ಶಿವಮೊಗ್ಗದ ಡಾಕ್ಟರ್ ಗೆ ಗೂಗಲ್ ಸರ್ಚ್ ನಿಂದ ಸಂಕಷ್ಟ, ವಾಟ್ಸಪ್ ಮೆಸೇಜಿನಿಂದ ಹೋಯ್ತು ಲಕ್ಷ ಲಕ್ಷ ಹಣ

Online-Fraud-In-Shimoga

SHIVAMOGGA LIVE NEWS | 16 MARCH 2023 SHIMOGA : ಗೂಗಲ್ ನಲ್ಲಿ HOW TO EARN MONEY ಎಂದು ಸರ್ಚ್ ಮಾಡಿದ ವೈದ್ಯರೊಬ್ಬರು ಕೊನೆಗೆ ಲಕ್ಷ ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ಆಮಿಷವೊಡ್ಡಿದ್ದ ಲಿಂಕ್ ಒಂದನ್ನು ಕ್ಲಿಕ್ ಮಾಡಿ, ವೈದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ವೈದ್ಯ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ತಮ್ಮ ಮೊಬೈಲ್ ಮೂಲಕ ಗೂಗಲ್ ನಲ್ಲಿ HOW TO EARN MONEY ಎಂದು … Read more

ಭದ್ರಾವತಿ – ಶಿವಮೊಗ್ಗ ನಡುವೆ ಕೈಕೊಟ್ಟ ಇಂಟರ್ ಸಿಟಿ ರೈಲು ಇಂಜಿನ್

Intercity-Train-Stopped-at-kadadakatte-in-Bhadravath

SHIVAMOGGA LIVE NEWS | 12 DECEMBER 2022 ಭದ್ರಾವತಿ : ಬೆಂಗಳೂರು – ತಾಳಗುಪ್ಪ ಇಂಟರ್ ಸಿಟಿ ರೈಲಿನ ಇಂಜಿನ್ ನಲ್ಲಿ (engine problem) ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಭದ್ರಾವತಿ ನಿಲ್ದಾಣದಿಂದ ಸ್ವಲ್ಪ ದೂರ ಬಂದು ರೈಲು ನಿಂತಿತ್ತು. ಪ್ರಯಾಣಿಕರು ಗೊಂದಲಕ್ಕೀಡಾಗಿದ್ದರು. ಭದ್ರಾವತಿ ನಿಲ್ದಾಣಕ್ಕೆ 7.26ಕ್ಕೆ ಆಗಮಿಸಿದ್ದ ರೈಲು 7.27ಕ್ಕೆ ಹೊರಟಿತ್ತು. ಕಡದಕಟ್ಟೆ ಬಳಿ ರೈಲ್ವೆ ಇಂಜಿನ್ ಫೇಲ್ ಆಗಿ ನಿಂತಿತ್ತು. ಹಾಗಾಗಿ ಮುಂದೇನು ಎಂದು ತೋಚದೆ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದರು. ಕೆಲವು ಪ್ರಯಾಣಿಕರು ರೈಲು ಇಳಿದು … Read more

ಶಿವಮೊಗ್ಗದ ವಂದನಾ ಟಾಕೀಸ್ ಪ್ರೊಜೆಕ್ಟರ್ ರೂಂನಲ್ಲಿ ಬೆಂಕಿ

170621 Fire at Shimoga Vandana Talkies 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 JUNE 2021 ಶಿವಮೊಗ್ಗದ ಬಿ.ಬಿ.ಸ್ಟ್ರೀಟ್‍ನಲ್ಲಿರುವ ವಂದನಾ ಟಾಕೀಸ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ದಟ್ಟ ಹೊಗೆ ಕಾಣಿಸಿಕೊಂಡ ಕೂಡಲೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಚಿತ್ರಮಂದಿರದ ಪ್ರೊಜೆಕ್ಟರ್‍ ರೂಂನಲ್ಲಿ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರೊಜೆಕ್ಟರ್‍ ರೂಂನಲ್ಲಿ ಕೆಲವು ಉಪಕರಣಗಳಿಗೆ ಹಾನಿಯಾಗಿದೆ. … Read more

ಸಾಗರದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಧಗಧಗ ಹೊತ್ತಿ ಉರಿದ ಓಮ್ನಿ

010321 Car Burn at Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 1 MARCH 2021 ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಸಿಕೊಂಡಿದ್ದು ಸ್ಥಳೀಯರಲ್ಲಿ ಕೆಲಕಾಲ ಆತಂಕ ಮೂಡಿಸಿತು. ಸಾಗರದ ಸರ್ಕಾರಿ ಆಸ್ಪತ್ರೆ ಬಳಿ ಇರುವ ಕೆನರಾ ಬ್ಯಾಂಕ್ ಮುಂಭಾಗ ಘಟನೆ ಸಂಭವಿಸಿದೆ. ಕಾರಿನಲ್ಲಿ ಚಾಲಕ ರಮೇಶ್ ಒಬ್ಬರೆ ಇದ್ದರು. ಸಾಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಭರ್ತಿ ಮಾಡಿಕೊಂಡು ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಬಂದಗದ್ದೆಯಲ್ಲಿರುವ ಗ್ಯಾಸ್ ಗೋಡೋನ್‍ ಕಡೆಗೆ ರಮೇಶ್ ತೆರಳುತ್ತಿದ್ದರು. ದಟ್ಟ ಹೊಗೆ, ಧಗಧಗ ಉರಿದ ಬೆಂಕಿ ಸರ್ಕಾರಿ … Read more

ತಾಳಗುಪ್ಪ – ಬೆಂಗಳೂರು ರೈಲು ಎಂಜಿನ್’ನಲ್ಲಿ ಬೆಂಕಿ, ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ಎರಡು ಗಂಟೆ ನಿಂತ ರೈಲು

ಶಿವಮೊಗ್ಗ ಲೈವ್.ಕಾಂ | 21 ಮೇ 2019 ತಾಳಗುಪ್ಪ ಬೆಂಗಳೂರು ರೈಲಿನ ಎಂಜಿನ್’ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ರೈಲು ಪ್ರಯಾಣ ಸುಮಾರು ಎರಡೂವರೆ ಗಂಟೆ ವಿಳಂಬವಾಗಿದೆ. ಇನ್ನು ಬೆಂಕಿ ಕಾಣಿಸಿಕೊಂಡ ವಿಚಾರ ತಿಳಿಯುತ್ತಿದ್ದಂತೆ, ಪ್ರಯಾಣಿಕರು ಆತಂಕಕ್ಕೀಡಾಗಿದ್ದರು. | VIDEO REPORT | ನಿನ್ನೆ ರಾತ್ರಿ ರೈಲು ಭದ್ರಾವತಿ ರೈಲ್ವೆ ನಿಲ್ದಾಣಕ್ಕೆ ತಲುಪುತ್ತಿದ್ದಂತೆ, ಎಂಜಿನ್’ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ವಿಚಾರ ತಿಳಿದಿದೆ. ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಸಿಬ್ಬಂದಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಎಂಜಿನ್’ನ ಒಳಗೆ ಕಾಣಿಸಿಕೊಂಡಿದ್ದ … Read more