ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಮೇ 2020
ಎಂಟು ಕರೋನ ಪಾಸಿಟಿವ್ ಪ್ರಕರಣಗಳು ಕಂಡು ಬಂದರೂ ಶಿವಮೊಗ್ಗ ಜಿಲ್ಲೆ ಹಸಿರು ವಲಯದಲ್ಲಿಯೆ ಮುಂದುವರೆಯಲಿದೆ. ಇದು ಶಿವಮೊಗ್ಗದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಕರೋನ ಪಾಸಿಟಿವ್ ಕಂಡು ಬಂದಲ್ಲಿ ಜಿಲ್ಲೆ ಹಸಿರು ವಲಯದಿಂದ ಆರೆಂಜ್ ಅಥವಾ ರೆಡ್ ಜೋನ್ಗೆ ಹೋಗಲಿದೆ. ಆದರೆ ಎಂಟು ಪಾಸಿಟಿವ್ ಪ್ರಕರಣ ಕಂಡು ಬಂದರೂ ಶಿವಮೊಗ್ಗ ಜಿಲ್ಲೆ ಗ್ರೀನ್ ಜೋನ್ನಲ್ಲಿಯೆ ಉಳಿಯಲಿದೆ.
ಯಾಕೆ ಗ್ರೀನ್ ಜೋನ್ನಲ್ಲೇ ಉಳಿಯಲಿದೆ?
‘ಈ ಸಮಸ್ಯೆ ಹುಟ್ಟಿದ್ದು ನಮ್ಮ ಜಿಲ್ಲೆಯಲ್ಲಲ್ಲ. ಅಹಮದಾಬಾದ್ನಿಂದ ಬಂದಿರುವ ಪ್ರಕರಣ. ಪಾಸಿಟಿವ್ ಬಂದವರನ್ನೆಲ್ಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಟ್ಟು, ಅಲ್ಲಿಯೇ ಸಮಸ್ಯೆ ಕ್ಲಿಯರ್ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆ ಗ್ರೀನ್ ಜೋನ್ನಲ್ಲೇ ಉಳಿಯಲಿದೆ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಯಾವುದೇ ಪಾಸಿಟಿವ್ ಪ್ರಕರಣಗಳು ಇಲ್ಲದಿದ್ದರೆ ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಿಸಲಾಗುತ್ತದೆ. ಆದರೆ ಸಮುದಾಯದ ಹಂತದಲ್ಲೇ ವೈರಸ್ ಹಬ್ಬುತ್ತಿದ್ದರೆ ಅಥವಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದರೆ ಆರೆಂಜ್ ಮತ್ತು ರೆಡ್ ಜೋನ್ ಎಂದು ಘೋಷಣೆ ಮಾಡಲಾಗುತ್ತದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]