ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಡಿಸೆಂಬರ್ 2021
ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಅವರಿಗೆ ಐಪಿಎಸ್ ಆಗಿ ಬಡ್ತಿ ನೀಡಲಾಗಿದೆ. ಹಿಂದಿನ ಹೆಚ್ಚುವರಿ ರಕ್ಷಣಾಧಿಕಾರಿ ಮುತ್ತುರಾಜ್ ಅವರಿಗೂ ಐಪಿಎಸ್ ಆಗಿ ಬಡ್ತಿ ನೀಡಲಾಗಿದೆ.
2017ರ ಬ್ಯಾಚಿನ ಕೆ.ಎಸ್.ಪಿ.ಎಸ್ ಬ್ಯಾಚಿನ ಹೆಚ್.ಟಿ.ಶೇಖರ್ ಮತ್ತು ಮುತ್ತುರಾಜ್ ಅವರಿಗೆ ಐಪಿಎಸ್ ಅಗಿ ಬಡ್ತಿ ನೀಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಗೆಜೆಟ್’ನಲ್ಲಿ ಪ್ರಕಟಿಸಲಾಗಿದೆ.
2016, 2017 ಮತ್ತು 2019ರ ಬ್ಯಾಚಿನ 26 ಕೆ.ಎಸ್.ಪಿ.ಎಸ್ ಅಧಿಕಾರಿಗಳಿಗೆ ಐಪಿಎಸ್ ಬಡ್ತಿ ನೀಡಲಾಗಿದೆ. ಇನ್ನೊಂದು ವರ್ಷ ಈ ಅಧಿಕಾರಿಗಳು ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ವೇಳೆ ಐಪಿಎಸ್ ತರಬೇತಿ ನೀಡಲಾಗುತ್ತದೆ.