ತಡರಾತ್ರಿ ಮನೆ ಮುಂದೆ ಕಟ್ಟಿದ್ದ ನಾಯಿ ಕೂಗಾಟ, ಹೊರ ಬಂದ ಮನೆಯವರಿಗೆ ಆಘಾತ, ಗ್ರಾಮದಲ್ಲಿ ಆತಂಕ

Leopard-found-at-mulukoppa-tanda-village-in-Shikaripura

ಶಿಕಾರಿಪುರ: ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ (Leopard) ದಾಳಿ ನಡೆಸಿದೆ. ಮನೆಯವರು ಹೊರ ಬರುತ್ತಿದ್ದಂತೆ ಚಿರತೆ ಓಡಿ ಹೋಗಿದೆ. ಶಿಕಾರಿಪುರ ತಾಲೂಕು ಮುಳುಕೊಪ್ಪ ತಾಂಡದಲ್ಲಿ ಚಿರತೆ ಕಾಣಿಸಿಕೊಂಡಿದೆ. ಇಲ್ಲಿನ ಮನೆಯೊಂದರ ಮುಂದೆ ಕಟ್ಟಿ ಹಾಕಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ನಾಯಿ ಕೂಗಾಟ ಕೇಳಿ ಅಕ್ಕಪಕ್ಕದವರೆಲ್ಲ ಮನೆಯಿಂದ ಹೊರ ಬಂದಾಗ ಚಿರತೆ ಓಡಿ ಹೋಗಿದೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಮುಳುಕೊಪ್ಪ ತಾಂಡ ವಾಸಿಗಳಲ್ಲಿ ಆತಂಕ ಮೂಡಿಸಿದೆ. ಕೂಡಲೆ … Read more

ವಾಹನ ಡಿಕ್ಕಿಯಾಗಿ ಏಳು ತಿಂಗಳ ಚಿರತೆ ಸಾವು, ಎಲ್ಲಿ?

7-month-leopard-at-soraba.

ಸೊರಬ: ಅಪರಿಚಿತ ವಾಹನ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಏಳು ತಿಂಗಳ ಹೆಣ್ಣು ಚಿರತೆ (Leopard) ಮರಿ ಸಾವನ್ನಪ್ಪಿದೆ. ಸೊರಬ ತಾಲೂಕು ಉಳುವಿ – ಸಾಗರ ರಸ್ತೆಯ ಅವಲುಗೋಡು ಬಳಿ ಘಟನೆ ಸಂಭವಿಸಿದೆ. ಬುಧವಾರ ರಾತ್ರಿ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದ ಚಿರತೆ ಮರಿ ಸ್ಥಳದಲ್ಲೆ ಸಾವನ್ನಪ್ಪಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌ ಕುಳ್ಳೊಳ್ಳಿ, ಉಪ ವಲಯ ಅರಣ್ಯಾಧಿಕಾರಿ ಭದ್ರೇಶ್‌, ಉಳಿವಿಯ ಪಶು … Read more

ಕೊಟ್ಟಿಗೆಯಲ್ಲಿದ್ದ ಕರು ಮೇಲೆ ದಾಳಿ ನಡೆಸಿ ಕೊಂದಹಾಕಿದ ಚಿರತೆ

leopard-attacks-calf-at-kudligere

ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮದ ಮಹೇಶ್ ನಾಯ್ಕ ಅವರ ಕೊಟ್ಟಿಗೆಯಲ್ಲಿದ್ದ ಕರುವನ್ನು (Calf) ಬುಧವಾರ ರಾತ್ರಿ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗ್ರಾಮದ ಟಿವಿಎಸ್ ಫಾರಂ ತೋಟದ ಎಪಿಎಂಸಿ ಮಾಜಿ ಸದಸ್ಯೆ ಸುಜಾತಮ್ಮ ಮನೆ ಆವರಣದಲ್ಲಿ ಮಂಗಳವಾರ ಚಿರತೆಯು ಸಾಕು ನಾಯಿಗಳನ್ನು ಮತ್ತು ಬೆಕ್ಕನ್ನು ಅಪಹರಿಸಿತ್ತು. ಈಗ ಹಸುವನ್ನು ಕೊಂದಿದೆ. ಜಿ.ಪಂ. ಮಾಜಿ ಸದಸ್ಯ ಎಸ್. ಮಣಿಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. … Read more

ರಾತ್ರಿ ನಾಯಿಗಳು ಬೊಗಳಿದವು ಅಂತಾ ಕಿಟಕಿಯಲ್ಲಿ ಇಣುಕಿದಾಗ ಕಾಣಿಸಿತು ಚಿರತೆ, ಸಿಸಿಟಿವಿಯಲ್ಲಿ ದೃಶ್ಯೆ ಸೆರೆ

