ಚಾರಣಿಗರ ಹಾಟ್ ಫೇವರೆಟ್ ಬೆಟ್ಟದ ಮೇಲೆ ಹೊಸ ವರ್ಷಾಚರಣೆಗಿಲ್ಲ ಪರ್ಮಿಷನ್, ರೂಂ ಕೊಡದಂತೆ PWDಗೆ ಲೆಟರ್

Kodachadri Mountain Hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA | 26 ಡಿಸೆಂಬರ್ 2019 ಚಾರಣಿಗರ ಹಾಟ್ ಫೇವರೆಟ್ ತಾಣ ಕೊಡಚಾದ್ರಿ ಗಿರಿ ಮೇಲೆ, ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು, ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ನಿರ್ಧರಿಸಿದೆ. ಬೆಟ್ಟದ ಮೇಲಿರುವ ಪ್ರವಾಸಿ ಮಂದಿರದಲ್ಲಿ ಪ್ರವಾಸಿಗರಿಗೆ ಕೊಠಡಿ ನೀಡದಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದೆ. ಹೊಸ ವರ್ಷಾಚರಣೆಗೇಕೆ ಬ್ರೇಕ್? ಕೊಡಚಾದ್ರಿಯಲ್ಲಿ ಶೋಲಾ ಅರಣ್ಯ ಮತ್ತು ಹುಲ್ಲುಗಾವಲಿದೆ. ಇಲ್ಲಿ ಬಂದು ಹೊಸ ವರ್ಷಾಚರಣೆ ಮಾಡುವವರು ಮೋಜು ಮಸ್ತಿ ಮಾಡುತ್ತಾರೆ, ಫೈರ್ ಕ್ಯಾಂಪ್ ಹಾಕುತ್ತಾರೆ. ಇದರಿಂದ … Read more

ಗ್ರಹಣ ಕಾಲದಲ್ಲಿ ಶಿವಮೊಗ್ಗದ ನ್ಯೂಸ್ ಫೋಟೋಗ್ರಾಫರ್ ಮಾಡಿದ ಕೆಲಸ ದೇಶಾದ್ಯಂತ ವೈರಲ್, ಶಿಕ್ಷಕರೊಬ್ಬರ ಮಾಡೆಲ್’ಗೆ ಸ್ಟೂಡೆಂಟ್ಸ್ ಫಿದಾ

ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019 ಖಗೋಳ ಕುತೂಹಲವನ್ನು ಮಕ್ಕಳಿಗೆ ತೋರಿಸಲು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಶಾಲೆಗಳಲ್ಲಿ ಟೆಲಿಸ್ಕೋಪ್, ವಿಶೇಷ ಮಾದರಿಯ ಕನ್ನಡಕ ಒದಗಿಸಲಾಗಿತ್ತು. ಈ ನಡುವೆ ಶಿವಮೊಗ್ಗದ ನ್ಯೂಸ್ ಫೋಟೊಗ್ರಾಫರ್ ಒಬ್ಬರು, ಸರ್ಕಾರಿ ಶಾಲೆ ಮಕ್ಕಳಿಗೆ ವಿಶೇಷ ವ್ಯವಸ್ಥೆ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಗ್ರಹಣ ದರ್ಶನ ಗ್ರಹಣ ಕುರಿತು ಸರ್ಕಾರಿ ಶಾಲೆ ಮಕ್ಕಳಲ್ಲಿರುವ ಕುತೂಹಲ ತಣಿಸಿ, ಜಾಗೃತಿ ಮೂಡಿಸಲು … Read more

ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತೆ, ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ, ಅಪ್ರಾಪ್ತೆಯ ನಿರ್ಧಾರಕ್ಕೆ ಕಾರಣವೇನು ಗೊತ್ತಾ?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI | 24 ಡಿಸೆಂಬರ್ 2019 ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಅಪ್ರಾಪತ್ತೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಅಕೆಯನ್ನು ಶಿಶು ಮತ್ತು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಿದ್ದಾರೆ. ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಬೈಲು ಗ್ರಾಮದಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ್ದೇಕೆ? ಅಪ್ರಾಪ್ತೆಯು ಶಿಕಾರಿಪುರ ತಾಲೂಕಿ ಗ್ರಾಮವೊಂದಕ್ಕೆ ಸೇರಿದವಳಾಗಿದ್ದಾಳೆ. ತಂದೆ ಮೃತರಾಗಿದ್ದಾರೆ. ತಾಯಿ ಮತ್ತು ಅಣ್ಣಂದಿರು ಮಾತ್ರ ಇದ್ದಾರೆ. ಅಣ್ಣಂದಿರು ಕೂಲಿ ಕೆಲಸ ಮಾಡುತ್ತಿದ್ದಾರೆ. ಅಪ್ರಾಪ್ತೆಯನ್ನು ಶಾಲೆಗೆ ಸೇರಿಸಿ ಓದಿಸುವುದಾಗಿ ತಿಳಿಸಿ … Read more

ಹೊಸ ವರ್ಷಕ್ಕೆ ಶಿವಮೊಗ್ಗದಿಂದ ಮತ್ತೆರಡು ಹೊಸ ರೈಲು ಆರಂಭ, ಸಂಸದ ರಾಘವೇಂದ್ರ ಭರವಸೆ

Train engine and boggies

ಶಿವಮೊಗ್ಗ ಲೈವ್.ಕಾಂ | SHIKARIPURA | 24 ಡಿಸೆಂಬರ್ 2019 ಹೊಸ ವರ್ಷಕ್ಕೆ ಶಿವಮೊಗ್ಗದಿಂದ ಮತ್ತೆರಡು ಹೊಸ ರೈಲು ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಶಿಕಾರಿಪುರದ ಚನ್ನಕೇಶವ ನಗರದಲ್ಲಿ ಸುಗಂಧ ಬಳಗದ 14ನೇ ವರ್ಷದ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಈಗಾಗಲೇ ಶಿವಮೊಗ್ಗದಿಂದ ಚೆನ್ನೈ, ತಿರುಪತಿ, ಮೈಸೂರಿಗೆ ಮೂರು ರೈಲು ಸಂಚಾರ ಆರಂಭಿಸಿವೆ. ಹೊಸ ವರ್ಷಕ್ಕೆ ಇನ್ನು ಎರಡು ಹೊಸ ರೈಲುಗಳ ಸಂಚಾರ ಆರಂಭವಾಗಲಿದೆ ಎಂದರು. ಇನ್ನು ಮೂರು ವರ್ಷದಲ್ಲಿ ಶಿವಮೊಗ್ಗದಿಂದ … Read more

ಭದ್ರಾವತಿಯ ಉಂಬ್ಳೆಬೈಲು ರಸ್ತೆ ಬದಿಯಲ್ಲಿ ಐದು ತಿಂಗಳ ಭ್ರೂಣ ಪತ್ತೆ

ಶಿವಮೊಗ್ಗ ಲೈವ್.ಕಾಂ | BHADRAVATHI | 23 ಡಿಸೆಂಬರ್ 2019 ಬೆಳವಣಿಗೆ ಹಂತದಲ್ಲಿದ್ದ ಆರು ತಿಂಗಳ ಶಿಶುವಿನ ಭ್ರೂಣ ಪತ್ತೆಯಾಗಿದೆ. ರಸ್ತೆ ಬದಿಯಲ್ಲಿ ಭ್ರೂಣವನ್ನು ಬಿಸಾಕಿ ಹೋಗಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಉಂಬ್ಳೆಬೈಲು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಮುಂಭಾಗ ಭ್ರೂಣ ಪತ್ತೆಯಾಗಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರು, ಭ್ರೂಣ ಬಿಸಾಡಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಉಜ್ಜನೀಪುರ ನಗರ ಆರೋಗ್ಯ ಕೇಂದ್ರದ ವೈದ್ಯ ಡಾ.ಗಿರಿಧರ್ … Read more

