SHIVAMOGGA LIVE NEWS | 19 JANUARY 2023
SHIMOGA | ಕಾಮಗಾರಿಯ ಹಿನ್ನೆಲೆ ಮೈಸೂರು – ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ ರೈಲು ಮತ್ತು ಕುವೆಂಪು ಎಕ್ಸ್ ಪ್ರೆಸ್ ರೈಲನ್ನ (Mysore Train) ನಾಲ್ಕು ದಿನ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರಿಂದ ಈ ಎರಡು ರೈಲುಗಳು ನಾಲ್ಕು ದಿನ ನಿಗದಿಗಿಂತಲು ತಡವಾಗಿ ನಿಲ್ದಾಣ ತಲುಪುಲಿವೆ.
ನಿಯಂತ್ರಣಕ್ಕೆ ಕಾರಣವೇನು?
ಹೊಳೆನರಸೀಪುರ ನಿಲ್ದಾಣದ ಯಾರ್ಡ್ನಲ್ಲಿ ಇಂಜಿನಿಯರಿಂಗ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆ ಲೈನ್ ಬ್ಲಾಕ್ ಇರಲಿದೆ. ಹಾಗಾಗಿ ಜನವರಿ 20, 21, 23 ಮತ್ತು 25ರಂದು ಎರಡು ರೈಲುಗಳನ್ನು (Mysore Train) ಮಾರ್ಗ ಮಧ್ಯೆ ನಿಯಂತ್ರಿಸಲಾತ್ತಿದೆ.
ಎಷ್ಟು ಹೊತ್ತು ನಿಯಂತ್ರಣ?
ಮೈಸೂರು – ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16225) ರೈಲನ್ನು ಈ ನಾಲ್ಕು ದಿನ ಮಾರ್ಗ ಮಧ್ಯೆ 90 ನಿಮಿಷ ನಿಯಂತ್ರಿಸಲಾಗುತ್ತಿದೆ.
ಇನ್ನು, ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16221) ರೈಲನ್ನು ನಾಲ್ಕು ದಿನ ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಇಲಾಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ – ಶಿವಮೊಗ್ಗ ನಿಲ್ದಾಣದಲ್ಲಿ ನೀರಿನ ಬಾಟಲಿ ಕೊಂಡು ಬಸ್ ಹತ್ತಿದ ವಿದ್ಯಾರ್ಥಿನಿಗೆ ಕಾದಿತ್ತು ಆಘಾತ