SHIVAMOGGA LIVE NEWS | 26 DECEMBER 2022
ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹಿಂದೂ ಹರ್ಷ ಮನಗೆ (hindu harsha house) ಸಂಸದ ಸಾಧ್ವಿ ಪ್ರಜ್ಞಾ ಸಿಂಗ್ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಕಳೆದ ರಾತ್ರಿ ಸೀಗೆಹಟ್ಟಿಯಲ್ಲಿರುವ ಹರ್ಷ ಮನೆಗೆ ತೆರಳಿ, ಬಹು ಹೊತ್ತು ಕುಟುಂಬದೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಫೇಸ್ ಬುಕ್ ಲೈವ್ ಮೂಲಕ ಹರ್ಷ ಕುಟುಂಬವನ್ನು ತಮ್ಮ ಬೆಂಬಲಿಗರಿಗೆ ಪರಿಚಿಯಿಸಿದರು.
ಹಿಂದೂ ಜಾಗರಣಾ ವೇದಿಕೆ ಪ್ರಾಂತೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಹರ್ಷ ಮನೆಗೆ ಭೇಟಿ ನೀಡಿದ್ದರು. ಹರ್ಷನ ತಾಯಿ ಪದ್ಮಾ, ಸಹೋದರಿ ಅಶ್ವಿನಿ ಮತ್ತು ಕುಟುಂಬದೊಂದಿಗೆ ಚರ್ಚೆ ನಡೆಸಿದರು.
ಫೇಸ್ ಬುಕ್ ಲೈವ್ ಮಾಡಿದ ಸಾಧ್ವಿ
ಇನ್ನು, ಹರ್ಷ ಮನೆಯಿಂದಲೆ (hindu harsha house) ಸಾಧ್ವಿ ಪ್ರಜ್ಞಾ ಸಿಂಗ್ ಅವರು ತಮ್ಮ ಖಾತೆಯ ಮೂಲಕ ಫೇಸ್ ಬುಕ್ ಲೈವ್ ಮಾಡಿದರು. ಈ ವೇಳೆ ಹರ್ಷನ ಕುಟುಂಬದವರನ್ನ ಪರಿಚಯಿಸಿದ ಸಾಧ್ವಿ ಪ್ರಜ್ಞಾ ಸಿಂಗ್, ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದವರು ಎಂದಿಗು ಸಾವನ್ನಪ್ಪುವುದಿಲ್ಲ. ಅವರು ಸದಾ ಜೀವಂತವಾಗಿರುತ್ತಾರೆ. ಹಿಂದೂಗಳೆಲ್ಲರು ಅವರೊಂದಿಗೆ ಇದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಾಧ್ವಿ ಗುಡುಗು, ಸಮ್ಮೇಳನದಲ್ಲಿ ಪ್ರಜ್ಞಾ ಸಿಂಗ್ ಭಾಷಣದ ಟಾಪ್ 12 ಪಾಯಿಂಟ್
ಬಲಿದಾನ ನೀಡಿದ ಕುಟುಂಬ ಒಬ್ಬಂಟಿಯಲ್ಲ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸಾಧ್ವಿ ಪ್ರಜ್ಞಾ ಸಿಂಗ್ ಅವರು, ದೇಶಕ್ಕಾಗಿ, ಧರ್ಮಕ್ಕಾಗಿ ಒಬ್ಬ ಹಿಂದೂ ಪ್ರಾಣ ಅರ್ಪಣೆ ಮಾಡಿದಾಗ ಹಿಂದೂ ಜಾಗೃತನಾಗುತ್ತಾನೆ. ಈಗ ಪ್ರತಿ ಹಿಂದು ಕೂಡ ಹರ್ಷನಾಗಿ ಈ ಕುಟುಂಬದ ನೆರವಿಗೆ ನಿಂತಿದ್ದಾನೆ. ಬಲಿದಾನ ನೀಡಿದ ಕುಟುಂಬದವರು ಎಂದೂ ಒಬ್ಬಂಟಿಯಲ್ಲ. ಅವರ ಮನೋಬಲ ಹೆಚ್ಚಿಸಲು ಇಲ್ಲಿಗೆ ಆಗಮಿಸಿದ್ದೇನೆ. ಯುಎಪಿಎ ಕಾಯ್ದೆಯನ್ನು ಬಲಗೊಳಿಸಲಾಗಿದೆ. ಉಗ್ರಾವಾದಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಕಟಿಬದ್ಧವಾಗಿದ್ದೇವೆ ಎಂದು ತಿಳಿಸಿದರು.