ಸಿಗಂದೂರು ಬಳಿ ಚಲಿಸುತ್ತಿದ್ದ ಮ್ಯಾಕ್ಸಿ ಕ್ಯಾಬ್ ಬಾಗಿಲು ಓಪನ್, ಕೆಳಗೆ ಬಿದ್ದ ಮಹಿಳೆ ಶಿವಮೊಗ್ಗ ಆಸ್ಪತ್ರೆಗೆ

Sigandur-Launch-General-Image

SHIVAMOGGA LIVE NEWS | 2 NOVEMBER 2022 ಸಾಗರ : ಚಲಿಸುತ್ತಿದ್ದ ಮ್ಯಾಕ್ಸಿ ಕ್ಯಾಬ್ ವಾಹನದ ಬಾಗಿಲು ದಿಢೀರ್ ತೆರೆದುಕೊಂಡಿದ್ದರಿಂದ ಮಹಿಳೆಯೊಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಸಿಗಂದೂರು  (SIGANDUR) ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ (TEMPLE) ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. (accident near sigandur temple) ರತ್ನಮ್ಮ ಎಂಬುವವರು ಗಾಯಗೊಂಡಿದ್ದಾರೆ. ಕುಟುಂಬದೊಂದಿಗೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರು. (accident near sigandur temple) ಲಾಂಚ್ ಮೇಲೆ ವಾಹನ ಬಿಡದ ಹಿನ್ನೆಲೆ, ರತ್ನಮ್ಮ ಅವರ ಕುಟುಂಬದವರು ತಂದಿದ್ದ … Read more

ಸೂರ್ಯ ಗ್ರಹಣ, ಸಿಗಂದೂರು ಭಕ್ತರಿಗೆ ಮಹತ್ವದ ಸೂಚನೆ, ಉಳಿದ ದೇವಸ್ಥಾನಗಳಲ್ಲಿ ಹೇಗಿರುತ್ತೆ ಪರಿಸ್ಥಿತಿ?

Sigandur-Temple-Sagara

SHIMOGA | ಸೂರ್ಯಗ್ರಹಣದ ಹಿನ್ನೆಲೆ ಅ.25ರಂದು ಜಿಲ್ಲೆಯ ಬಹುತೇಕ ದೇವಸ್ಥಾನಗಳನ್ನು ಬಂದ್ ಮಾಡಲಾಗುತ್ತಿದೆ. ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಗ್ರಹಣ ಕಾಲದ ನಂತರ ವಿಶೇಷ ಪೂಜೆ ನಡೆಸಲಾಗುತ್ತದೆ. (solar eclipse) ಅ.25ರಂದು ಸೂರ್ಯಗ್ರಹಣ ಸಂಭವಿಸಲಿದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಹಾದು ಹೋಗಲಿದ್ದಾನೆ. ಈ ವೇಳೆ ಸೂರ್ಯನ ಬೆಳಕು ಭೂಮಿ ಮೇಲೆ ಬೀಳುವುದನ್ನು ಚಂದ್ರ ತಡೆಯಲಿದ್ದಾನೆ. (solar eclipse) (solar eclipse) ಸಿಗಂದೂರಿಗೆ ಭಕ್ತರ ಪ್ರವೇಶವಿಲ್ಲ ಸೂರ್ಯಗ್ರಹಣದ ಹಿನ್ನೆಲೆ ಅ.25ರಂದು ಸಿಗಂದೂರಿನ (SIGANDUR) ಶ್ರೀ ಚೌಡೇಶ್ವರಿ … Read more

ಶಿವಮೊಗ್ಗದಲ್ಲಿ ದೇವಿ ಮೂರ್ತಿಗೆ ಚಾಕ್ಲೇಟ್, ಬಿಸ್ಕೇಟ್ ಅಲಂಕಾರ, ಕಣ್ತುಂಬಿಕೊಳ್ಳಲು ಭಕ್ತರ ದಂಡು

