ಶಿವಮೊಗ್ಗ ಲೈವ್.ಕಾಂ | SHIMOGA | 10 ಅಕ್ಟೋಬರ್ 2019
ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊತ್ತ ಸಾಗರ್ ಜೊತೆ ಫೋಟೊಗೆ ಡಿಮಾಂಡಪ್ಪೋ ಡಿಮಾಂಡು. ಸಂಸದರು, ಅಧಿಕಾರಿಗಳನ್ನು ಫೋಟೊಗೆ ಸೆಳೆದ ಸಾಗರ್.
ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊತ್ತ ಸಾಗರ, ಭಾನುಮತಿ ಮತ್ತು ಗಂಗೆ ಆನೆಗಳು ಸಕ್ರೆಬೈಲು ಬಿಡಾರಕ್ಕೆ ಹಿಂತಿರುಗಿವೆ. ಸದ್ಯ ಅನೆಗಳು ರೆಸ್ಟ್ ಮೂಡ್’ನಲ್ಲಿವೆ. ಆದರೆ ಬಿಡಾರಕ್ಕೆ ಬರುತ್ತಿರುವ ಪ್ರವಾಸಿಗರು ಮಾತ್ರ ಸಾಗರ್ ಜೊತೆಗೆ ಸೆಲ್ಫಿ ಮತ್ತು ಫೋಟೊಗೆ ಮುಗಿಬೀಳುತ್ತಿದ್ದಾರೆ.
ಸಂಸದರನ್ನು ಸೆಳೆದ ಸಾಗರ್
ವನ್ಯಜೀವಿ ಸಪ್ತಾಹದ ಅಂಗವಾಗಿ ಸಕ್ರೆಬೈಲು ಆನೆ ಬಿಡಾರದ ಲೋಗೋ ಲಾಂಚ್ ಮಾಡಲು ಬಂದಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಸಾಗರ್ ತನ್ನತ್ತ ಸೆಳೆದುಕೊಂಡ. ರಾಘವೇಂದ್ರ ಸಾಗರ್ ಆನೆಯ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ತಮ್ಮ ಮಗನನ್ನು ಕರೆದು ನಿಲ್ಲಿಸಿಕೊಂಡು ಫೋಟೊ ತೆಗೆಸಿಕೊಂಡರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]