ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಅಕ್ಟೋಬರ್ 2020
ಶಿವಮೊಗ್ಗದಲ್ಲಿ ಕಳೆದ ಎರಡು ದಿನದಿಂದ ಭಾರಿ ಮಳೆಯಾಗುತ್ತಿದೆ. ಜೋರು ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದೆ. ಹಲವು ಕಡೆ ರಸ್ತೆಗಳು ಜಲಾವೃತವಾಗಿವೆ.
ಬಾಲರಾಜ ಅರಸ್ ರಸ್ತೆಯಿಂದ ದುರ್ಗಿಗುಡಿ ಕಡೆಗೆ ಬರುವ ಕಾಂಗ್ರೆಸ್ ಜಿಲ್ಲಾ ಕಚೇರಿ ಇರುವ ರಸ್ತೆಯಲ್ಲಿ ಚರಂಡಿ ತುಂಬಿ ಹರಿದಿದೆ. ಇದರಿಂದ ರಸ್ತೆ ಸಂಪುರ್ಣವಾಗಿ ಜಲವೃತವಾಗಿತ್ತು. ಮಳೆ ನಿಂತು ನೀರು ಸರಾಗವಾಗಿ ಹರಿದು ಹೋಗುವವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಗಿತ್ತು.
ಆರ್ಎಂಎಲ್ ನಗರ ಸೇರಿದಂತೆ ನಗರದ ವಿವಿಧೆಡೆ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.
ಇವತ್ತು ಮಧ್ಯಾಹ್ನ ಸುಮಾರು ಒಂದು ಗಂಟೆ ಹೊತ್ತು ಜೋರು ಮಳೆಯಾಗಿದೆ. ಕಳೆದೆರಡು ದಿನದಿಂದ ಜಿಲ್ಲೆಯಾದ್ಯಂತ ಮಳೆ ನಿರಂತರವಾಗಿ ಸುರಿಯುತ್ತಿದೆ.
ರೈತರಲ್ಲಿ ಆತಂಕ
ಜೋರು ಮತ್ತು ನಿರಂತರ ಮಳೆಯಾಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಜೋಳ, ಹತ್ತಿ, ಶುಂಠಿ, ಅಡಿಕೆ ಬೆಳೆ ಹಾನಿಯಾಗುವ ಆತಂಕವಿದೆ. ಇದು ರೈತರನ್ನು ಕಂಗೆಡಿಸಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]