ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ 15ಕ್ಕೂ ಹೆಚ್ಚು ರೈತರು ಅರೆಸ್ಟ್

ಶಿವಮೊಗ್ಗ ಲೈವ್.ಕಾಂ | SHIMOGA | 2 ಜನವರಿ 2020 ತುಮಕೂರಿಗೆ ಹೊರಟಿದ್ದ 15ಕ್ಕೂ ಹೆಚ್ಚು ರೈತರನ್ನು ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಳಗ್ಗೆ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲೇ ರೈತರನ್ನು ತಡೆದ ಪೊಲೀಸರು, ಬಂಧಿಸಿದ್ದಾರೆ. ಪೊಲೀಸರು ರೈತರನ್ನು ತಡೆಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ರೈತರ ಬಂಧನಕ್ಕೆ ಕಾರಣವೇನು? ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ತುಮಕೂರಿಗೆ ಭೇಟಿ ನೀಡುತ್ತಿದ್ದಾರೆ. ವಿವಿಧ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ … Read more

ಆನಂದಪುರದಲ್ಲಿ ಅಪರೂಪದ ಮಿಥುನ ಶಿಲ್ಪಗಳು ಪತ್ತೆ, ಶಿವಮೊಗಕ್ಕೆ ಶಿಫ್ಟ್, ಏನಿದು ಮಿಥುನ ಶಿಲ್ಪ? ಹಿನ್ನೆಲೆ ಏನು ಗೊತ್ತಾ?

311219 Mithuna Shilpa in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 31 ಡಿಸೆಂಬರ್ 2019 ಸಾಗರ ತಾಲೂಕಿನ ಆನಂದಪುರದ ಕೆರೆ ಏರಿ ಮೇಲೆ ಮಿಥುನ ಶಿಲ್ಪಗಳು ಪತ್ತೆಯಾಗಿವೆ. ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು, ಈ ಶಿಲ್ಪಗಳನ್ನು ಶಿವಪ್ಪನಾಯಕನ ಕೋಟೆ ಆವರಣಕ್ಕೆ ತಂದಿರಿಸಿವೆ. ಮಿಥುನ ಶಿಲ್ಪಗಳು ಶಿವಮೊಗ್ಗದಲ್ಲಿ ಅತ್ಯಂತ ಅಪರೂಪ. ಫಲವತ್ತತೆಯ ಸಂಕೇತವಾಗಿರುವ ಈ ಶಿಲ್ಪಗಳು, ಕೆರೆಗಳ ಬಳಿಯಲ್ಲಿ ಅತಿ ಹೆಚ್ಚಾಗಲಿ ಸಿಗಲಿವೆ ಅನ್ನುತ್ತಾರೆ ಸಹಾಯಕ ನಿರ್ದೇಶಕ ಶೇಜೇಶ್ವರ. ಶಿವಪ್ಪನಾಯಕ ಅರಮನೆ ಆವರಣದಲ್ಲಿ ಶಿಲ್ಪಗಳನ್ನು ಸ್ವಚ್ಛಗೊಳಿಸಿ, ಅವುಗಳನ್ನು ಅಲ್ಲಿಯೇ ಇರಿಸಲು ನಿರ್ಧರಿಸಲಾಗಿದೆ. … Read more

ತಾಳಗುಪ್ಪದಲ್ಲೇ ಆಗಬೇಕು ರೈಲ್ವೆ ಟರ್ಮಿನಲ್, ಕೊಂಕಣ ರೈಲ್ವೆಗೂ ಬೇಕು ಕನೆಕ್ಷನ್, ಸಾಗರ ರೈಲ್ವೆ ಸ್ಟೇಷನ್ ಮುಂದೆ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | SAGARA | 31 ಡಿಸೆಂಬರ್ 2019 ತಾಳಗುಪ್ಪದಲ್ಲೇ ರೈಲ್ವೆ ಟರ್ಮಿನಲ್ ನಿರ್ಮಿಸಬೇಕು ಮತ್ತು ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿ ಮಲೆನಾಡು ರೈಲ್ವೆ ಹೋರಾಟ ಸಮಿತಿ ನೇತೃತ್ವದಲ್ಲಿ ಇವತ್ತು ಪ್ರತಿಭಟನೆ ನಡೆಸಲಾಯಿತು. ಗಣಪತಿ ದೇವಸ್ಥಾನದಿಂದ ಸಾಗರ ರೈಲ್ವೆ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಯಿತು. ತಾಳಗುಪ್ಪದಲ್ಲೇ ರೈಲ್ವೆ ಟರ್ಮಿನಲ್ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಾಗರ ತಾಲೂಕು ತಾಳಗುಪ್ಪದಲ್ಲಿ ರೈಲ್ವೆ ಟರ್ಮಿನಲ್ ನಿರ್ಮಿಸಲಾಗತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ ಶಿವಮೊಗ್ಗದ ಕೋಟೆ ಗಂಗೂರಿನಲ್ಲಿ ಟರ್ಮಿನಲ್ … Read more

ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಗೆ ಸಿದ್ಧತೆ ಜೋರು, ಬರ್ತಿದ್ದಾರೆ ಸಿನಿಮಾ ಸ್ಟಾರ್’ಗಳು, ಎಲ್ಲೆಲ್ಲೂ ಬಿಗಿ ಬಂದೋಬಸ್ತ್

ಶಿವಮೊಗ್ಗ ಲೈವ್.ಕಾಂ | SHIMOGA | 31 ಡಿಸೆಂಬರ್ 2019 ಹೊಸ ವರ್ಷದ ಸ್ವಾಗತಕ್ಕೆ ಶಿವಮೊಗ್ಗದಲ್ಲಿ ಜನರು ಕಾತುರವಾಗಿದ್ದಾರೆ. ವಿವಿಧೆಡೆ ಹೊಟೇಲ್, ಕ್ಲಬ್ಬುಗಳಲ್ಲಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಶಿವಮೊಗ್ಗದ ಪ್ರಮುಖ ಹೊಟೇಲ್’ಗಳಲ್ಲಿ ನ್ಯೂ ಇಯರ್ ಸೆಲಬ್ರೇಷನ್ ನಡೆಯುತ್ತಿದೆ. ಇನ್ನು, ಕ್ಲಬ್’ಗಳಲ್ಲೂ ಪಾರ್ಟಿಗಳನ್ನು ಅರೇಂಜ್ ಮಾಡಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಇಲ್ಲಿ ಭಾಗವಹಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಸೆಲಬ್ರಿಟಿ ಶೋ ಹೊಸ ವರ್ಷದ ಸ್ವಾಗತಕ್ಕೆ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಸೆಲಬ್ರಿಟಿ ಷೋ ಆಯೋಜಿಸಲಾಗಿದೆ. ನಿದಿಗೆ ಕೆರೆ … Read more

ಜಿಲ್ಲಾ ಪಂಚಾಯಿತಿ ಸದಸ್ಯೆಯನ್ನು ಅರೆಸ್ಟ್ ಮಾಡಿದ ಪೊಲೀಸ್, ಆನಂದಪುರ ಆಹಾರ ಘಟಕದ ಮುಂದೆ ಹೈಡ್ರಾಮಾ

ಶಿವಮೊಗ್ಗ ಲೈವ್.ಕಾಂ | SHIMOGA | 30 ಡಿಸೆಂಬರ್ 2019 ಪೌಷ್ಠಿಕ ಆಹಾರ ಘಟಕ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ ನಡೆಸಿದ ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರನ್ನು, ಪೊಲೀಸರು ಬಂಧಿಸಿದ್ದಾರೆ. ಇದರಿಂದಾಗಿ ಕೆಲಕಾಲ ಆನಂದಪುರದ ಆಹಾರ ಘಟಕದ ಮುಂದೆ ಹೈಡ್ರಾಮಾ ನಡೆಯಿತು. ಈ ವೇಳೆ, ತಮ್ಮ ಬಂಧನ ಕ್ರಮವೇ ತಪ್ಪು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಆರೋಪ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರತಿಭಟಿಸಿದ್ದೇಕೆ? ಆನಂದಪುರದಲ್ಲಿ ಸಾಗರ ಮತ್ತು ಸೊರಬ ತಾಲೂಕು ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಘಟಕವಿದೆ. … Read more

