ಇನ್ಮುಂದೆ ಶಿವಮೊಗ್ಗ ನಗರದಲ್ಲಿ ಕಸ ವಿಂಗಡಣೆ ಕಡ್ಡಾಯ, ವಾರದಲ್ಲಿ ಎರಡು ದಿನ ಮಾತ್ರ ಒಣ ಕಸ ಸಂಗ್ರಹ

Mahanagara-Palike-Shivamogga

ಶಿವಮೊಗ್ಗ ಲೈವ್.ಕಾಂ |SHIMOGA NEWS | 25 NOVEMBER 2020 ಹಸಿ ಮತ್ತು ಒಣ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಇನ್ಮುಂದೆ ಕಸ ವಿಂಗಡಣೆ ಮಾಡದೆ ಕಸ ಸಂಗ್ರಹಿಸುವ ಗಾಡಿಗೆ ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಕಮಿಷನರ್ ಎಚ್ಚರಿಸಿದ್ದಾರೆ. ಎರಡು ದಿನ ಮಾತ್ರ ಒಣ ಕಸ ಸಂಗ್ರಹ ಹಸಿ ಕಸವನ್ನು ವಾರದ ಎಲ್ಲ ದಿನವು ಸಂಗ್ರಹಿಸಲಾಗುತ್ತದೆ. ವಾರದ ಎರಡು ದಿನ ಮಾತ್ರ ಒಣ ಕಸ ಸಂಗ್ರಹಿಸಲು ನಿರ್ಧರಿಸಲಾಗಿದೆ. ಭಾನುವಾರ ಮತ್ತು … Read more

ನಂಜ್ಪಪ್ಪ, ಮ್ಯಾಕ್ಸ್ ಆಸ್ಪತ್ರೆಗಳ ಬಳಿ ಟ್ರಾಫಿಕ್ ಜಾಮ್, ಪರಿಶೀಲನೆಗಿಳಿದ ಮೇಯರ್, ಉಪಮೇಯರ್, ಪರಿಹಾರದ ಚರ್ಚೆ

181120 Mayor Deputy Mayor Visit Traffic Jam Spots 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 18 NOVEMBER 2020 ಕುವೆಂಪು ರಸ್ತೆಗೆ ಹೊಂದಿಕೊಂಡಂತೆ ಇರುವ ಖಾಸಗಿ ಆಸ್ಪತ್ರೆಗಳ ಬಳಿ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಕುರಿತು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಮತ್ತು ಕಾರ್ಪೊರೇಟರ್‍ಗಳು ಪರಿಶೀಲನೆ ನಡೆಸಿದರು. ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಕಮಿಷನರ್ ಚಿದಾನಂದ ವಟಾರೆ, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ನೇತೃತ್ವದ ನಿಯೋಗ ಟ್ರಾಫಿಕ್ ಸಮಸ್ಯೆ ಕುರಿತು ಪರಿಶೀಲನೆ ನಡೆಸಿತು. ಯಾವಾಗಲೂ ಟ್ರಾಫಿಕ್ ಜಾಮ್ ನಂಜಪ್ಪ ಆಸ್ಪತ್ರೆ, ಮ್ಯಾಕ್ಸ್ … Read more

ಹಳೆ ಚರಂಡಿ ಮೇಲೆ ಹೊಸ ಚರಂಡಿ, ಬೇಲಿ ಉಳಿಸೋಕೆ ರಸ್ತೆ ಒತ್ತುವರಿ, ಶಿವಮೊಗ್ಗ ಪಾಲಿಕೆ ವಿರುದ್ಧ ಆಕ್ರೋಶ

051120 Former MLA Pasanna Kumar Visit Ashok Nagara 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 NOVEMBER 2020 ಹಳೆ ಬಾಕ್ಸ್ ಚರಂಡಿ ತೆರವುಗೊಳಿಸದೆ, ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ಹೊಸ ಬಾಕ್ಸ್ ಚರಂಡಿ ನಿರ್ಮಿಸುತ್ತಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಕ್ರಮಕ್ಕೆ ಅಶೋಕನಗರ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ಅಧಿಕಾರಿಗಳ ವಿರುದ್ಧ ಗರಂ ಆದರು. ಅಮೃತ್ ಯೋಜನೆ ಅಡಿಯಲ್ಲಿ ಅಶೋಕ ನಗರದಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗುತ್ತಿದೆ. ಆದರೆ … Read more