ಇನ್ಮುಂದೆ ಪ್ರತಿ ತಿಂಗಳು ಒಂದೊಂದು ತಾಲೂಕಿನಲ್ಲಿ ಸಾವಯವ ಸಮಾವೇಶ, ಶಿವಮೊಗ್ಗದಲ್ಲಿ ಸಿಎಂ ಯಡಿಯೂರಪ್ಪ

ಶಿವಮೊಗ್ಗ ಲೈವ್.ಕಾಂ | SHIMOGA | 23 ಡಿಸೆಂಬರ್ 2019 ಮುಂದಿನ ಬಜೆಟ್ ನಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕೃಷಿ ವಲಯದ ಬಲವರ್ಧನೆಗೆ ಹಾಗೂ ನೀರಾವರಿ ಕ್ಷೇತ್ರದ ಬಲವರ್ಧನೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದ ಪಿಇಎಸ್ ಕಾಲೇಜು ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಿದ್ದ ಸುಭಿಕ್ಷ ಸಾವಯವ ಕೃಷಿಕರ ಬಹುರಾಜ್ಯ ಸಹಕಾರ ಸಂಘದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಪ್ರತಿ ತಿಂಗಳು ಒಂದು ತಾಲೂಕಿನಲ್ಲಿ ರೈತರನ್ನು ಉತ್ತೇಜಿಸಲು ಬಜೆಟ್ ಬಳಿಕ … Read more

ಸಿಎಂ ಕಾರು ತಡೆದು, ಪ್ರತಿಭಟಿಸಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು ಅರೆಸ್ಟ್

ಶಿವಮೊಗ್ಗ ಲೈವ್.ಕಾಂ | SHIMOGA | 23 ಡಿಸೆಂಬರ್ 2019 ಶಿವಮೊಗ್ಗಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರು ತಡೆದು, ಪ್ರತಿಭಟನೆ ನಡೆಸಲು ಸಜ್ಜಾಗಿದ್ದ ಕೆಲವು ಕಾಂಗ್ರೆಸ್ ಕಾರ್ಯಕರ್ತರನ್ನು ಅರೆಸ್ಟ್ ಮಾಡಲಾಗಿದೆ. ಸಾಗರ ರಸ್ತೆಯಲ್ಲಿರುವ ಐಬಿ ಬಳಿಕ ಘಟನೆ ನಡೆದಿದೆ. ಬೆಳಗ್ಗೆ ಹೆಲಿಪ್ಯಾಡ್’ಗೆ ಆಗಮಿಸಿದ್ದ ಸಿಎಂ, ಕೆಲಕಾಲ ಶಿವಮೊಗ್ಗ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಪಿಇಎಸ್ ಕಾಲೇಜಿಗೆ ತೆರಳಬೇಕಿತ್ತು. ಈ ವೇಳೆ ಸಾಗರ ರಸ್ತೆಯಲ್ಲಿ ಗುಂಪೊಂದು ಸಿಎಂ ಕಾರು ತಡೆದು, ಪ್ರತಿಭಟನೆ ನಡೆಸಲು … Read more

ಶಿವಮೊಗ್ಗದಲ್ಲಿ ಸಿಎಂ | ಪೊಲೀಸ್ ಸ್ಟೇಷನ್ ಸುಟ್ಟು, ಬಂದೂಕುಗಳ ದುರುಪಯೋಗಕ್ಕೆ ಯತ್ನ, ಗೋಲಿಬಾರ್ ಘಟನೆ ಸಿಐಡಿಗೆ

