ಗುಡ್ಡದಿಂದ ಇಳಿದು ಬಂದ ಹುಲಿ, ಹಸುವಿನ ಮೇಲೆ ದಾಳಿ

Sagara-News-Update.

ಸಾಗರ : ತಾಲೂಕಿನ ಕರೂರು ಹೋಬಳಿಯ ಕುದರೂರು ಗ್ರಾಮದಲ್ಲಿ ಹಸುವೊಂದರ ಮೇಲೆ ಹುಲಿ (Tiger) ದಾಳಿ ನಡೆಸಿ ಕೊಂದಿದೆ. ಹಸು ಕುದರೂರು ಗ್ರಾಮದ ಗಣಪತಿ ತೇಕಲೆ ಅವರಿಗೆ ಸೇರಿದ್ದಾಗಿದೆ. ಗೋಮಾಳದಲ್ಲಿ ಹಸುವನ್ನು ಮೇಯಲು ಬಿಡಲಾಗಿತ್ತು. ಈ ಸಂದರ್ಭ ತೇಕಲೆ ಗುಡ್ಡದಿಂದ ಬಂದ ಹುಲಿಯು ದಾಳಿ ನಡೆಸಿದೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಅತಿ ಹೆಚ್ಚು ಬಿಸಿಲು, ಉಳಿದ ತಾಲೂಕುಗಳಲ್ಲಿ ಹೇಗಿದೆ ಸೂರ್ಯನ ಅಬ್ಬರ?

ಕೊಟ್ಟಿಗೆಗೆ ಬೆಂಕಿ, ಕಾರು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

251123-Incident-at-kodanavalli-in-Kudaruru.webp

SHIVAMOGGA LIVE NEWS | 25 NOVEMBER 2023 BYKODU : ಕೊಟ್ಟಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿದೆ. ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡನವಳ್ಳಿಯ ಗಣಪತಿ ಎಂಬುವವರ ಅವರ ಕೊಟ್ಟಿಗೆಯಲ್ಲಿ ಘಟನೆ (Incident) ಸಂಭವಿಸಿದೆ. ಹೇಗಾಯ್ತು ಘಟನೆ? ಏನೇನೆಲ್ಲ ನಷ್ಟವಾಗಿದೆ? ಗಣಪತಿ ಅವರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅಟ್ಟದಲ್ಲಿ ಸಂಗ್ರಹಿಸಿ ಇಟ್ಟಿದ್ದ 200 ಪಿಂಡಿ ಹುಲ್ಲು, ತಾಮ್ರದ ಹಂಡೆ, ಲಕ್ಷಾಂತರ ಮೌಲ್ಯದ ನಾಟಾ, ಓಮ್ನಿ ಕಾರು, ಪೈಪ್‌, ಕಟ್ಟಿಗೆ ಸೇರಿದಂತೆ ಸುಮಾರು 6 … Read more

ಕುದರೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ

Kudaruru-Grama-Panchayath-gets-new-president-and-vice-president-Sagara-Bykodu.

SHIVAMOGGA LIVE | 3 AUGUST 2023 BYKODU : ಕುದರೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ (President) ಸರಸ್ವತಿ ಗಣಪತಿ ಮತ್ತು ಉಪಾಧ್ಯಕ್ಷರಾಗಿ ಜ್ಯೋತಿ ಮೇಘರಾಜ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗ್ರಾಮ ಪಂಚಾಯಿತಿ ಸದಸ್ಯರ ವತಿಯಿಂದ ಸನ್ಮಾನಿಸಲಾಯಿತು. 30 ತಿಂಗಳು ಅಧ್ಯಕ್ಷರಾಗಿದ್ದ (President) ನಾಗರಾಜ ಬೊಬ್ಬಿಗೆ, ಉಪಾಧ್ಯಕ್ಷರಾಗಿದ್ದ ಕೋದಂಡಪ್ಪ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ ಇವತ್ತು ಚುನಾವಣೆ ನಿಗದಿಯಾಗಿತ್ತು. ಇದನ್ನೂ ಓದಿ – ವಿದ್ಯುತ್‌ ಕಂಬಕ್ಕೆ ಬಸ್‌ ಡಿಕ್ಕಿ, ಪ್ರಯಾಣಿಕರಿಗೆ ಕರೆಂಟ್‌ ಶಾಕ್‌, … Read more

ನೋ ನೆಟ್​​ವರ್ಕ್​, ನೋ ವೋಟಿಂಗ್, ಗ್ರಾಮಸ್ಥರಿಂದ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕಾರದ ವಾರ್ನಿಂಗ್

130721 Kudaruru Village No Protest 1

ಶಿವಮೊಗ್ಗ ಲೈವ್.ಕಾಂ | SAGARA NEWS | 13 ಜುಲೈ 2021 ಶರಾವತಿ ಹಿನ್ನೀರು ಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಉಲ್ಬಣಗೊಂಡಿದೆ. ಆಕ್ರೋಶಗೊಂಡಿರುವ ಸ್ಥಳೀಯರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈಗಾಗಲೆ ‘ನೋ ನೆಟ್‍ವರ್ಕ್, ನೋ ವೋಟಿಂಗ್’ ಅಭಿಯಾನ ಶುರುವಾಗಿದೆ. ಭಾರಿ ಬೆಂಬಲವು ವ್ಯಕ್ತವಾಗುತ್ತಿದೆ. ಇದು ಚುನಾವಣೆ ಸಿದ್ಧತೆ, ಟಿಕೆಟ್‍ ಪೈಪೋಟಿಗೆ ಬಿದ್ದಿರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ. ಹೊಸ ಕ್ಷೇತ್ರಕ್ಕೆ ತಟ್ಟಿದ ಬಿಸಿ ಸಾಗರ ತಾಲೂಕಿನಲ್ಲಿ ಕುದರೂರು ಜಿಲ್ಲಾ ಪಂಚಾಯಿತಿ … Read more