ಶಿವಮೊಗ್ಗ ಲೈವ್.ಕಾಂ | 23 ಫೆಬ್ರವರಿ 2019
ಗಾಂಜಾ, ಮಟ್ಕಾ, ಮರಳು ದಂಧೆ ಕುರಿತು ವಾಗ್ದಾಳಿ ನಡೆಸುವ ಸಂದರ್ಭ, ಶಾಸಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯನ್ನು ಗೂಂಡಾ ರಾಜ್ಯ ಎಂದು ಆರೋಪಿಸಿದ್ದಾರೆ. ನೂತನ ಜಿಲ್ಲಾ ರಕ್ಷಣಾಧಿಕಾರಿ ಅವರು ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.
ಇನ್ನು, ತಾವು ಪ್ರತಿನಿಧಿಸುವ ಕ್ಷೇತ್ರದ ಕುರಿತು ಗೂಂಡಾ ರಾಜ್ಯ ಅನ್ನುವುದು ಸರಿಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಈ ಕುರಿತು ವಿಧಾನ ಮಂಡಲದಲ್ಲೂ ಆಗ್ರಹಿಸಿದ್ದೇವೆ. ರಾಜ್ಯಾದ್ಯಂತ ಇದೇ ಸ್ಥಿತಿ ಇದೆ. ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಅಷ್ಟಕ್ಕೂ ಈಶ್ವರಪ್ಪ ಹೇಳಿದ್ದೇನು? ವಿಡಿಯೋ ನೋಡಿ
https://www.youtube.com/watch?v=MIeYAF9yh_g&feature=youtu.be
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]