ಶಿವಮೊಗ್ಗ ಲೈವ್.ಕಾಂ | SHIMOGA | 23 ಡಿಸೆಂಬರ್ 2019 ಮಂಗಳೂರು ಗಲಭೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಸರ್ಕಾರ ನಿರ್ಧರಿಸಿದೆ. ಶಿವಮೊಗ್ಗದಲ್ಲಿ ಈ ಸಂಬಂಧ ಹೇಳಿಕೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮ್ಯಾಜಿಸ್ಟ್ರೇಟ್ ತನಿಖೆ ಜೊತೆಗೆ ಸಿಐಡಿ ತನಿಖೆಯು ನಡೆಯಲಿದೆ ಎಂದರು. ಶಿವಮೊಗ್ಗ ಹೆಲಿಪ್ಯಾಡ್’ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಗಲಭೆ ನಡೆಸುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – 9964634494 … Read more

ಬಿಜೆಪಿಯಿಂದ ದೇಶಭಕ್ತಿಯ ಪ್ರಮಾಣಪತ್ರ ಬೇಕಿಲ್ಲ, ಶಿವಮೊಗ್ಗದಲ್ಲಿ ತಿರುಗೇಟು ಕೊಟ್ಟ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ

ಶಿವಮೊಗ್ಗ ಲೈವ್.ಕಾಂ | SHIMOGA | 21 ಡಿಸೆಂಬರ್ 2019 ದೇಶದ ಯುವಜನರ ಹಾಗೂ ಬಿಜೆಪಿ ವಿರುದ್ಧ ಧ್ವನಿ ಎತ್ತುವವರ ಹತ್ತಿಕ್ಕುವ ಕೆಲಸ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಆರೋಪಿಸಿದರು. ಆದಿಚುಂಚನಗಿರಿ ಕಲ್ಯಾಣಮಂದಿರದಲ್ಲಿ ಜಿಲ್ಲಾ ಎನ್‌ಎಸ್‌ಯುಐನಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶ್ರೀನಿವಾಸ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟುವ ಕೆಲಸವೂ ಬಿಜೆಪಿಯಿಂದ ನಡೆಯುತ್ತಿದೆ. ಹೊಸ ಹೊಸ ಕಾಯ್ದೆ ಕಾನೂನು ರೂಪಿಸುವ ಮುಖಾಂತರ … Read more

13 ವರ್ಷದ ಬಳಿಕ ಕುವೆಂಪು ವಿವಿಯಲ್ಲಿ ಖೋ ಖೋ ಕದನ, 74 ಟೀಂಗಳ ನಡುವೆ ಸೆಣೆಸಾಟ, ಎಲ್ಲೆಲ್ಲಿಂದ ಬರ್ತಿವೆ ಗೊತ್ತಾ ತಂಡಗಳು?

Kuvempu-University

ಶಿವಮೊಗ್ಗ ಲೈವ್.ಕಾಂ | SHIMOGA | 21 ಡಿಸೆಂಬರ್ 2019 ವಿಶ್ವವಿದ್ಯಾನಿಲಯಗಳ ಮಟ್ಟದ ಖೋ ಖೋ ಕದನಕ್ಕೆ ಸಾಕ್ಷಿಯಾಗಲು ಕುವೆಂಪು ವಿಶ್ವವಿದ್ಯಾನಿಲಯ ಸಜ್ಜಾಗುತ್ತಿದೆ. ಡಿಸೆಂಬರ್ 23ರಿಂದ ದಕ್ಷಿಣ ವಲಯ ವಿಶ್ವವಿದ್ಯಾಲಯಗಳ ಮಟ್ಟದ ಪಂದ್ಯಾವಳಿ ನಡೆಯಲಿದೆ. 74 ವಿವಿಗಳ ಖೋ ಖೋ ಟೀಂಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ದಕ್ಷಿಣ ವಲಯ ವಿಶ್ವವಿದ್ಯಾಲಯಗಳ ಖೋ ಖೋ ಪಂದ್ಯಾವಳಲ್ಲಿ ಕರ್ನಾಟಕದ 23, ಆಂಧ್ರಪ್ರದೇಶದ 17, ತೆಲಂಗಾಣದ 9, ಕೇರಳದ 4, ತಮಿಳುನಾಡಿನ … Read more