ಶಿವಮೊಗ್ಗ ಲೈವ್.ಕಾಂ |SHIMOGA NEWS | 2 DECEMBER 2020
ಮನೆ ದಾರಿಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ ಮಾಡಿರುವುದರಿಂದ ಮನೆಗೆ ಹೋಗಲು ದಾರಿಯಿಲ್ಲದೇ ಕುಟುಂಬವೊಂದು ಬೀದಿಗೆ ಬಿದ್ದಿದೆ.
ನವೆಂಬರ್ 23ರಿಂದ ಮನೆಗೆ ಹೋಗಲು ಸಾಧ್ಯವಾಗದೇ ಬಸ್ ನಿಲ್ದಾಣದಲ್ಲೇ ಆಶ್ರಯ ಪಡೆದುಕೊಂಡಿರುವ ಬಡ ಕುಟುಂಬದವರು ಇವತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗುರುಪುರ ಇಂದಿರಾ ಬಡಾವಣೆಯ ಸಾಕಮ್ಮ ಕುಟುಂಬದವರು ಧರಣಿ ನಡೆಸಿದರು. ನಿದಿಗೆ ಹೋಬಳಿ ಇಸ್ಲಾಪುರ ಗ್ರಾಮದ ಸ.ನಂ.29ರಲ್ಲಿ ವಾಸವಾಗಿದ್ದಾರೆ. ತಹಶೀಲ್ದಾರ್ ಕಚೇರಿಯಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ ನಿಗಮದ ಅನ್ವಯ ಹಕ್ಕುಪತ್ರ ನೀಡಲಾಗಿದೆ ಎಂದು ಧರಣಿ ನಿರತರು ತಿಳಿಸಿದರು.
ನವೆಂಬರ್ 22 ರಂದು ಮನೆಗೆ ಹೋಗುವ ದಾರಿಗೆ ಅಡ್ಡಲಾಗಿ ಲಕ್ಷ್ಮಮ್ಮ ಎಂಬುವರು ಕಾಂಪೌಂಡ್ ನಿರ್ಮಿಸಿದ್ದಾರೆ. 25 ವರ್ಷಗಳಿಂದ ವಾಸವಾಗಿರುವ ತಮಗೆ ಮನೆಗೆ ಹೋಗಲು ದಾರಿಯಿಲ್ಲದೇ ಸಮಸ್ಯೆಯಾಗಿದೆ. ಮನೆಗೆ ವಿದ್ಯುತ್, ನೀರು ಸಂಪರ್ಕವನ್ನು ಇದೇ ರಸ್ತೆಗೆ ಹೊಂದಿಕೊಂಡಂತೆ ಪಡೆಯಲಾಗಿದೆ. ಈ ಓಣಿ ರಸ್ತೆಯಲ್ಲದೇ ವಾಸದ ಮನೆಗೆ ಹೋಗಲು ಯಾವುದೇ ಮಾರ್ಗ ಇಲ್ಲ. ಆದ್ದರಿಂದ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಧರಿಣನಿರತ ಸಾಕಮ್ಮ ಶೇಷಗಿರಿ ಕುಟುಂಬದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]