ಕೋವಿಡ್ ಡ್ಯೂಟಿ ಮಾಡುತ್ತಲೇ ಕರೋನಾಗೆ ಬಲಿ, ಆದರೂ ಇವರು ವಾರಿಯರ್ ಅಲ್ಲ, ಕುಟುಂಬಕ್ಕೆ ಪರಿಹಾರವು ಇಲ್ಲ

311020 Papa Naik Corona Death News 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಅಕ್ಟೋಬರ್ 2020 ಕರೋನದಿಂದ ಮೃತಪಟ್ಟ ನೂರಕ್ಕೂ ಹೆಚ್ಚು ಜನರ ದಹನ ಮಾಡಿದ್ದರು. ಕೊನೆಗೆ ಅದೆ ಕಾಯಿಲೆಗೆ ತುತ್ತಾಗಿ ಮೃತಪಟ್ಟರು. ಆದರೆ ಆತನನ್ನು ಕರೋನ ವಾರಿಯರ್ ಎಂದು ಒಪ್ಪುತ್ತಿಲ್ಲ ಸರ್ಕಾರ. ಇದು ಶಿವಮೊಗ್ಗದ ಪಾಪನಾಯ್ಕ ಅವರ ದುರಂತ ಕಥೆ. ಅನಿಲ ಚಿತಾಗಾರದ ಹೊರಗುತ್ತಿಗೆ ನೌಕರರಾಗಿದ್ದರು ಪಾಪನಾಯ್ಕ. ಸುಮಾರು ಒಂದು ವರ್ಷದಿಂದ ಈ ಕೆಲಸ ಮಾಡುತ್ತಿದ್ದರು. ಇದೆ ಕೆಲಸದಲ್ಲಿದ್ದಾಗ ಕರೋನಾಗೆ ತುತ್ತಾಗಿ ಮೃತರಾದರು. ಕರೋನ ಡ್ಯೂಟಿ ವೇಳೆ ಸೋಂಕು ಕರೋನ … Read more

ಶಿವಮೊಗ್ಗಕ್ಕೆ ಸಿಎಂ ಭೇಟಿ, ಅವರು ಓಡಾಡೋ ರಸ್ತೆಯಲ್ಲಿದ್ದ ಗುಂಡಿಗಳೆಲ್ಲ ಮಂಗಮಾಯ

251020 potholes closed in shimoga for cm visit 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಅಕ್ಟೋಬರ್ 2020 ಸ್ಮಾರ್ಟ್‍ ಸಿಟಿ ಕಾಮಗಾರಿ, ಮಳೆಯಿಂದಾಗಿ ಬಾಯ್ತೆರೆದು ಅಪಘಾತಕ್ಕೆ ಕಾರಣವಾಗಿದ್ದ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆ. ಸಿಎಂ ಯಡಿಯೂರಪ್ಪ ಅವರ ಭೇಟಿಯೇ ಇದಕ್ಕೆ ಕಾರಣ. ಹೌದು. ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗ ಭೇಟಿ ಹಿನ್ನೆಲೆ, ಅವರು ಸಾಗುವ ಪ್ರಮುಖ ರಸ್ತೆಗಳಲ್ಲಿ ತೇಪೆ ಕಾರ್ಯ ನಡೆಸಿದೆ. ಗುಂಡಿಗಳಿಗೆ ಕಾಂಕ್ರೀಟ್ ತೇಪೆ ಹಾಕಲಾಗಿದೆ. ಸಿಎಂ ಸಂಚರಿಸುವ ಎಲ್ಲಾ ರಸ್ತೆಗಳಲ್ಲಿ ಇದ್ದ ಗುಂಡಿ ನಿನ್ನೆಯೇ ಮಾಯವಾಗಿದೆ. ಗುಂಡಿಗಳಿಂದಾಗಿ ಜನರು ಸಂಕಷ್ಟಕ್ಕೀಡಾಗಿ, ಅವುಗಳನ್ನು … Read more