Leopard-found-at-kudligere

ಭದ್ರಾವತಿ: ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮಕ್ಕೆ ಸಮೀಪದಲ್ಲಿರುವ, ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತಾ ಅವರ ತೋಟದ ಮನೆಯಲ್ಲಿ ಚಿರತೆಯೊಂದು (Leopard) ಪ್ರತ್ಯಕ್ಷವಾಗಿರುವ ದೃಶ್ಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಇದನ್ನೂ ಓದಿ » ಕಾಶ್ಮೀರ ದಾಳಿ, ಸಾಂತ್ವನ ಹೇಳಲು ತಿಪಟೂರಿನಿಂದ ಶಿವಮೊಗ್ಗಕ್ಕೆ ಬಂದ 103 ವರ್ಷದ ವೃದ್ಧೆ ರಾತ್ರಿ 9.30ರ ಸಮಯದಲ್ಲಿ ಸಾಕುನಾಯಿಗಳು ಬೊಗಳಿವೆ. ಆಗ ಕಿಟಕಿಯಿಂದ ನೋಡಿದಾಗ, ಮನೆಯ ಜಗಲಿಯ ಮೇಲಿಂದ ಚಿರತೆ ಹಾದು ಹೋಗಿದೆ. ಇದನ್ನು ಕಂಡು ಮನೆಯವರು ಭಯಭೀತರಾಗಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆಯು ನಾಯಿಗಳ … Read more

ಭದ್ರಾವತಿಯಲ್ಲಿ ಚಿರತೆ ಮೃತದೇಹ ಪತ್ತೆ, ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು

Leapord-at-Bhadravathi-Paper-town

SHIVAMOGGA LIVE NEWS, 27 JANUARY 2025 ಭದ್ರಾವತಿ : ಬಾರಂದೂರು ಸಮೀಪ ಭದ್ರಾ ನದಿ ಸೇತುವೆ ಬಳಿ ಚಿರತೆಯ (Leopard) ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹ ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ಚಿರತೆ ಮೃತದೇಹ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಲೆ ದೊಡ್ಡ ಸಂಖ್ಯೆಯ ಜನರು ಸೇತುವೆ ಬಳಿ ಜಮಾಯಿಸಿದ್ದರು. ಸಾಯಿಸಿ, ತಂದು ಹಾಕಿರುವ ಶಂಕೆ ಚಿರತೆಯನ್ನು ಸಾಯಿಸಿ ಇಲ್ಲಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. … Read more

ಮನೆ ಅಂಗಳಕ್ಕೆ ಬಂದು ಮಲಗಿದ್ದ ನಾಯಿಯ ಕೊರಳಿಗೆ ಬಾಯಿ ಹಾಕಿದ ಚಿರತೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

Leopard-attack-on-dog-at-hosanagara

SHIVAMOGGA LIVE NEWS | 9 JANUARY 2025 ಹೊಸನಗರ : ಮನೆ ಮುಂದೆ ಮಲಗಿದ್ದ ಸಾಕುನಾಯಿಯನ್ನು ಚಿರತೆ (leopard) ಹೊತ್ತೊಯ್ದಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಸನಗರ ತಾಲೂಕು ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಗ ಗ್ರಾಮದ ಮಂಜಪ್ಪಗೌಡ ಅವರ ಮನೆ ಮುಂದೆ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ತಡರಾತ್ರಿ ನಾಯಿಗಳು ಜೋರಾಗಿ ಬೊಗಳಿದ್ದವು. ಬೆಳಗ್ಗೆ ಮನೆಯವರು ಹುಡುಕಿದಾಗ ನಾಯಿ ಕಾಣಿಸಿರಲಿಲ್ಲ. ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬಳೆಕಿಗೆ ಬಂದಿದೆ. ಸಿಸಿಟಿವಿ ವಿಡಿಯೋದಲ್ಲಿ ಏನಿದೆ? ತಡರಾತ್ರಿ ಚಿರತೆಯೊಂದು ಮನೆ … Read more

ಅಡಿಕೆ ತೋಟಕ್ಕೆ ಬಂದಿದ್ದ ಹೆಣ್ಣು ಚಿರತೆ ಬೋನಿಗೆ

leopard-caught-near-shikaripura.

SHIVAMOGGA LIVE NEWS | 3 APRIL 2024 SHIKARIPURA : ಅಡಿಕೆ ತೋಟದ ಕೊಳವೆ ಬಾವಿಯಲ್ಲಿ ನೀರು ಕುಡಿಯಲು ಬರುತ್ತಿದ್ದ ಮೂರವರೆ ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಶಿಕಾರಿಪುರ ಪಟ್ಟಣದ ಸಮೀಪದ ಮದಗ ಹಾರನಹಳ್ಳಿಯಲ್ಲಿ ಚಿರತೆ ಸೆರೆಯಾಗಿದೆ. ಗ್ರಾಮದ ಸಮೀಪದ ಗುಡ್ಡವನ್ನು ಒಳಗೊಂಡಿರುವ ಚಂದ್ರಕಲಾ ಅರಣ್ಯಪ್ರದೇಶದಲ್ಲಿ ಚಿರತೆಗಳು ಇದ್ದು, ಕಾಡಿನಲ್ಲಿ ನೀರು, ಆಹಾರಕ್ಕೆ ಕೊರತೆ ಆಗಿರುವುದರಿಂದ ನಾಡಿನತ್ತ ಬರುತ್ತಿವೆ ಎನ್ನಲಾಗಿದೆ. ಈ ಚಿರತೆ ಸ್ಥಳೀಯವಾಗಿ ನಾಯಿ ಹೊತ್ತೊಯ್ದಿರುವ ಬಗ್ಗೆಯೂ ಸ್ಥಳೀಯರು … Read more

