SHIVAMOGGA LIVE NEWS | MINISTER | 22 ಏಪ್ರಿಲ್ 2022
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಶಾರದಾ ಪೂರ್ಯಾನಾಯ್ಕ್ ಅವರನ್ನು ಗೆಲ್ಲಿಸಿ ಕಳುಹಿಸಿ. ಜೆಡಿಎಸ್ ಸರ್ಕಾರ ಬಂದರೆ ರಾಜ್ಯಕ್ಕೆ ಒಬ್ಬ ಉತ್ತಮ ಸಚಿವೆ ಸಿಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಶಿವಮೊಗ್ಗ ತಾಲೂಕು ಕೂಡ್ಲಿಯಲ್ಲಿ ಜನತಾ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಜೆಡಿಎಸ್ ಪಕ್ಷ 120 ಸೀಟು ಗೆಲ್ಲಬೇಕು ಅಂದುಕೊಂಡಿದ್ದೇವೆ. ಅದಕ್ಕಾಗಿ ಈ ಭಾಗದಿಂದ ಶಾರದಾ ಪೂರ್ಯನಾಯ್ಕ್ ಅವರನ್ನು ಗೆಲ್ಲಿಸಿ ಕಳುಹಿಸಿ. ರಾಜ್ಯಕ್ಕೆ ಉತ್ತಮ ಮಹಿಳಾ ಸಚಿವರು (MINISTER) ಸಿಗಲಿದ್ದಾರೆ ಎಂದು ತಿಳಿಸಿದರು.
ಪುಣ್ಯಕೋಟಿಯಂತ ವ್ಯಕ್ತಿತ್ವ
ಶಾರದಾ ಪೂರ್ಯಾನಾಯ್ಕ್ ಅವರದ್ದು ಪುಣ್ಯಕೋಟಿ ಕಥೆಯಲ್ಲಿನ ಹಸುವಿನಂತ ವ್ಯಕ್ತಿತ್ವ. ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ ಅನ್ನುವ ವ್ಯಕ್ತಿತ್ವ. ಕಳೆದ ಭಾರಿ ಚುನಾವಣೆಯಲ್ಲಿ ಸೋತಿದ್ದಾರೆ. ಈ ಭಾಗದ ಸಾವಿರಾರು ಕುಟುಂಬಗಳು ಇವರ ಸೋಲಿಗೆ ಕಣ್ಣೀರು ಹಾಕಿವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಶಾಸಕರಾಗಿದ್ದಾಗ ಹಣ ಮಾಡಲಿಲ್ಲ. ಜನರ ಪ್ರೀತಿ ಸಂಪಾದಿಸಿದ್ದಾರೆ. ಆ ಪ್ರೀತಿಯನ್ನು ಉಳಿಸಿಕೊಳ್ಳಲು ಅವರೊಂದಿಗೆ ಕೈ ಜೋಡಿಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಇದನ್ನೂ ಓದಿ | ‘ಬಿಜೆಪಿ ನಾಯಕರ ಆಸ್ತಿ ಎಷ್ಟಿತ್ತು? ಎಷ್ಟಾಗಿದೆ? ಶಿವಮೊಗ್ಗ ನಗರದಲ್ಲಿ ಯಾರೆಲ್ಲರ ಆಸ್ತಿ ಎಷ್ಟಿದೆ?’