ಹೊಸಮನೆ ವೆಲ್ಡಿಂಗ್ ಶಾಪ್’ಗಳ ವಿರುದ್ಧ ರೊಚ್ಚಿಗೆದ್ದ ಮಹಿಳೆಯರು, ಕೂಡಲೇ ತೆರವಿಗೆ ಒತ್ತಾಯ

ಶಿವಮೊಗ್ಗ ಲೈವ್.ಕಾಂ | SHIMOGA | 6 ಜನವರಿ 2020 ಹೊಸನಮನೆ ಬಡಾವಣೆಯಲ್ಲಿರುವ ವೆಲ್ಡಿಂಗ್ ಶಾಪ್’ಗಳನ್ನು ಕೂಡಲೆ ತೆರವು ಮಾಡಬೇಕು ಅಂತಾ ಹೊಸಮನೆ ಬಡಾವಣೆ ನಾಗರಿಕ ಒಕ್ಕೂಟ ಒತ್ತಾಯಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. ವೆಲ್ಡಿಂಗ್ ಶಾಪ್’ಗಳು ಇರುವುದರಿಂದ ಬಡಾವಣೆಯಲ್ಲಿ ಜನರು ಮತ್ತು ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಮತ್ತೊಂದೆಡೆ ವೆಲ್ಡಿಂಗ್ ಶಾಪ್’ನಲ್ಲಿ ರಾಡ್ ಬಿದ್ದು ಜ.4ರಂದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹಾಗಾಗಿ ಕೂಡಲೇ ವೆಲ್ಡಿಂಗ್ ಶಾಪ್’ಗಳನ್ನು ತೆರವು ಮಾಡಬೇಕು ಎಂದು … Read more

ಶಿವಮೊಗ್ಗದಲ್ಲಿ ವೈಕುಂಠ ಏಕಾದಶಿ, ದೇವರಿಗೆ ವಿಶೇಷ ಅಲಂಕಾರ, ಪೂಜೆ, ಸ್ವರ್ಗದ ಬಾಗಿಲು ದಾಟಿ ಪುನೀತರಾಗುತ್ತಿರುವ ಭಕ್ತರು

ಶಿವಮೊಗ್ಗ ಲೈವ್.ಕಾಂ | SHIMOGA | 6 ಜನವರಿ 2020 ವೈಕುಂಠ ಏಕಾದಶಿ ಹಿನ್ನೆಲೆ ಶಿವಮೊಗ್ಗ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಇವತ್ತು ಬೆಳಗ್ಗೆಯಿಂದ ವಿಶೇಷ ಪೂಜೆ ನಡೆಯುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಭಕ್ತರು ದೇಗುಲಗಳಿಗೆ ಬಂದು, ಸ್ವಾರ್ಗದ ಬಾಗಿಲು ಪ್ರವೇಶಿಸಿ ಪುನೀತರಾಗುತ್ತಿದ್ದಾರೆ. ಎಲ್ಲೆಲ್ಲಿ ಹೇಗಿದೆ ಪೂಜೆ? ಓಟಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ನಡೆಯುತ್ತಿದೆ. ಅಶ್ವಥನಗರದಲ್ಲಿರುವ ದೇವಗಿರಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ನವುಲೆಯ ಶ್ರೀ ವೆಂಕಟರಮಣ ದೇವಸ್ಥಾನ, ಜಯನಗರದ ರಾಮ … Read more

ಎರಡು ಜಿಂಕೆ ಬೇಟೆಯಾಡಿ, ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್, ನಾಲ್ಕು ಮಂದಿ ಎಸ್ಕೇಪ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 6 ಜನವರಿ 2020 ಎರಡು ಜಿಂಕೆಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಇಬ್ಬರನ್ನು ಬಂಧಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನಾಪತ್ತೆ ಆಗಿರುವ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಶಿವಮೊಗ್ಗ ತಾಲೂಕು ಉಂಬಳೆಬೈಲು ಗ್ರಾಮದಲ್ಲಿ ಘಟನೆ ನಡೆದಿದೆ. ಕಣಗಲಸರ ಗ್ರಾಮದ ದಿನೇಶ್ ಮತ್ತು ರಮೇಶ್ ಬಂಧಿತರು. ಇವರಿಂದ 2 ಜಿಂಕೆ ಚರ್ಮ, ಮಾಂಸ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕಣಗಲಸರದ ದಿವಾಕರ್, ನಾಗರಾಜ್, ಉಂಬಳೆಬೈಲಿನ ಶಿವಾನಂದ್, … Read more

ಕೋಮು ದ್ವೇಷದ ಹೇಳಿಕೆ ನೀಡಿದ ಬಿಜೆಪಿ ಎಂಎಲ್ಎ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ

ಶಿವಮೊಗ್ಗ ಲೈವ್.ಕಾಂ | SHIMOGA | 5 ಜನವರಿ 2020 ಕೋಮು ದ್ವೇಷ ಮೂಡಿಸುವಂತಹ ಹೇಳಿಕೆ ನೀಡಿದ ಶಾಸಕ ಸೋಮಶೇಖರ ರೆಡ್ಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಮನವಿ ಮಾಡಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಮನವಿಯನ್ನು ಸಲ್ಲಿಸಿದೆ. ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮೊಹಮ್ಮದ್ ಆರೀಫ್ ಉಲ್ಲಾ ನೇತೃತ್ವದ ನಿಯೋಗ, ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ಅವರಿಗೆ ಮನವಿ ಸಲ್ಲಿಸಿತು. ಸಂವಿಧಾನಬದ್ಧವಾಗಿ ಜನಪ್ರತಿನಿಧಿಯಾಗಿರುವ ಸೋಮಶೇಖರ ರೆಡ್ಡಿ ಅವರು ಶಾಂತಿ ಭಂಗ … Read more

ಬೆದರಿಕೆ ಕರೆ ಬಳಿಕ ಸಚಿವ ಈಶ್ವರಪ್ಪಗೆ ಸೆಕ್ಯೂರಿಟಿ ಹೆಚ್ಚಳ, ಎಕ್ಸ್ ಕ್ಯಾಲಿಬರ್ ಗನ್ ಇರುವ ಅಂಗ ರಕ್ಷಕನನ್ನು ಒದಗಿಸಿದ ಸರ್ಕಾರ

040120 Gun Man For Eshwarappa 1

ಶಿವಮೊಗ್ಗ ಲೈವ್.ಕಾಂ | SHIMOGA | 4 ಜನವರಿ 2020 ಜೀವ ಬೆದರಿಕೆ ಕರೆ ಬಂದ ಹಿನ್ನೆಲೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಭದ್ರತೆ ಹೆಚ್ಚಿಸಲಾಗಿದೆ. ವಿಶೇಷ ಗನ್ ಮತ್ತು ಹೆಚ್ಚುವರಿ ಅಂಗ ರಕ್ಷಕನನ್ನು ಸರ್ಕಾರ ಒದಗಿಸಿದೆ. ವಿಶೇಷ ಗನ್, ಪ್ರತ್ಯೇಕ ಅಂಗ ರಕ್ಷಕ ಈವರೆಗೂ ಸಚಿವ ಈಶ್ವರಪ್ಪ ಅವರಿಗೆ ಎಸ್ಕಾರ್ಟ್ ಮತ್ತು ಗನ್ ಮ್ಯಾನ್ ಒದಗಿಸಲಾಗಿತ್ತು. ಬೆದರಿಕೆ ಕರೆ ಬಂದ ಹಿನ್ನೆಲೆ, ಹೆಚ್ಚುವರಿ ಅಂಗ ರಕ್ಷಕನನ್ನು ಒದಗಿಸಲಾಗಿದೆ. ಈ ಅಂಗ ರಕ್ಷಕನಿಗೆ ಎಕ್ಸ್ ಕ್ಯಾಲಿಬರ್ ಮೆಷಿನ್ … Read more

ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ, ಸಂಬಂಧಿಕರಿಂದ ಕೊಲೆ ಆರೋಪ

Suicide-Hanging-General

ಶಿವಮೊಗ್ಗ ಲೈವ್.ಕಾಂ | BHADRAVATHI| 4 ಜನವರಿ 2020 ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭದ್ರಾವತಿ ತಾಲೂಕು ಮೈದೊಳಲು ಗ್ರಾಮದಲ್ಲಿ ಘಟನೆ ನಡೆದಿದೆ. ದೀಪಾ (25) ಮೃತ ದುರ್ದೈವಿ. ಮೈದೊಳಲು ಗ್ರಾಮದ ಪ್ರದೀಪ್ ಎಂಬುವವರೊಂದಿಗೆ ದೀಪಾ ವಿವಾಹವಾಗಿದ್ದರು. ಐದು ವರ್ಷದಿಂದಲು ಮಕ್ಕಳಾಗಿರಲಿಲ್ಲ ಎಂದು ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದು ದೀಪಾ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ದೀಪಾಳ … Read more

ಇನ್ಮುಂದೆ ಶಿವಮೊಗ್ಗ ತಿರುಪತಿ ರೈಲು 2 ದಿನಕ್ಕೆ ವಿಸ್ತರಣೆ, ಯಾವ್ಯಾವತ್ತು ಶಿವಮೊಗ್ಗದಿಂದ ಹೊರಡತ್ತೆ? ಸೇವೆ ಅರಂಭ ಯಾವಾಗ ಗೊತ್ತಾ?

