ಕರೋನ ಸಂಕಷ್ಟ ಕಾಲದಲ್ಲೂ ರಾಜ್ಯದಲ್ಲಿ ಹಣ ಲೂಟಿ, ಪರಿಹಾರ ತಲುಪಿದೆಯಾ ಅಂತಾ ಕಾಂಗ್ರೆಸ್‌ನಿಂದ ಸರ್ವೇ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಮೇ 2020

ಕರೋನ ಬಂದ ಸಂಕಷ್ಟ ಕಾಲದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನು, ರಾಜ್ಯ ಸರ್ಕಾರ ಕರೋನ ಪರೀಕ್ಷೆಗೆ ಬಳಕೆ ಮಾಡುವ ಪಿಪಿಇ ಕಿಟ್‍ಗಳು, ಸ್ಯಾನಿಟೈಸರ್, ವೆಂಟಿಲೇಟರ್‍ಗಳ ಖರೀದಿಯಲ್ಲಿ ಭಾರಿ ದೊಡ್ಡ ಭ್ರಷ್ಟಾಚಾರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್‍.ಎಸ್.ಸುಂದರೇಶ್, ವಲಸೆ ಕಾರ್ಮಿಕರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಈ ಕುರಿತು ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಈ ನಡುವೆ ಹಲವು ಘೋಷಣೆಗಳನ್ನು ಮಾಡಲಾಗಿದೆ. ಆದರೆ ಯಾವುದೇ ಹಣ ಜನರಿಗೆ ತಲುಪಿಲ್ಲ ಎಂದು ಆರೋಪಿಸಿದರು.

ಹಣ ಬಂದಿದೆಯೋ ಇಲ್ಲವೋ ಸರ್ವೆ

ರಾಜ್ಯ ಮತ್ತು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಪರಿಹಾರದ ಹಣ ಜನರಿಗೆ ತಲುಪಿದೆಯೋ ಇಲ್ಲವೊ ಅನ್ನುವುದನ್ನು ಸರ್ವೆ ಮಾಡಿದ್ದೇವೆ. ಆದರೆ ಈತನಕ ಯಾರಿಗೂ ಒಂದು ರೂಪಾಯಿ ಬಂದಿಲ್ಲ ಎಂದು ಸುಂದರೇಶ್ ಟೀಕಿಸಿದರು.

ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ

ಕರೋನ ಪರೀಕ್ಷೆಗೆ ಬಳಕೆ ಮಾಡುವ ಪಿಪಿಇ ಕಿಟ್‍ಗಳು, ಸ್ಯಾನಿಟೈಸರ್, ವೆಂಟಿಲೇಟರ್‍ಗಳ ಖರೀದಿಯಲ್ಲಿ ಭಾರಿ ದೊಡ್ಡ ಭ್ರಷ್ಟಾಚಾರವಾಗಿದೆ. ಗುಜರಾತ್, ತಮಿಳುನಾಡು ಸೇರಿದಂತೆ ವಿವಿಧೆಡೆಯ ನಕಲಿ ಕಂಪನಿಗಳು, ಮುಳುಗಿ ಹೋಗಿರುವ ಕಂಪನಿಗಳಿಂದ ಹಲವು ವಸ್ತುಗಳನ್ನು ಖರೀದಿಸಲಾಗಿದೆ. 2007ರಲ್ಲಿ ಉತ್ಪಾದನೆಯಾದ ವೆಂಟಿಲೇಟರನ್ನು ನಾಲ್ಕು ಪಟ್ಟು ಹೆಚ್ಚು ಹಣಕ್ಕೆ ಖರೀದಿ ಮಾಡಲಾಗಿದೆ. ಈ ವೆಂಟಿಲೇಟರ್‍ಗಳು ಹಲವು ವರ್ಷ ಬಳಕೆಯಾಗಿವೆ ಎಂದು ವರದಿಯಾಗಿದೆ. ಸಂಕಷ್ಟದ ಸ್ಥಿತಿಯಲ್ಲೂ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment