SHIVAMOGGA LIVE NEWS | 5 ಏಪ್ರಿಲ್ 2022
ರಿಪ್ಪನ್ ಪೇಟೆ ಸಮೀಪ ಕುಮದ್ವತಿ ನದಿ ನಿರಿಗೆ ವಿಷ ಬೆರೆಸಲಾಗಿದೆ. ಇದರಿಂದ ನದಿಯಲ್ಲಿನ ಮೀನುಗಳು ಸಾವನ್ನಪ್ಪಿದ್ದು, ನೀರಿನ ಮೇಲೆ ತೇಲುತ್ತಿವೆ.
ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿಯಲ್ಲಿ ದುಷ್ಕರ್ಮಿಗಳು ಕುಮದ್ವತಿ ನದಿಗೆ ವಿಷ ಬೆರೆಸಿದ್ದಾರೆ. ಮೀನುಗಳು ಸಾವನ್ನಪ್ಪಿವೆ.
ಬೇಸಿಗೆ ಆಗಿರುವುದರಿಂದ ನದಿ ನೀರು ಹರಿಯದೆ ತಗ್ಗು, ಗುಂಡಿಗಳಲ್ಲಿ ನಿಂತಿದೆ. ಜಲಚರ ಪ್ರಾಣಿಗಳು ಹೊಂಡಗಳ ನೀರನ್ನು ಆಶ್ರಯಿಸಿ ಜೀವಿಸುತ್ತಿವೆ. ಆದರೆ ಕೆಲವು ಕಿಡಿಗೇಡಿಗಳು ನೀರಿಗೆ ವಿಷ ಬೆರೆಸಿರುವುದರಿಂದ ಮೀನುಗಳ ಸಹಿತ ಇತರ ಪ್ರಾಣಿಗಳು ಮೃತಪಟ್ಟಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200