‘ಮುಂದೆ ಆ ರೈತರ ಮಕ್ಕಳು ಬಂದೂಕು ಹಿಡಿದರೆ ಆರಗ ಜ್ಞಾನೇಂದ್ರ ಅವರೇ ಕಾರಣರಾಗುತ್ತಾರೆ’
SHIMOGA | ನಕ್ಸಲರು (NAXAL) ಬಂದೂಕು ಹಿಡಿದು ಓಡಾಡಿದ ಜಾಗದಲ್ಲಿಯೆ ಈಗ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಅವರ ಮಕ್ಕಳು ಬಂದೂಕು ಹಿಡಿದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೆ ಕಾರಣರಾಗುತ್ತಾರೆ ಎಂದು ವಕೀಲ ಕೆ.ಪಿ.ಶ್ರೀಪಾಲ್ ಎಚ್ಚರಿಸಿದರು. ಭೂತಾನ್ ಅಡಕೆ ಆಮದು, ಎಲೆ ಚುಕ್ಕಿ ರೋಗದ ಕುರಿತು ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಕೀಲ ಕೆ.ಪಿ.ಶ್ರೀಪಾಲ್ ಅವರು, ರೈತರ ಕಡಗಣನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. … Read more