ಶಿವಮೊಗ್ಗ ಲೈವ್.ಕಾಂ | SHIMOGA NEWS | 23 JANUARY 2021
ಕಲ್ಲಗಂಗೂರು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟದಿಂದ ಸುತ್ತಮುತ್ತಲ ಗ್ರಾಮಗಳು ನಡುಗಿದೆ. ಆದರೆ ಕ್ವಾರಿಯ ಆವರಣದಲ್ಲಿ, ಕಾರ್ಮಿಕರು ಉಳಿದುಕೊಳ್ಳಲು ಮಾಡಿದ್ದ ಶೆಡ್ಗೆ ಯಾವುದೆ ಹಾನಿಯಾಗಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ.
ಈ ಶೆಡ್ಗೆ ಗಾಜಿನ ಕಿಟಕಿಗಳಿವೆ. ಅವುಗಳಿಗೆ ಸ್ವಲ್ಪವು ಹಾನಿಯಾಗಿಲ್ಲ. ಶೆಡ್ನ ಯಾವುದೆ ಭಾಗಕ್ಕೂ ಹಾನಿಯಾದಂತೆ ತೋರುತ್ತಿಲ್ಲ. ಇದು ಅಧಿಕಾರಿಗಳಿಗೂ ಅಚ್ಚರಿ ಮೂಡಿಸಿದೆ.
ಕ್ವಾರಿಯ ಆವರಣದಲ್ಲಿರುವ ಶೆಡ್ನಲ್ಲಿ ಕಾರ್ಮಿರು ಉಳಿದುಕೊಂಡಿದ್ದರು. ಹಲವರು ಕಾರ್ಮಿಕರು ಇಲ್ಲಿ ತಂಗಿದ್ದರು ಅನ್ನುವುದಕ್ಕೆ ಅವರು ಹಾಸಿರುವ ಚಾಪೆ, ಬೆಡ್ಶೀಟ್ಗಳೆ ಸಾಕ್ಷಿಯಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]