ಶಿವಮೊಗ್ಗ ಲೈವ್.ಕಾಂ | SHIMOGA | 1 ಫೆಬ್ರವರಿ 2020
ಅನುಪಿನಕಟ್ಟೆಯ ಕಸ ವಿಲೇವಾರಿ ಘಟಕದಿಂದ ಪುರದಾಳು ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ ಇವತ್ತು ಗುದ್ದಲಿ ಪೂಜೆ ನೆರವೇರಿಸಲಾಯಿತು. ಆದರೆ ಈ ವೇಳೆ ಫ್ಲೆಕ್ಸ್’ನಲ್ಲಿ ಫೋಟೊ ಬಳಸದೆ ಇರುವುದಕ್ಕೆ ಶಿವಮೊಗ್ಗದ ಮಾಜಿ ಮೇಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಮಾಜಿ ಮೇಯರ್ ಲತಾ ಗಣೇಶ್, ಮಾಜಿ ಉಪ ಮೇಯರ್ ಚನ್ನಬಸಪ್ಪ ಅವರು ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2.45 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
ಇನ್ನು ಕಾಮಗಾರಿಯ ಗುದ್ದಲಿ ಪೂಜೆ ಸ್ಥಳದಲ್ಲಿ ಹಾಕಲಾಗಿದ್ದ ಫ್ಲೆಕ್ಸ್’ನಲ್ಲಿ, ಮಾಜಿ ಮೇಯರ್ ಲತಾ ಗಣೇಶ್ ಅವರ ಭಾವಚಿತ್ರ ಮಾಯವಾಗಿತ್ತು. ಇದು ಲತಾ ಗಣೇಶ್ ಅವರ ಅಸಮಾಧಾನಕ್ಕೆ ಕಾರಣವಾಯಿತು. ತಮ್ಮ ಅವಧಿಯಲ್ಲಿ ಕಾಮಗಾರಿಗೆ ಹಣ ಮಂಜೂರಾಗಿದೆ. ಆದರೆ ಫ್ಲೆಕ್ಸ್’ನಲ್ಲಿ ತಮ್ಮ ಹೊರತು ಉಳಿದೆಲ್ಲರ ಭಾವಚಿತ್ರವಿದೆ ಎಂದು ಸಿಟ್ಟಾದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]