ಈ ಚಳವಳಿ ನಡೆಸಲಾಯಿತು.
ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ತಟ್ಟೆ ಬಡಿಯುವ ಚಳವಳಿ ನಡೆಸಲಾಯಿತು.
ಮನ್ ಕಿ ಬಾತ್ ವೇಳೆ ಚಳವಳಿ
ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ಮನ್ ಕೀ ಬಾತ್ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ವೇಳೆ ತಟ್ಟೆ ಬಡಿಯುವ ಚಳವಳಿ ನಡೆಸುವಂತೆ ಭಾರತೀಯ ಕಿಸಾನ್ ಯುನಿಯನ್ ಕರೆ ನೀಡಿದೆ. ಅದರಂತೆ ದೇಶಾದ್ಯಂತ ಈ ಚಳವಳಿ ನಡೆಯುತ್ತಿದೆ.
ಮೂರು ಕಾಯ್ದೆಗಳಿಗೆ ಸರ್ಕಾರ ತಂದಿರುವ ತಿದ್ದುಪಡಿ ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಟ್ಟೆ ಬಡಿಯುವ ಚಳವಳಿ ಮೂಲಕ ಎನ್ಎಸ್ಯುಐ ಕಾರ್ಯಕರ್ತರು ರೈತರಿಗೆ ಬೆಂಬಲ ಸೂಚಿಸಿದರು.
ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷ ಚೇತನ್, ಜಿಲ್ಲಾಧ್ಯಕ್ಷ ಬಾಲಾಜಿ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಧುಸೂದನ್, ಮೊಹಮ್ಮದ್ ನಿಹಾಲ್, ಎನ್ಎಸ್ಯುಐ ಕಾರ್ಯಾಧ್ಯಕ್ಷ ವಿನಯ್, ನಗರಾಧ್ಯಕ್ಷ ವಿಜಯ್, ಗ್ರಾಮಾಂತರ ಅಧ್ಯಕ್ಷ ರವಿ ಸೇರಿದಂತೆ ಹಲವರು ಇದ್ದರು.