ಕಂಡಲೆಲ್ಲ ಆನೆಗಳ ಹೆಜ್ಜೆ ಗುರುತು, ತೆಂಗಿನ ಮರಗಳು ಬುಡಮೇಲು, ಶಿವಮೊಗ್ಗ ಸಿಟಿ ಸಮೀಪದ ಈ ಹಳ್ಳಿ ಜನರಲ್ಲಿ ದಿಗಿಲು
ಶಿವಮೊಗ್ಗ ಲೈವ್.ಕಾಂ | SHIMOGA NEWS | 5 MAY 2021 ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದಲ್ಲಿ ಕಾಡನೆಗಳು ದಾಳಿ ಮಾಡಿವೆ. ಗದ್ದೆ, ತೊಟದಲ್ಲಿ ಬೆಳೆ ಹಾನಿ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಪುರದಾಳು ಗ್ರಾಮದ ತೋಟವೊಂದಕ್ಕೆ ದಾಳಿ ಮಾಡಿ, ತೆಂಗಿನ ಮರಗಳನ್ನು ಉರುಳಿಸಿವೆ. ಶುಂಠಿ ಹೊಲದಲ್ಲಿ ಓಡಾಡಿ ಬೆಳೆ ಹಾನಿ ಮಾಡಿವೆ. ಹಿಳ್ಳೋಡಿ ಗೋವಿಂದಪ್ಪ, ಶಿವಣ್ಣ ಮತ್ತು ಸುನಿಲ್ ಭಟ್ಟ ಎಂಬುವವರ ತೋಟ, ಹೊಲದಲ್ಲಿ ಕಾಡಾನೆಗಳು ಪುಂಡಾಟ ಮಾಡಿವೆ. ಇಲ್ಲಿನ ಮಲೆಶಂಕರ ಮತ್ತು ಪುರದಾಳು ಗ್ರಾಮಗಳ … Read more