SHIVAMOGGA LIVE NEWS | 26 APRIL 2023
SHIMOGA : ಬೀಗ ಹಾಕಿದ್ದ ಮನೆಯೊಂದರ ಮುಂದೆ ಅನುಮಾನಾಸ್ಪದವಾಗಿ (Suspect) ನಿಂತಿದ್ದ ವ್ಯಕ್ತಿಯೊಬ್ಬನನ್ನು ರಾತ್ರಿ ಗಸ್ತು ಪೊಲೀಸರು ವಿಚಾರಣೆ ಮಾಡಿ, ಬಂಧಿಸಿದ್ದಾರೆ. ಶಿವಮೊಗ್ಗದ ವಿದ್ಯಾನಗರದಲ್ಲಿ ಘಟನೆ ಸಂಭವಿಸಿದೆ.
ವಿದ್ಯಾನಗರದ 2ನೇ ಅಡ್ಡರಸ್ತೆಯಲ್ಲಿ ಕೋಟೆ ಠಾಣೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಮನೆಯೊಂದರ ಮುಂದೆ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ (Suspect) ನಿಂತಿದ್ದ. ಪೊಲೀಸರನ್ನು ಕಂಡ ಕೂಡಲೆ ಮರೆಯಾಗಲು ಯತ್ನಿಸಿದ್ದಾನೆ. ಪೊಲೀಸರು ಆತನನ್ನು ಹಿಡಿದು ವಿಚಾರಣೆ ಮಾಡಿದಾಗ ಸ್ಪಷ್ಟ ಉತ್ತರ ಹೇಳಿಲ್ಲ. ಒಂದೊಂದು ಸರ್ತಿ ಒಂದೊಂದು ಹೆಸರು, ಊರು ತಿಳಿಸಿದ್ದಾನೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ, ನಿವೃತ್ತ ಅರಣ್ಯಾಧಿಕಾರಿ, ಹಿಂದಿನ ತಹಶೀಲ್ದಾರ್ ಸಂಬಂಧಿ ಮನೆಯಲ್ಲಿ ಶೋಧ
ಹೆಚ್ಚಿನ ವಿಚಾರಣೆ ಮಾಡಿದಾಗ ತಾನು ಭದ್ರಾವತಿ ಹೊಸಮನೆಯ ಧರ್ಮರಾಜ್ ಎಂದು ತಿಳಿಸಿದ್ದಾನೆ. ಮನೆ ಕಳ್ಳತನ ಮಾಡುವ ಸಂಶಯವಿದ್ದಿದ್ದರಿಂದ ಆತನ ವಿರುದ್ದ ಪ್ರಕರಣ ದಾಖಲು ಮಾಡಿದ್ದಾರೆ.