Sigehatti-Antragattamma-temple-navarathri

SHIMOGA | ನವರಾತ್ರಿ ಸಂದರ್ಭ ಎಲ್ಲಾ ದೇವಿಯ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಗುತ್ತದೆ. ಶಿವಮೊಗ್ಗದ ದೇವಸ್ಥಾನವೊಂದರಲ್ಲಿ ದೇವಿಯ ಮೂರ್ತಿಗೆ ಬಿಸ್ಕೇಟ್ (Biscuit), ಚಾಕ್ಲೇಟ್ ನಿಂದ ಅಲಂಕಾರ ಮಾಡಲಾಗಿದೆ. ನಗರದ ಸೀಗೆಹಟ್ಟಿಯ ಶ್ರೀ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ಇವತ್ತು ಅಂತರ ಘಟ್ಟಮ್ಮ ದೇವಿಯ ಮೂರ್ತಿಗೆ ಬೆಣ್ಣೆ, ಬಿಸ್ಕೇಟ್ (Biscuit), ಚಾಕ್ಲೇಟ್ ನಿಂದ ಅಲಂಕಾರ ಮಾಡಲಾಗಿದೆ. ಇವತ್ತು ಮಧ್ಯಾಹ್ನ 12 ಗಂಟೆವರೆಗೆ ಈ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಅವಕಾಶವಿದೆ. ನವರಾತ್ರಿ ಅಂಗವಾಗಿ ಶ್ರೀ ಅಂತರಘಟ್ಟಮ್ಮ ದೇವಿ ದೇವಸ್ಥಾನದಲ್ಲಿ ನಿತ್ಯ ಒಂದೊಂದು … Read more

ಥೈಲ್ಯಾಂಡ್, ಮಹಾರಾಷ್ಟ್ರದಂತೆ ಹೊಸನಗರದಲ್ಲೂ ಗಣಪತಿ ಮ್ಯೂಸಿಯಂ, ಹೇಗಿದೆ? ಏನೇನೆಲ್ಲ ಇದೆ?

Karanagiri-Ganapathi-Temple-Museum

ಶಿವಮೊಗ್ಗ | ಗಜಮುಖನಿಗೆ ನೂರಾರು ಹೆಸರುಗಳು ಇರುವಂತೆಯೆ ಹಲವು ರೂಪಗಳು ಇದ್ದಾವೆ. ವಿಶ್ವಾದ್ಯಂತ ಸಾವಿರಾರು ಸ್ವರೂಪದಲ್ಲಿ ವಕ್ರತುಂಡನನ್ನು (VAKRATUNDA) ಪೂಜಿಸಲಾಗುತ್ತಿದೆ. ಈಗ ಎಲ್ಲಾ ರೂಪದ ಗಣಪತಿಯನ್ನು (GANAPATHI) ನಮ್ಮೂರಿನಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ. ಪ್ರಮುಖ ದೇವಸ್ಥಾನವೊಂದರಲ್ಲಿ ಮೋದಕ ಪ್ರಿಯನ ಮ್ಯೂಸಿಯಂ (MUSEUM) ಸಿದ್ಧಪಡಿಸಲಾಗಿದೆ. ದೇಶದಲ್ಲೇ ಇದು ವಿಭಿನ್ನವಾಗಿ ಪ್ರಯೋಗವಾಗಿದೆ. ಹೊಸನಗರ (HOSANAGARA) ತಾಲೂಕು ಕಾರಣಗಿರಿಯ (KARANAGIRI) ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ (SIDDI VINAYAKA TEMPLE) ಗಣಪತಿಯ ಮ್ಯೂಸಿಯಂ ಸ್ಥಾಪಿಸಲಾಗಿದೆ. ಇಲ್ಲಿ ದೇಶ ವಿದೇಶದಲ್ಲಿರುವ ಸಾವಿರಾರು ರೂಪದ ಗಣಪತಿಯನ್ನು ಒಂದೇ ಸೂರಿನಡಿ … Read more

ಗುಡ್ಡೇಕಲ್ ಆಡಿಕೃತ್ತಿಗೆ ಜಾತ್ರೆ, ಶಿವಮೊಗ್ಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ

Guddekallu-Temple

SHIVAMOGGA LIVE NEWS | SHIMOGA | 22 ಜುಲೈ 2022 ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಡಿಕೃತ್ತಿಗೆ ಜಾತ್ರೆ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ವಾಹನಗಳ ಸಂಚಾರದ ಮಾರ್ಗ ಬದಲಾವಣೆ  (ROUTE CHANGE) ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ಆಡಿಕೃತ್ತಿಗೆ ಜಾತ್ರೆ ಹಿನ್ನೆಲೆ ದೊಡ್ಡ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಸಂಚಾರ ದಟ್ಟಣೆ ಉಂಟಾಗಬಾರದು ಎಂಬ ಕಾರಣಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ಜುಲೈ 23ರಂದು ಇಡೀ ದಿನ … Read more

ಸಾಗರ – ಸಿಗಂದೂರು ಮಾರ್ಗದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

Sigandur-road-tree-fall.

SHIVAMOGGA LIVE NEWS | SAGARA | 13 ಜುಲೈ 2022 ಮರ ಧರೆಗುರುಳಿ ಸಿಂಗದೂರು (SIGANDUR) ರಸ್ತೆ ಕೆಲವು ಹೊತ್ತು ಬಂದ್ ಆಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸಾಗರ (SAGARA) ಸಿಗಂದೂರು ರಸ್ತೆಯ ಅಂಬಾರಗೋಡ್ಲು ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದಿದೆ. ಹಾಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಸಿಗಂದೂರು ಪ್ರವಾಸಿಗರಿಗೆ ಕಷ್ಟ ಕಷ್ಟ ಅಂಬಾರಗೋಡ್ಲು ರಸ್ತೆಯಲ್ಲಿ ಮರ ಬಿದ್ದಿದ್ದರಿಂದ ಸಿಗಂದೂರು ಪ್ರವಾಸಿಗರಿಗೆ ಸಮಸ್ಯೆ ಉಂಟಾಯಿತು. ಸಿಗಂದೂರಿಗೆ ತೆರಳುವವರು … Read more

ಶಿವಮೊಗ್ಗದಲ್ಲಿ ‘ಹರೋ ಹರ’ ಜಾತ್ರೆಗೆ ದಿನಾಂಕ ನಿಗದಿ, ಜಾತ್ರೆ ಯಾವಾಗ? ಹೇಗಿರುತ್ತೆ ಆಚರಣೆ?

Harohara-Jathre-In-Shimoga-city.

SHIVAMOGGA LIVE NEWS | SHIMOGA | 7 ಜುಲೈ 2022 ಗುಡ್ಡೇಕಲ್ ನಲ್ಲಿರುವ ಬಾಲಸುಬ್ರಹ್ಮಣ್ಯ ಸ್ವಾಮಿಯ ಆಡಿಕೃತ್ತಿಕೆ ಹರೋಹರ ಜಾತ್ರೆಯನ್ನು ಜುಲೈ 22 ಮತ್ತು 23 ರಂದು ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ. ರಾಜು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಜಾತ್ರೆ ಮಾಡಿರಲಿಲ್ಲ. ಈ ವರ್ಷವೂ ಜಾತ್ರೆ ಇದೆಯೋ ಇಲ್ಲವೋ ಎಂಬ ಬಗ್ಗೆ ಅನೇಕರು ಕೇಳುತ್ತಿದ್ದಾರೆ. ಭಕ್ತರ ಇಚ್ಛೆ ಹಾಗೂ ಇದುವರೆಗೂ ನಡೆದಿಕೊಂಡು ಬಂದ ಸಂಪ್ರದಾಯದಂತೆ … Read more