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 50ಕ್ಕೂ ಹೆಚ್ಚು ಶಕ್ತಿ ದೇವತೆಗಳ ಸಮಾಗಮ, ಹೇಗಿತ್ತು ಕಾರ್ಯಕ್ರಮ? ಹಿನ್ನೆಲೆ ಏನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 30 ಡಿಸೆಂಬರ್ 2019 ಶಿವಮೊಗ್ಗದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಶಕ್ತಿ ದೇವತೆಗಳ ಸಾಮಾಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿವಮೊಗ್ಗ ನಗರದ ವಿವಿಧೆಡೆಯಿಂದ ಸುಮಾರು 50ಕ್ಕೂ ಹೆಚ್ಚು ದೇವತೆಗಳ ಉತ್ಸವ ಮೂರ್ತಿಗಳನ್ನು ಒಂದೆಡೆ ಕಣ್ತುಂಬಿಕೊಳ್ಳುವ ಅವಕಾಶ ಲಭ್ಯವಾಯಿತು. ಭಾರೀ ಸಂಖ್ಯೆಯಲ್ಲಿ ಬಂದ ಭಕ್ತರು, ದೇವರಿಗೆ ಪೂಜೆ ಸಲ್ಲಿಸಿದರು. ಮಹಿಳೆಯರು ಮಡಿಲಕ್ಕಿಯನ್ನು ಅರ್ಪಿಸಿ ಪುನೀತರಾದರು. ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ವಿಶ್ವವ ಹಿಂದೂ ಪರಿಷತ್ ಪ್ರಮುಖ ದೀನದಯಾಳು, ಎಲ್ಲ … Read more

ವಿನೋಬನಗರದಲ್ಲಿ ಡಾಗ್ ಅಂಡ್ ಕ್ಯಾಟ್ ಶೋ, ಹೇಗಿತ್ತು ಪ್ರದರ್ಶನ? ಯಾವ್ಯಾವ ತಳಿಯ ಶ್ವಾನ, ಬೆಕ್ಕುಗಳು ಭಾಗವಹಿಸಿದ್ದವು ಗೊತ್ತಾ?

291219 Dog and Cat Show 1

ಶಿವಮೊಗ್ಗ ಲೈವ್.ಕಾಂ | SHIMOGA | 29 ಡಿಸೆಂಬರ್ 2019 ನಾನಾ ತಳಿಯ ಶ್ವಾನಗಳು. ಎತ್ತಿ ಮುದ್ದಾಡಬೇಕು ಅನಿಸುವ ಬೆಕ್ಕುಗಳು. ನಾಯಿಗಳ ಚಿನ್ನಾಟ. ಬೆಕ್ಕುಗಳ ಮುಗ್ದ ನೋಟ. ಮಕ್ಕಳಿಗೆ ಖುಷಿಯೋ ಖುಷಿ. ಹಿರಿಯರಿಗೆ ಕುತೂಹಲ. ಇದು ಇವತ್ತು ವಿನೋಬನಗರದ ಡಿವಿಎಸ್ ಶಾಲೆ ಆವರಣದಲ್ಲಿ ಕಂಡು ಬಂದ ದೃಶ್ಯ. ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಡಾಗ್ ಅಂಡ್ ಕ್ಯಾಟ್ ಶೋ ಆಯೋಜಿಸಲಾಗಿತ್ತು. ನಾನಾ ತಳಿಯ 250ಕ್ಕೂ ಹೆಚ್ಚು ಶ್ವಾನಗಳು, ಬೆಕ್ಕುಗಳು ಇದರಲ್ಲಿ ಭಾಗವಹಿಸಿದ್ದವು. ಎತ್ತಿ ಮುದ್ದಾಡಿದರು, … Read more

ಊಟ ಮಾಡ್ತಿದ್ದ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷನನ್ನು ಮನೆಯಿಂದ ಹೊರಗೆ ಕರೆಯಿಸಿ ಚೂರಿ ಇರಿತ

