ಬಾವಿಗೆ ಬಿದ್ದು ತಳದಲ್ಲಿ ಗಿಡಗಳನ್ನು ಹಿಡಿದು ಕುಳಿತಿದ್ದ ಮಹಿಳೆ
THIRTHAHALLI NEWS, 9 OCTOBER 2024 : ಕುಡಿಯುವ ನೀರಿನ ತೆರೆದ ಬಾವಿಗೆ (well) ಬಿದ್ದಿದ್ದ 58 ವರ್ಷದ ಮಹಿಳೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ತಾಲೂಕಿನ ಕುಡುಮಲ್ಲಿಗೆಯ ಇಂದಿರಾನಗರದ ಚೌಡಿಕಟ್ಟೆ ಸಮೀಪದ ಗುಲಾಬಿ ಪೂಜಾರ್ತಿ ಬಾವಿಗೆ ಬಿದ್ದವರು. ಸೋಮವಾರ ಮಧ್ಯಾಹ್ನ ಆಕಸ್ಮಿಕವಾಗಿ ಬಿದ್ದಿದ್ದ ಮಹಿಳೆ ಸುಮಾರು ಐದು ಗಂಟೆ ಬಾವಿಯ ತಳದಲ್ಲಿದ್ದ ಬೇರುಗಳನ್ನು ಹಿಡಿದು ಕುಳಿತಿದ್ದರು. ಸುದ್ದಿ ತಿಳಿದ ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸಿಬ್ಬಂದಿ ಸುರಕ್ಷಿತವಾಗಿ ಮಹಿಳೆಯನ್ನು ಮೇಲಕ್ಕೆತ್ತಿದರು. ಶಶಿಕುಮಾರ್, ಸಂತೋಷ್ಕುಮಾರ್ ಶೆಟ್ಟಿ, … Read more