ಸೊಪ್ಪು ತರಲು ಕಾಡಿಗೆ ಹೋಗಿದ್ದ ವ್ಯಕ್ತಿ ಮೇಲೆ ಹಂದಿ ದಾಳಿ
SHIVAMOGGA LIVE NEWS | 10 JULY 2024 SAGARA : ಸೊಪ್ಪು ತರಲು ಕಾಡಿಗೆ (forest) ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡು ಹಂದಿ ದಾಳಿ ಮಾಡಿದೆ. ಕೂಡೂರಿನ ಚೌಡನಾಯ್ಕ (52) ಗಾಯಗೊಂಡವರು. ತುಮರಿ ಸಮೀಪದ ಕಟ್ಟಿನಕಾರು ಗ್ರಾಮದ ಕೂಡೂರಿನ ಬಳಿ ಸೊಪ್ಪಿನ ಬೆಟ್ಟದಲ್ಲಿ ಸೊಪ್ಪು ತರಲು ಹೋಗಿದ್ದಾಗ ಘಟನೆ ಸಂಭವಿಸಿದೆ. ಚೌಡನಾಯ್ಕ ಮೇಲೆ ದಾಳಿ ನಡೆಸಿದ ಹಂದಿ ಕಚ್ಚಿ ಗಾಯಗೊಳಿಸಿದೆ. ರಕ್ತಸ್ರಾವವಾಗಿ ನಿತ್ರಾಣಗೊಂಡಿದ್ದ ಚೌಡನಾಯ್ಕ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಕಾಡು ಹಂದಿಯಿಂದ ಜನರು ಭಯದಲ್ಲಿ ಬದುಕುವಂತಾಗಿದೆ. … Read more