SHIVAMOGGA LIVE NEWS | CRIME | 23 ಮೇ 2022
ತುಂಗಾ ನದಿಯಲ್ಲಿ ಪೊಲೀಸರು ದಿಢೀರ್ ಶೋಧ ಕಾರ್ಯಾಚರಣೆ ನಡೆಸಿದರು. ಟಾರ್ಚ್ ಬಳಸಿ ಸೇತುವೆ ಕೆಳಭಾಗದಲ್ಲಿ ಹುಡುಕಾಟ ಮಾಡಿದರು. ಇದನ್ನು ನೋಡಲು ಸೇತುವೆ ಮೇಲೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.
ಹೊಳೆ ಬಸ್ ಸ್ಟಾಪ್ ಬಳಿ ತುಂಗಾ ನದಿ ಸೇತುವೆ ಕೆಳಗೆ ಶೋಧ ಕಾರ್ಯಾಚರಣೆ ನಡೆಸಲಾಯಿತು. ಹತ್ತಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಟಾರ್ಚ್ ಬಳಸಿ ಹುಡುಕಾಟ ಮಾಡುತ್ತಿದ್ದರು. ರೈಲ್ವೆ ಸೇತುವೆ ಮೇಲ್ಭಾಗದಲ್ಲಿಯೂ ಹುಡುಕಾಟ ನಡೆಯಿತು.
ಇನ್ನು, ಪೊಲೀಸರ ಶೋಧ ಕಾರ್ಯ ವೀಕ್ಷಿಸಲು ತುಂಗಾ ನದಿ ಸೇತುವೆ ಮೇಲೆ ಜನ ಸೇರಿದ್ದಾರೆ. ವಾಹನಗಳನ್ನು ನಿಲ್ಲಿಸಿ ಬಂದು ಕಾರ್ಯಾಚರಣೆ ವೀಕ್ಷಿಸುತ್ತಿದ್ದಾರೆ. ಇದರಿಂದಾಗಿ ಹೊಳೆ ಬಸ್ ಸ್ಟಾಪ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.
VIDEO NEWS
ಇದನ್ನೂ ಓದಿ – ಶಿವಮೊಗ್ಗದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಭದ್ರಾವತಿಯ ಮಹಾತಾಯಿ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.