| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE NEWS | 28 DECEMBER 2022
ಶಿವಮೊಗ್ಗ : ಬೆಂಗಳೂರು ವಿಭಾಗದ ವಿವಿಧ ನಿಲ್ದಾಣಗಳಿಗೆ ರೈಲುಗಳು ತಲುಪುವ ಮತ್ತು ಹೊರಡುವ ಸಮಯವನ್ನು ಬದಲಾವಣೆ (Timing Change) ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗದ ಕೆಲವು ರೈಲುಗಳು ಕೂಡ ಈ ಪಟ್ಟಿಯಲ್ಲಿದೆ.

(Timing Change)
ಯಾವ್ಯಾವ ರೈಲುಗಳ ಸಮಯ ಬದಲಾಗಿದೆ?
ರೈಲು ಸಂಖ್ಯೆ 06513 : ತುಮಕೂರು – ಶಿವಮೊಗ್ಗ ಟೌನ್ ಡೆಮು ಎಕ್ಸ್ ಪ್ರೆಸ್ : ಈವರೆಗೂ ಗುಬ್ಬಿ ನಿಲ್ದಾಣಕ್ಕೆ ಬೆಳಗ್ಗೆ 8.26ಕ್ಕೆ ತಲುಪಿ 8.27ಕ್ಕೆ ಹೊರಡುತ್ತಿತ್ತು. ಇನ್ಮುಂದೆ 8.24ಕ್ಕೆ ತಲುಪಲಿದೆ. 8.25ಕ್ಕೆ ಹೊರಡಲಿದೆ. (2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ)
ರೈಲು ಸಂಖ್ಯೆ 16227 : ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ : ಮಂಡ್ಯ, ಬೆಂಗಳೂರು, ಯಶವಂತಪುರ ಮತ್ತು ತುಮಕೂರು ನಿಲ್ದಾಣಗಳಲ್ಲಿ ಸಮಯ ಬದಲಾವಣೆಯಾಗಿದೆ. (2023ರ ಜನವರಿ 1ರಿಂದ ಹೊಸ ಸಮಯ ಜಾರಿಯಾಗಲಿದೆ)
| ನಿಲ್ದಾಣ | ಹಿಂದಿನ ಸಮಯ | ಬದಲಾದ ಸಮಯ |
| ಮಂಡ್ಯ | ರಾತ್ರಿ 8.16ಕ್ಕೆ ತಲುಪುತ್ತಿತ್ತು ರಾತ್ರಿ 8.18ಕ್ಕೆ ಹೊರಡುತ್ತಿತ್ತು | ರಾತ್ರಿ 8.17ಕ್ಕೆ ತಲುಪಲಿದೆ ರಾತ್ರಿ 8.18ಕ್ಕೆ ಹೊರಡಲಿದೆ |
| ಬೆಂಗಳೂರು | ರಾತ್ರಿ 10.55ಕ್ಕೆ ತಲುಪುತ್ತಿತ್ತು ರಾತ್ರಿ 11.15ಕ್ಕೆ ಹೊರಡುತ್ತಿತ್ತು | ರಾತ್ರಿ 10.30ಕ್ಕೆ ತಲುಪಲಿದೆ ರಾತ್ರಿ 11ಕ್ಕೆ ಹೊರಡಲಿದೆ |
| ಯಶವಂತಪುರ | ರಾತ್ರಿ 11.28ಕ್ಕೆ ತಲುಪುತ್ತಿತ್ತು ರಾತ್ರಿ 11.30ಕ್ಕೆ ಹೊರಡುತ್ತಿತ್ತು | ರಾತ್ರಿ 11.23ಕ್ಕೆ ತಲುಪಲಿದೆ ರಾತ್ರಿ 11.25ಕ್ಕೆ ಹೊರಡಲಿದೆ |
| ತುಮಕೂರು | ರಾತ್ರಿ 12.13ಕ್ಕೆ ತಲುಪುತ್ತಿತ್ತು ರಾತ್ರಿ 12.15ಕ್ಕೆ ಹೊರಡುತ್ತಿತ್ತು | ರಾತ್ರಿ 12.18ಕ್ಕೆ ತಲುಪಲಿದೆ ರಾತ್ರಿ 12.20ಕ್ಕೆ ಹೊರಡಲಿದೆ |