Shivamogga Board General Image 1

ಶಿವಮೊಗ್ಗ ಲೈವ್.ಕಾಂ | SHIMOGA | 3 ಜನವರಿ 2020 ತಿರುಪತಿಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ – ರೇಣಿಗುಂಟ ರೈಲು ಒಂದು ದಿನದ ಬದಲು ಇನ್ಮುಂದೆ ಎರಡು ದಿನ ಶಿವಮೊಗ್ಗದಿಂದ ಸಂಚರಿಸಲಿದೆ. ಈ ಕುರಿತು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ನವೆಂಬರ್’ನಲ್ಲಿ ಶಿವಮೊಗ್ಗ – ರೇಣಿಗುಂಟ – ಶಿವಮೊಗ್ಗ ರೈಲು ಸೇವೆ ಆರಂಭವಾಗಿತ್ತು. ವಾರದಲ್ಲಿ ಒಂದು ದಿನಕ್ಕಷ್ಟೇ ರೈಲು ಸಂಚಾರ ಸೀಮಿತವಾಗಿತ್ತು. ಪ್ರತಿ ಬುಧವಾರ ಶಿವಮೊಗ್ಗದಿಂದ ರೇಣಿಗುಂಟಕ್ಕೆ ತೆರಳಿ ಬುಧವಾರ ಬೆಳಗ್ಗೆ ಹಿಂತಿರುಗುತಿತ್ತು. ಈಗ ಇದನ್ನು … Read more

ಜಗಳವಾಡುತ್ತಲೇ ಹೆಂಡತಿಗೆ ಇರಿದ ಗಂಡ, ಚಾಕು ಸಹಿತ ಪೊಲೀಸ್ ಸ್ಟೇಷನ್’ಗೆ ಬಂದ, ಘಟನೆಗೇನು ಕಾರಣ ಗೊತ್ತಾ?

030120 Wife Attacked 1

ಶಿವಮೊಗ್ಗ ಲೈವ್.ಕಾಂ | SHIMOGA | 3 ಜನವರಿ 2020 ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದ ಮಿಳಘಟ್ಟದಲ್ಲಿ ಘಟನೆ ನಡೆದಿದೆ. ಆರ್ಮುಗಂ ಎಂಬಾತ ತನ್ನ ಪತ್ನಿ ಅಂಜಲಿಗೆ ಚಾಕು ಇರಿದಿದ್ದಾನೆ. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿ ಅವರನ್ನು ಆಕೆಯ ತಂದೆ ಪೂಮಲೈ, ಅಕ್ಕಪಕ್ಕದ ಮನೆಯವರ ನೆರವಿನೊಂದಿಗೆ ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂಜಲಿ ಸ್ಥಿತಿ ಗಂಭೀರವಾಗಿದೆ. ಘಟನೆ ಬಳಿಕ … Read more

ಫೇಸ್’ಬುಕ್ ಗ್ರೂಪ್’ನಲ್ಲಿ ಮಾಜಿ ಮಿನಿಸ್ಟರ್’ಗೆ ಅವಮಾನ, ಅಡ್ಮಿನ್’ಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಶಿವಮೊಗ್ಗ ಲೈವ್.ಕಾಂ | SHIMOGA | 3 ಜನವರಿ 2020 ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಡಿ.ಕೆ.ಶಿವಕುಮಾರ್ ಅಭಿಮಾನಿ ಸಂಘದ ವತಿಯಿಂದ ಇಂದು ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಸಚಿವ  ಡಿ.ಕೆ.ಶಿವಕುಮಾರ್ ಅವರ ಫೋಟೋವನ್ನು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಅವರ ಘನತೆಗೆ ಕುಂದುಂಟಾಗಿದೆ. ಭರತ್ ರಾಜ್ ಪೂಜಾರಿ, ರಾಹುಲ್ ರೌನ್ಸಿವಿನ್ಸಿ … Read more

ವಿದ್ಯಾನಗರ ರೈಲ್ವೆ ನಿಲ್ದಾಣದ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಮಹಿಳೆ ಶವ ಪತ್ತೆ

ಶಿವಮೊಗ್ಗ ಲೈವ್.ಕಾಂ | SHIMOGA | 2 ಜನವರಿ 2020 ರೈಲ್ವೆ ನಿಲ್ದಾಣದ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಮೃತದೇಹವು ಕೊಳೆತ ಸ್ಥತಿಯಲ್ಲಿ ಪತ್ತೆಯಾಗಿದ್ದು, ಗುರುತಿಸಲು ಅಸಾಧ್ಯವಾಗಿದೆ. ಮಹಾದೇವಿ ಟಾಕೀಸ್ ರೈಲ್ವೆ ನಿಲ್ದಾಣದ ಪಾರ್ಕಿಂಗ್’ನಲ್ಲಿ ಘಟನೆ ನಡೆದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಹತ್ತು ದಿನದ ಹಿಂದೆ, ಅಪರಿಚಿತ ವ್ಯಕ್ತಿಯೊಬ್ಬ KA 20 MA 8877 ನಂಬರಿನ ಮಾರುತಿ ಓಮ್ನಿ ಕಾರನ್ನು ತಂದ ರೈಲ್ವೆ … Read more