SHIVAMOGGA LIVE NEWS |10 JANUARY 2023
ಸಾಗರ : ಬಜರಂಗದಳ ಸಹ ಸಂಚಾಲಕ ಸುನಿಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೆ ಯತ್ನಿಸಿದ್ದನ್ನು ಖಂಡಿಸಿ ಸಾಗರ ಪಟ್ಟಣ ಬಂದ್ (bandh) ಮಾಡಲಾಗಿದೆ. ನಗರದಾದ್ಯಂತ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ವಾಹನ ಸಂಚಾರ ಕೂಡ ಕಡಿಮೆಯಾಗಿದೆ.
ಪಟ್ಟಣದ ವಿವಿಧೆಡೆ ಬೆಳಗ್ಗೆಯಿಂದ ಅಂಗಡಿಗಳ ಬಾಗಿಲು ತೆಗೆಯಲಾಗಿತ್ತು. 9 ಗಂಟೆ ಹೊತ್ತಿಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ರಸ್ತೆಗಿಳಿದು, ಅಂಗಡಿಗಳನ್ನು ಬಂದ್ (bandh) ಮಾಡಿಸಿದರು.
ಇದನ್ನೂ ಓದಿ –ಬಜರಂಗದಳ ಸಂಚಾಲಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಯತ್ನ, ಸಾಗರ ಬಂದ್, ಈವರೆಗೂ ಏನಾಯ್ತು? ಇಲ್ಲಿದೆ ಡಿಟೇಲ್ಸ್
ಪಟ್ಟಣದಾದ್ಯಂತ ಬೈಕುಗಳಲ್ಲಿ ತೆರಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಅಂಗಡಿಗಳ ಬಾಗಿಲು ಮುಚ್ಚಿ, ಬಂದ್ ಗೆ ಸಹಕರಿಸುವಂತೆ ಸೂಚಿಸಿದರು. ನಗರದ ಕೆಲವು ಕಡೆ ಬಂದ್ ಮಾಡಿಸುವ ವಿಚಾರ ಸಂಬಂಧ ವ್ಯಾಪಾರಿಗಳು, ಹಿಂದು ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಾಗರದಲ್ಲಿ ಬಂದ್ ಗೆ ಕರೆ ನೀಡಲಾಗಿದೆ.
ಇನ್ನು, ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಸಾಗರ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಯಾವುದೆ ಅಹಿತಕರ ಘಟನೆಗಳು ಜರುಗದಂತೆ ತಡೆಯಲು ಸಾಗರ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.