ನವುಲೆ ಸುತ್ತಮುತ್ತ ಚಿರತೆ ಬಂತು ಚಿರತೆ, ವಾಟ್ಸಪ್‌ನಲ್ಲಿ ವದಂತಿ

020921 Navule Road Light Inauguration

SHIVAMOGGA LIVE NEWS | 1 APRIL 2024 SHIMOGA : ನವುಲೆ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿರುವ ವಂದತಿ ಹಬ್ಬಿದೆ. ಇದರು ಅಕ್ಕಪಕ್ಕದ ಬಡಾವಣೆ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಇನ್ನು, ಈ ಕುರಿತು ಪರಿಶೀಲಿಸಿ ಬೋನ್‌ ಇರಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನವುಲೆ, ಧವಳಗಿರಿ, ಇಂದಿರಾ ಬಡಾವಣೆ, ಶಿವಬಸವನಗರ, ಬಂಜಾರ ಸಭಾ ಭವನ, ಅರುಣೋದಯ ಶಾಲೆ ಹಿಂಭಾಗದ ಪ್ರದೇಶ, ಹೆಗ್ಗೇರಿ, ಶ್ರೀ ವೀರಭದ್ರೇಶ್ವರ ಬಡಾವಣೆ, ಸಾನ್ವಿ ಲೇಔಟ್‌ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ಬಳಿ ಚಿರತೆ ಕಾಣಿಸಿಕೊಂಡಿದೆ … Read more

ಹಣಗೆರೆ ರಸ್ತೆಯಲ್ಲಿ ಚಿರತೆ ಮೃತದೇಹ ಪತ್ತೆ, ಅಪಘಾತಕ್ಕೆ ಬಲಿ ಶಂಕೆ

leopard-found-near-ayanuru-in-hanagere-road-in-Shimoga

SHIVAMOGGA LIVE NEWS | 7 FEBRUARY 2024 SHIMOGA : ಹಣಗೆರೆ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಎರಡು ವರ್ಷದ ಗಂಡು ಚಿರತೆ ಮೃತಪಟ್ಟಿದೆ. ಹಣಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ಕಲ್ಲುಕುರ್ಚಿ ಗ್ರಾಮದ ಬಳಿ ಮಂಗಳವಾರ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ರಕ್ತದ ಕಲೆಗಳು ಹಾಗೂ ಪಕ್ಕದಲ್ಲಿ ಬಿದ್ದ ಚಿರತೆಯನ್ನು ಕಂಡು ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ವನ್ಯಜೀವಿ ವಿಭಾಗದ ಡಿಸಿಎಫ್‌ ಪ್ರಸನ್ನ ಪಟೆಗಾರ್ … Read more

ಹಸುಗಳು ಹಿಂತಿರುಗುತ್ತಿಲ್ಲ, ಜಮೀನಿನಲ್ಲಿ ಬೆಳೆ ಉಳಿಯುತ್ತಿಲ್ಲ, ಹೊರಗೆ ಓಡಾಡಲು ಜನರಿಗೆ ಜೀವ ಭಯ

Wild-animals-disturb-Areca-plants-near-channagonda-in-Sagara-Bykodu

SHIVAMOGGA LIVE NEWS | 28 NOVEMBER 2023 BYKODU : ಒಂದೆಡೆ ಚಿರತೆ ಜಾನುವಾರುಗಳನ್ನು ಭಕ್ಷಿಸುತ್ತಿದ್ದು ಮತ್ತೊಂದೆಡೆ ವನ್ಯಜೀವಿಗಳ ದಾಳಿಗೆ ಬೆಳೆ ಹಾನಿ ಸಂಭವಿಸುತ್ತಿದೆ. ಇದರಿಂದ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೃಷಿಕರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಜಾನುವಾರುಗಳನ್ನು ಭಕ್ಷಿಸಿದ ಚಿರತೆ ಚನ್ನಗೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಗ್ಗಲಿನ ಸುತ್ತಮುತ್ತ ಒಂದು ವಾರದಿಂದ ಜಾನುವಾರಗಳ ಮೇಲೆ ಚಿರತೆ ದಾಳಿ ಮಾಡುತ್ತಿದೆ. ಸುಮಾರು ನಾಲ್ಕೈದು ಹಸು, ಕರುಗಳನ್ನು ಹಿಡಿದು ತಿಂದಿದೆ ಎಂದು ಹೇಳಲಾಗುತ್ತಿದೆ. … Read more