SHIVAMOGGA LIVE NEWS | SHIMOGA FM | 22 ಏಪ್ರಿಲ್ 2022
ರಾಜ್ಯದಲ್ಲಿ ಮೊದಲು ಶ್ರೀರಾಮ ಸೇನೆ, ಬಜರಂಗದಳ, ಹಿಂದೂ ಮಹಾಸಭಾ, ಆರ್.ಎಸ್.ಎಸ್’ನವರನ್ನು ಬುಲ್ಡೋಜರ್ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶಿವಮೊಗ್ಗಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಹೆಲಿಪ್ಯಾಡ್’ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಪ್ರದೇಶ ಮಾದರಿ ಬುಲ್ಡೋಜರ್ ರಸ್ತೆಗಿಳಿಸಬೇಕು ಎಂಬ ಚರ್ಚೆ ಶುರುವಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಶ್ರೀರಾಮ ಸೇನೆ, ಬಜರಂಗದಳ, ಹಿಂದೂ ಮಹಾಸಭಾ, ಆರ್.ಎಸ್.ಎಸ್ ಮೇಲೆ ಬುಲ್ಡೋಜರ್ ಮಾಡಬೇಕು. ಆಗ ಸಮಾಜ ಸರಿ ಹೋಗಲಿದೆ ಎಂದು ತಿಳಿಸಿದರು.
ಅಶಾಂತಿ ಹುಟ್ಟಿಸಿದ್ದು ಯಾರು?
ರಾಜ್ಯದಲ್ಲಿ ಹಲಾಲ್, ಹಿಜಾಬ್, ಅಜಾನ್ ಸೇರಿದಂತೆ ಹಲವು ವಿವಾದಗಳನ್ನು ಹುಟ್ಟು ಹಾಕಿ, ಅಶಾಂತಿ ಸೃಷ್ಟಸಲಾಗುತ್ತಿದೆ. ಧಾರ್ಮಿಕ ವಿಚಾರವನ್ನು ಕೆರಳಿಸಿ ಭ್ರಾತೃತ್ವ ಹಾಳು ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ವಿವಾದ ಸೃಷ್ಟಿಸಿದವರು ಯಾರೆ ಆಗಿದ್ದರೂ ಕ್ರಮ ಕೈಗೊಳ್ಳಬೇಕು. ಎಸ್.ಡಿ.ಪಿ.ಐ, ಸಿಎಫ್ಐ, ಬಜರಂಗದಳ, ಶ್ರೀರಾಮ ಸೇನೆ, ಬಿಜೆಪಿ, ಆರ್.ಎಸ್.ಎಸ್. ಸೇರಿದಂತೆ ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದರು.
ಇದನ್ನೂ ಒದಿ | ಆಸ್ತಿ, ಅಂತಸ್ತು ಪಡೆದುಕೊಂಡು ವಯಸ್ಸಾದ ಅಪ್ಪ, ಅಮ್ಮನ ನೋಡಿಕೊಳ್ಳದಿದ್ದರೆ ಕಠಿಣ ಕ್ರಮದ ಎಚ್ಚರಿಕೆ