SHIVAMOGGA LIVE NEWS | 2 APRIL 2024
ELECTION SPECIAL : ಇಡೀ ದೇಶದ ಸಮಸ್ಯೆಗಳ ಪರಿಹಾರಕ್ಕೆ ಪ್ರಮುಖ ವೇದಿಕೆ ಲೋಕಸಭೆ. ಇಲ್ಲಿ ಮಾತನಾಡಲು, ತಮ್ಮ ಕ್ಷೇತ್ರ ವ್ಯಾಪ್ತಿಯ ಸಮಸ್ಯೆ ಕುರಿತು ಪ್ರಶ್ನಿಸಲು ಸಂಸದರಿಗೆ ಅವಕಾಶ ದೊರೆಯುವುದು ಅಷ್ಟು ಸುಲಭವಲ್ಲ. ಶಿವಮೊಗ್ಗ ಕ್ಷೇತ್ರದ ಮೊದಲ ಸಂಸದ ಕೆ.ಜಿ.ಒಡೆಯರ್ ಅವರು ಸಂಸತ್ತಿನಲ್ಲಿ ಮೊದಲ ಬಾರಿ ಪ್ರಶ್ನೆ ಕೇಳಿದ್ದು 1953ರ ಸೆಪ್ಟೆಂಬರ್ 9ರಂದು.
ಮೊದಲ ಪ್ರಶ್ನೆ ಅಡಿಕೆ ಬಗ್ಗೆ
1950 ರಿಂದ 1953ರವರೆಗೆ ಭಾರತದಲ್ಲಿ ಉತ್ಪಾದನೆಯಾದ ಅಡಿಕೆ ಪ್ರಮಾಣವೆಷ್ಟು? ಈ ಅವಧಿಯಲ್ಲಿ ಸರ್ಕಾರ ಆಮದು ಮಾಡಿಕೊಂಡ ಅಡಿಕೆ ಎಷ್ಟು? ದೊರೆತ ಆಮದು ಶುಲ್ಕವೆಷ್ಟು? ಎಂದು ಶಿವಮೊಗ್ಗ ಸಂಸದ ಕೆ.ಸಿ.ಒಡೆಯರ್ ಅವರು ವಾಣಿಜ್ಯ ಮತ್ತು ಕೈಗಾರಿಕ ಸಚಿವರನ್ನು ಪ್ರಶ್ನಿಸಿದ್ದರು.
1950ರಲ್ಲಿ 4.43 ಕೋಟಿ ರೂ., 1951ರಲ್ಲಿ 4.74 ಕೋಟಿ ರೂ. 1952ರಲ್ಲಿ 3.68 ಕೋಟಿ ರೂ. ಆಮದು ಶುಲ್ಕ ಲಭಿಸಿದೆ. ಈ ಅವಧಿಯಲ್ಲಿ ಅಂದಾಜು 10.70 ಸೆಂಟಲ್ ವೇಯ್ಟ್ನಷ್ಟು ಅಡಿಕೆ ಆಮದು ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಪ್ರತಿ ವರ್ಷ ಸರಾಸರಿ 22 ಲಕ್ಷ ಮೌಂಡ್ನಷ್ಟು ಅಡಿಕೆ ಉತ್ಪಾದನೆಯಾಗುತ್ತಿದೆ ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಕರ್ಮಾರ್ಕರ್ ಉತ್ತರಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದ ಮೊದಲ ಸಂಸದ ಯಾರು ಗೊತ್ತಾ? ಬ್ರಿಟೀಷರಿಗೆ ಅವರನ್ನು ಕಂಡರೆ ಮುಖ ಕೆಂಪಾಗುತ್ತಿದ್ದದ್ದು ಯಾಕೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200