ಸಿಗಂದೂರು ಚೌಡೇಶ್ವರಿ ದೇವಿ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ

Siganduru-Temple-Aridra-Rain-pooje

SHIVAMOGGA LIVE NEWS | SAGARA | 2 ಜುಲೈ 2022 ಮಲೆನಾಡಿನಲ್ಲಿ ಆರಿದ್ರ ಮಳೆ ಆರಂಭವಾದ ಹಿನ್ನೆಲೆ ಸಾಗರ ತಾಲೂಕಿನ ಸಿಗಂದೂರು (SIGANDUR) ಶ್ರೀ ಚೌಡೇಶ್ವರಿ ದೇವಿಯ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಡಾ. ರಾಮಪ್ಪ ಅವರು ಮೂಲ ದೇವರಿಗೆ ಪೂಜೆ ಸಲ್ಲಿಸಿದರು. ಸೀಗೆ ಕಣಿವೆಯಲ್ಲಿ (SIGANDUR) ಶ್ರೀ ಚೌಡೇಶ್ವರಿ ದೇವಿಯ ಮೂಲ ದೇವರಿದೆ. ಇಲ್ಲಿ ಆರಿದ್ರಾ ಮಳೆ ಹಿನ್ನೆಲೆ ಪೂಜೆ ಸಲ್ಲಿಸಲಾಯಿತು. ಈ ಭಾರಿ ಉತ್ತಮ ಮಳೆಯಾಗಲಿ ಎಂದು ಧರ್ಮದರ್ಶಿ … Read more

ಲಾಂಚ್ ಸೇವೆ ಪುನಾರಂಭ, ಸಿಗಂದೂರು, ಕೊಲ್ಲೂರು ಪ್ರವಾಸಿಗರ ನಿಟ್ಟುಸಿರು

Muppane-Launch-in-Sagara-Sharavathi-River.

SHIVAMOGGA LIVE NEWS | SAGARA | 1 ಜುಲೈ 2022 ಶರಾವತಿ ಹಿನ್ನೀರಿನ ಮುಪ್ಪಾನೆ – ಹಲ್ಕೆ ಕಡವು ಮಾರ್ಗದಲ್ಲಿನ ಲಾಂಚ್ (LAUNCH) ಸೇವೆಯನ್ನು ಪುನಾರಂಭ ಮಾಡಲಾಗಿದೆ. ಇಂದಿನಿಂದ ಲಾಂಚ್ ಸೇವೆ ಮತ್ತೆ ಶುರುವಾಗಲಿದೆ ಎಂದು ಸಹಾಯಕ ಕಡವು ನಿರೀಕ್ಷಕ ದಾಮೋದರ್ ಅವರು ತಿಳಿಸಿದ್ದಾರೆ. ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಕಡಿಮೆಯಾದ್ದರಿಂದ ಮುಪ್ಪಾನೆ – ಹಲ್ಕೆ ಲಾಂಚ್ (LAUNCH) ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಸಾಧಾರಣ ಮಳೆ ಆಗುತ್ತಿರುವುದರಿಂದ ನೀರಿನ ಮಟ್ಟದಲ್ಲಿ ಸ್ವಲ್ಪ ಏರಿಕೆಯಾಗಿದೆ. ಹಾಗಾಗಿ ಜುಲೈ … Read more

ಸಿಗಂದೂರು ಸಮೀಪ ರಾತ್ರೋರಾತ್ರಿ ಆಸ್ಪತ್ರೆ ಮೇಲೆ ಕಲ್ಲು ತೂರಾಟ

Stone-Pelting-on-Tumari-Hospital

SHIVAMOGGA LIVE NEWS | SAGARA | 1 ಜುಲೈ 2022 ಪ್ರಾಥಮಿಕ ಆರೋಗ್ಯ ಕೇಂದ್ರದ (HOSPITAL) ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ರಾತ್ರಿ ಏಕಾಏಕಿ ಕಲ್ಲು ತೂರಲಾಗಿದೆ. ಸಾಗರ ತಾಲೂಕು ತುಮರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ (HOSPITAL) ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಆಸ್ಪತ್ರೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿದೆ. ಕೇಂದ್ರದ ಒಳಗಿನ ಬೆಡ್ ಮೇಲೆ ಗಾಜು ಪುಡಿಯಾಗಿ ಬಿದ್ದಿವೆ. ಕಲ್ಲು ತೂರಲು ಕಾರಣವೇನು ಅನ್ನುವುದು ಈತನಕ ಗೊತ್ತಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಕಲ್ಲು … Read more