ರೈಲು ಸಂಖ್ಯೆ 16581 : ಯಶವಂತಪುರ – ಶಿವಮೊಗ್ಗ ಟೌನ್ : ಈವರೆಗೂ ಯಶವಂತಪುರದಿಂದ ರಾತ್ರಿ 11.58ಕ್ಕೆ ಹೊರಡುತ್ತಿತ್ತು. ಇನ್ಮುಂದೆ 11.50ಕ್ಕೆ ಹೊರಡಲಿದೆ. ತುಮಕೂರಿಗೆ ರಾತ್ರಿ 12.55 ತಲುಪಿ, 12.57ಕ್ಕೆ ಹೊರಡುತ್ತಿತ್ತು. ಇನ್ಮುಂದೆ 12.38ಕ್ಕೆ ತಲುಪಿ, 12.40ಕ್ಕೆ ಹೊರಡಲಿದೆ. (2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ)
ಇದನ್ನೂ ಓದಿ – ಶಿವಮೊಗ್ಗ – ಮೈಸೂರು ನಡುವೆ ಎಷ್ಟು ರೈಲುಗಳಿವೆ, ಎಲ್ಲೆಲ್ಲಿ ಸ್ಟಾಪ್ ಇದೆ, ಟೈಮಿಂಗ್ ಏನು?
ರೈಲು ಸಂಖ್ಯೆ 16582 : ಶಿವಮೊಗ್ಗ ಟೌನ್ – ಯಶವಂತಪುರ : ಈವರೆಗೂ ಯಶವಂತಪುರಕ್ಕೆ ಬೆಳಗ್ಗೆ 5.10ಕ್ಕೆ ತಲುಪುತ್ತಿತ್ತು. ಇನ್ಮುಂದೆ ಬೆಳಗ್ಗೆ 5 ಗಂಟೆಗೆ ತಲುಪಲಿದೆ. ತುಮಕೂರಿಗೆ ಬೆಳಗ್ಗೆ 3.38ಕ್ಕೆ ತಲುಪುತ್ತಿತ್ತು. ಇನ್ಮುಂದೆ 3.10ಕ್ಕೆ ತಲುಪಲಿದೆ. 3.12ಕ್ಕೆ ಹೊರಡಲಿದೆ. (2023ರ ಜನವರಿ 3ರಿಂದ ಹೊಸ ಸಮಯ ಜಾರಿಯಾಗಲಿದೆ)
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ
- ಯಡೇಹಳ್ಳಿ ಕ್ರಾಸ್ ಬಳಿ ಅರಣ್ಯ ಸಂಚಾರಿ ದಳದ ದಾಳಿ, ಕಾರಾವಾರದ ವ್ಯಕ್ತಿ ಅರೆಸ್ಟ್
- ಅಡಿಕೆ ಎಲೆಚುಕ್ಕಿ ರೋಗ, ಬಾಕಿ ಹಣ ಬಿಡುಗಡೆಗೆ ಸಿಎಂ ಸೂಚನೆ
- ಕಿತ್ತೂರು ರಾಣಿ ಚನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ
- ಸಾಗರ ನಗರಸಭೆ ಎಚ್ಚರಿಕೆ, ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಮುಖ ಪ್ರಕಟಣೆ
- ‘ಶಿವಮೊಗ್ಗ ಮಹಾನಗರ ಪಾಲಿಕೆಗೆ ಜನವರಿ 2ರವರೆಗೆ ಗಡುವುʼ
- ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಜೋರು, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?
- ಬಾವಿಗೆ ಬಿದ್ದ ಗೂಳಿ, ಹರಸಾಹಸ ಮಾಡಿ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ, ಆಗಿದ್ದೆಲ್ಲಿ?
![]()