ಸಿಎಂ ಭೇಟಿಯಾದ ಪಾಲಿಕೆ ಕಾಂಗ್ರೆಸ್ ಸದಸ್ಯರು, ಬಾಕಿ ನಾಲ್ಕು ಲಕ್ಷ ಬಿಡುಗಡೆಗೆ ಆಗ್ರಹ

211020 Shimoga Palike Congress Members Meet CM Yedyurappa 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 21 ಅಕ್ಟೋಬರ್ 2020 ಕಳೆದ ವರ್ಷ ಶಿವಮೊಗ್ಗದಲ್ಲಿ ಸುರಿದ ಭಾರಿ ಮಳೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡವರಿಗೆ ಬಾಕಿ ಇರುವ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪಾಲಿಕೆ ಸದಸ್ಯರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೇಶ್ ನೇತೃತ್ವದಲ್ಲಿ ಶಿಕಾರಿಪುರದಲ್ಲಿ ಸಿಎಂ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ನೆರೆ ಸಂದರ್ಭ ಸಿಎಂ ಶಿವಮೊಗ್ಗಕ್ಕೆ … Read more

ಶಿವಮೊಗ್ಗ ದಸರಾ ಶುರು, ಮಹಾನಗರ ಪಾಲಿಕೆಯಲ್ಲಿ ನಾಡದೇವಿ, ಬೆಳ್ಳಿ ಅಂಬಾರಿಗೆ ವಿಶೇಷ ಪೂಜೆ

171020 Shimoga Dasara Pooje in Palike 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಅಕ್ಟೋಬರ್ 2020 ಶಿವಮೊಗ್ಗದಲ್ಲಿ ನಾಡಹಬ್ಬ ಅದ್ಧೂರಿ ಚಾಲನೆ ಸಿಕ್ಕಿದೆ. ಮಹಾನಗರ ಪಾಲಿಕೆಯಲ್ಲಿ ನಾಡದೇವಿಗೆ ಪೂಜೆ ಸಲ್ಲಿಸಿ, ದಸರಾ ಆಚರಣೆಗೆ ಚಾಲನೆ ನೀಡಲಾಯಿತು. ಮಹಾನಗರ ಪಾಲಿಕೆ ಮೇಯರ್‌, ಉಪ ಮೇಯರ್‌, ಸದಸ್ಯರು, ಕಮಿಷನರ್‌, ಪಾಲಿಕೆಯ ಸಿಬ್ಬಂದಿಗಳು ನಾಡದೇವಿಯ ಪೂಜೆಯಲ್ಲಿ ಭಾಗವಹಿಸಿದ್ದರು. ಮುಖ್ಯ ಕಟ್ಟಡದಲ್ಲಿ ಚಾಮುಂಡೇಶ್ವರಿ ಮೂರ್ತಿ, ಅಂಬಾರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಅಂಬಾರಿಯನ್ನು ಕೋಟೆ ರಸ್ತೆಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತರಲಾಗುತ್ತದೆ. ಇಲ್ಲಿ ಕರೋನ ವಾರಿಯರ್ಸ್‌ ಕಡೆಯಿಂದ ಈ … Read more

ಶಿವಮೊಗ್ಗ ದಸರಾಗೆ ಸಿದ್ಧತೆ ಶುರು, ಸೇಫ್ ಲಾಕರ್‌ನಿಂದ ಹೊರ ಬಂತು ಬೆಳ್ಳಿ ಅಂಬಾರಿ, ಬೆಳ್ಳಿಯ ನಾಡದೇವಿ ಮೂರ್ತಿ

