ಶಿವಮೊಗ್ಗ ಲೈವ್.ಕಾಂ | ಸೊರಬ | 17 ಜುಲೈ 2019
ಕಾನಕೇರಿ ಬಡಾವಣೆಯಲ್ಲಿ ಯುವತಿ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸೊರಬ ಪೊಲೀಸರು ಎರಡೇ ದಿನದಲ್ಲಿ ಭೇದಿಸಿದ್ದಾರೆ. ಈ ಪ್ರಕರಣ ಸಂಬಂಧ, ಯುವಕನೊಬ್ಬನನ್ನು ಅರೆಸ್ಟ್ ಮಾಡಿದ್ದಾರೆ.
ರಮೇಶ್ (25) ಬಂಧಿತ ಯುವಕ. ಜು.15ರಂದು ಅಶ್ವಿನಿ ಕಲ್ಲಹಳ್ಳಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ತನಿಖೆ ಆರಂಭಿಸಿದ ಸೊರಬ ಪೊಲೀಸರಿಗೆ ಪ್ರಿಯಕರನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಮೊಬೈಲ್ ನೆಟ್’ವರ್ಕ್’ನಿಂದ ಸಿಕ್ತು ಸುಳಿವು
ಅಶ್ವಿನಿ ಮತ್ತು ರಮೇಶ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು. ಅಶ್ವಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಬಯಲಿಗೆ ಬರುವ ಹಿಂದಿನ ರಾತ್ರಿ, ರಮೇಶ ಸೊರಬಕ್ಕೆ ಬಂದಿದ್ದ. ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಘಟನೆ ಬಳಿಕ ರಮೇಶ, ಅಶ್ವಿನಿಯ ಮೊಬೈಲ್ ತೆಗೆದುಕೊಂಡು ಹೋಗಿದ್ದ. ಅದರ ನೆಟ್’ವರ್ಕ್ ಟ್ರೇಸ್ ಮಾಡಿದ ಪೊಲೀಸರು, ಹಗರಿಬೊಮ್ಮನಹಳ್ಳಿಯಲ್ಲಿ ಆತನನ್ನು ಬಂಧಿಸಿದ್ದಾರೆ.
ಸೊರಬ ಡಿವೈಎಸ್’ಪಿ ಸುಧಾಕರ್ ನಾಯಕ್, ಸರ್ಕಲ್ ಇನ್ಸ್’ಪೆಕ್ಟರ್ ಉಮಾಪತಿ ಮಾರ್ಗದರ್ಶದಲ್ಲಿ ಪಿಎಸ್ಐ ಶಂಕರಗೌಡ ಪಾಟೀಲ್, ಸಿಬ್ಬಂದಿ ಚಂದ್ರು, ದಿನೇಶ್, ಸಲ್ಮಾನ್ ಖಾನ್, ಜಗದೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]