ಶಿವಮೊಗ್ಗ ಲೈವ್.ಕಾಂ | BHADRAVATHI | 29 ಡಿಸೆಂಬರ್ 2019 ಭದ್ರಾವತಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಗ್ರಾಮದಲ್ಲಿ ಘಟನೆ ನಡೆದಿದೆ. ಶಾಂತಕುಮಾರ್ (50) ಅವರ ಮೇಲೆ ಹಲ್ಲೆಯಾಗಿದೆ. ಹೇಗಾಯ್ತು ಘಟನೆ? ಕಾರಣವೇನು? ಶನಿವಾರ ರಾತ್ರಿ ಶಾಂತಕುಮಾರ್ ಅವರು ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ, ಅದೇ ಗ್ರಾಮದ ಮೂವರು ಮನೆಗೆ ಬಂದಿದ್ದಾರೆ. ಶಾಂತಕುಮಾರ್ ಅವರನ್ನು … Read more

ಕೋಡೂರು ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಫೋನ್ ಮಾಡಿದ, ಬಟ್ಟಮಲ್ಲಪ್ಪ ಮಹಿಳೆ ಬ್ಯಾಂಕ್ ಖಾತೆಯಿಂದ ಹಣ ದೋಚಿದ

Hosanagara Police Station General Image 1

ಶಿವಮೊಗ್ಗ ಲೈವ್.ಕಾಂ | HOSANAGARA | 29 ಡಿಸೆಂಬರ್ 2019 ಕೋಡೂರು ಕೆನರಾ ಬ್ಯಾಂಕ್’ನ ಅಧಿಕಾರಿ ಎಂದು ನಂಬಿಸಿ ಮಹಿಳೆಯೊಬ್ಬರನ್ನು ವಂಚಿಸಿ, ಅವರ ಅಕೌಂಟ್’ನಿಂದ ಹಣ ದೋಚಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಘಟನೆ? ಹೊಸನಗರ ಬಟ್ಟೆಮಲ್ಲಪ್ಪ ಗ್ರಾಮದ ಛಾಯಾ (23) ಎಂಬುವವರಿಗೆ ವಯಕ್ತಿಯೊಬ್ಬರ ಕರೆ ಮಾಡಿದ್ದಾನೆ. ತನ್ನನ್ನು ಕೋಡೂರು ಕೆನರಾ ಬ್ಯಾಂಕ್ ಅಧಿಕಾರಿ ಎಂದು ಪರಿಚಿಯಿಸಿಕೊಂಡಿದ್ದಾನೆ. ನಿಮ್ಮ ಎಟಿಎಂ ಕಾರ್ಡ್ ಅವಧಿ ಮುಕ್ತಾಯವಾಗಿದೆ. ನವೀಕರಿಸಲು ಎಟಿಎಂ ಕಾರ್ಡ್ … Read more

ವಿಮಾನ ನಿಲ್ದಾಣದಿಂದ ಕುವೆಂಪು ವಿವಿವರೆಗಿನ ರಸ್ತೆ ಉನ್ನತೀಕರಣ, ಶಿವಮೊಗ್ಗ ಸಿಟಿ – ತರೀಕೆರೆ ಮಧ್ಯೆ ಚತುಷ್ಪಥ ರೋಡ್ | ಸಂಸದ ರಾಘವೇಂದ್ರ

Kuvempu-University

ಶಿವಮೊಗ್ಗ ಲೈವ್.ಕಾಂ | SHANKARAGHATTA | 28 ಡಿಸೆಂಬರ್ 2019 ಶಿವಮೊಗ್ಗ ಸಿಟಿ ಮತ್ತು ತರೀಕೆರೆ ನಡುವೆ ಚತುಷ್ಪತ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್’ನಲ್ಲಿ ಆಯೋಜಿಸಿದ್ದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಖೋ ಖೋ ಪಂದ್ಯಾವಳಿಗೆ ಚಾಲನೆ ನೀಡಿದ ಸಂಸದ ರಾಘವೇಂದ್ರ, ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ತ್ವರಿತಗೊಳಿಸಲಾಗುತ್ತಿದೆ. ಇದಕ್ಕಾಗಿ 150 ಕೋಟಿ ರೂ. ಮಂಜೂರು ಮಾಡಲಾಗಿದೆ. ಏರ್’ಪೋರ್ಟ್ ಮತ್ತು ಕುವೆಂಪು ವಿಶ್ವವಿದ್ಯಾಲಯಕ್ಕೆ ಸಂಪರ್ಕ … Read more