161020 Silver Ambari In Shimoga Mahanagara Palike 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಅಕ್ಟೋಬರ್ 2020 ಶಿವಮೊಗ್ಗ ದಸರಾಗೆ ಮಹಾನಗರ ಪಾಲಿಕೆಯಲ್ಲಿ ಸಿದ್ಧತೆ ಆರಂಭವಾಗಿದೆ. ಸೇಫ್‍ ಲಾಕರ್‍ನಲ್ಲಿದ್ದ ನಾಡದೇವತೆ ಚಾಮುಂಡೇಶ್ವರಿಯ ಬೆಳ್ಳಿ ಮೂರ್ತಿ ಮತ್ತು ಅಂಬಾರಿಯನ್ನು ಹೊರಗೆ ತೆಗೆಯಲಾಗಿದೆ. VIDEO REPORT ಮಹಾನಗರ ಪಾಲಿಕೆಯ ಮುಖ್ಯ ಕಟ್ಟಡದಲ್ಲಿ ಇರುವ ಸೇಫ್‍ ಲಾಕರ್‍ನಲ್ಲಿ ಅಂಬಾರಿ ಮತ್ತು ನಾಡ ದೇವಿಯ ಬೆಳ್ಳಿ ಮೂರ್ತಿಯನ್ನು ಇರಿಸಲಾಗಿತ್ತು. ಸಂಪೂರ್ಣ ಬೆಳ್ಳಿಯಿಂದ ಸಿದ್ಧವಾಗಿರುವ ಅಂಬಾರಿ ಮತ್ತು ನಾಡದೇವಿಯ ಮೂರ್ತಿಯನ್ನು ಈ ಲಾಕರ್‍ನಿಂದ ಹೊರತೆಗೆದು ಪಾಲಿಕೆಯಲ್ಲಿ ಸ್ವಚ್ಛಗೊಳಿಸಲಾಯಿತು. ಗೈಡ್‍ ಲೈನ್ಸ್ … Read more

ಶಿವಮೊಗ್ಗ ಮಹಾನಗರ ಪಾಲಿಕೆ ಕಮಿಷನರ್ಗೆ 20 ಸಾವಿರ ದಂಡ

Mahanagara-Palike-Shivamogga

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಅಕ್ಟೋಬರ್ 2020 ಸಕಾಲದಲ್ಲಿ ಉದ್ಯಮ ಪರವಾನಗಿ ನೀಡದೆ ವಿಳಂಬ ಮಾಡಿದ್ದಕ್ಕೆ ಮಹಾನಗರ ಪಾಲಿಕೆ ಆಯುಕ್ತರಿಗೆ ಗ್ರಾಹಕರ ವೇದಿಕೆಯು ದಂಡ ವಿಧಿಸಿ ತೀರ್ಪು ನೀಡಿದೆ. ವುಡ್ ಇಂಡಸ್ಟ್ರಿಗೋಸ್ಕರ ಎಸ್.ಎನ್.ಫಜಲುದ್ದೀನ್ ಎಂಬುವವರು 2018ರ ಜನವರಿ 11ರಂದು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಡತ ಕಳೆದಿರುವುದಾಗಿ ಹೇಳಿದ್ದಕ್ಕೆ 2018ರ ಮೇ 25ರಂದು ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದಾರೆ. ಪರವಾನಗಿಗಾಗಿ 5 ಸಾವಿರ ರೂ. ಚಲನ್ ಕೂಡ ಪಾವತಿಸಿದ್ದಾರೆ. ಸಕಾಲ ಕಾಯಿದೆ ಅಡಿ … Read more

ಶಿವಮೊಗ್ಗ ದಸರಾಗೆ ಸಿದ್ಧತೆ ಶುರು, ಬನ್ನಿ ಮಂಟಪ ನಿರ್ಮಾಣ ಕುರಿತು ಪರಿಶೀಲನೆ

091020 Dasara Preparation in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಅಕ್ಟೋಬರ್ 2020 ಶಿವಮೊಗ್ಗ ದಸರಾಗೆ ಸಿದ್ಧತೆಗಳು ಆರಂಭವಾಗಿದೆ. ಬನ್ನಿ ಮುಡಿಯುವ ಕಾರ್ಯಕ್ರಮದ ಸ್ಥಳ ಪರಿಶೀಲನೆಗಾಗಿ ಮೇಯರ್ ನೇತೃತ್ವದ ತಂಡ ಹಳೆ ಜೈಲು ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ವಿಜಯದಶಮಿಯಂದು ಹಳೆ ಜೈಲು ಆವರಣದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ವೇದಿಕೆ ನಿರ್ಮಾಣ, ಬನ್ನಿ ಮಂಟಪ ನಿರ್ಮಾಣ ಸಂಬಂಧ ಮೇಯರ್ ಸುವರ್ಣಾ ಶಂಕರ್ ನೇತೃತ್ವದಲ್ಲಿ ಕಾರ್ಪೊರೇಟರ್‍ಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇದರ ವಿಡಿಯೋ … Read more