BHADRAVATHI NEWS, 21 SEPTEMBER 2024 : ವಿಐಎಸ್ಎಲ್ (VISL) ಕಾರ್ಖಾನೆಯ ಸೆಂಟ್ರಲ್ ಎಲೆಕ್ಟ್ರಿಕ್ ವರ್ಕ್ಶಾಪ್ನಲ್ಲಿದ್ದ ಸುಮಾರು 50 ಕೆ.ಜಿ. ತೂಕದ ತಾಮ್ರದ ತಂತಿ ಕಳ್ಳತನವಾಗಿದೆ. ಎಲೆಕ್ಟ್ರಿಕ್ ವರ್ಕ್ಶಾಪ್ ಬೀಗ ತೆಗೆಯದೆ ಒಳಗಿದ್ದ ಟೂಲ್ಸ್ ಬಳಸಿ ಕಳವು ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಿಲಾಗಿದೆ. ಕಾರ್ಮಿಕರು ಬೆಳಗ್ಗೆ 7 ಗಂಟೆಗೆ ಶಿಫ್ಟ್ಗೆ ಕೆಲಸಕ್ಕೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ.
ಹೇಗಾಯ್ತು ಕೃತ್ಯ? ದೂರಿನಲ್ಲಿ ಏನಿದೆ?
ಸೆ.8ರಂದು ಮಧ್ಯಾಹ್ನ ಶಿಫ್ಟ್ ಮುಗಿಸಿದ್ದ ಕಾರ್ಮಿಕರು ಎಲೆಕ್ಟ್ರಿಕ್ ವರ್ಕ್ಶಾಪ್ ಬಾಗಿಲು ಲಾಕ್ ಮಾಡಿ, ಕೀ ಅನ್ನು ಎಂದಿನಂತೆ ಸೆಂಟ್ರಲ್ ಆಫೀಸ್ಗೆ ಕೊಟ್ಟಿದ್ದರು. ಮರುದಿನ ಬೆಳಗ್ಗೆ ಶಿಫ್ಟ್ಗೆ ಬಂದಾಗ ವರ್ಕ್ಶಾಪ್ ಬಾಗಿಲಿನ ಕೀ ತೆಗೆದು ಒಳಗೆ ಹೋಗಿದ್ದಾರೆ. ಟೂಲ್ಸ್ ಬಾಕ್ಸ್ನ ಬೀಗ ಮುರಿದಿರುವುದು ಗೊತ್ತಾಗಿದೆ. ಅದರಲ್ಲಿದ್ದ ಟೂಲ್ಸ್ ಬಳಸಿ, ರಿಪೇರಿಗೆ ತಂದಿದ್ದ ವೆಲ್ಡಿಂಗ್ ಮೆಷಿನ್ನ ತಾಮ್ರದ ವೈಂಡಿಂಗ್ ಕಳ್ಳತನ ಮಾಡಲಾಗಿದೆ.
![]() |
ಅಂದಾಜು 35 ಸಾವಿರ ರೂ. ಮೌಲ್ಯದ 50 ಕೆ.ಜಿ ತೂಕದ ತಾಮ್ರದ ತಂತಿ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಈದ್ ಮೆರವಣಿಗೆ, ಶಿವಮೊಗ್ಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200