SHIVAMOGGA LIVE NEWS | 27 MARCH 2023
SHIKARIPURA : ಒಳ ಮೀಸಲಾತಿ ವಿರೋಧಿ ಹೋರಾಟದ ವೇಳೆ ಕಲ್ಲು ತೂರಾಟ ಸೇರಿ ಅಹಿತರ ಘಟನೆಗಳ ಕುರಿತು, ಪೊಲೀಸ್ ಇಲಾಖೆ (Police) ತನಿಖೆ ತೀವ್ರಗೊಳಿಸಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ (Police) ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು, ‘ಶಿಕಾರಿಪುರದಲ್ಲಿನ ಘಟನೆ ಕುರಿತು ಈವರೆಗೆ 4 ಪ್ರಕರಣ ದಾಖಲು ಮಾಡಲಾಗಿದೆ. ಮೂವರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.
ಇದನ್ನೂ ಓದಿ – ತಾಂಡಾಗಳ ಮುಂದೆ ಎಚ್ಚರಿಕೆಯ ಫ್ಲೆಕ್ಸ್ ಪ್ರತ್ಯಕ್ಷ, ಏನಿದೆ? ಎಚ್ಚರಿಕೆ ಯಾರಿಗೆ?
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇವತ್ತು ಶಿಕಾರಿಪುರಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ – ಯಡಿಯೂರಪ್ಪ ಮನೆ ಮೇಲೆ ದಾಳಿ, ಇಡೀ ದಿನ ಪಟ್ಟಣದಲ್ಲಿ ಏನೇನಾಯ್ತು? ಜನರ ಆಕ್ರೋಶಕ್ಕೆ ಕಾರಣವೇನು?