₹50 ಪೆಟ್ರೋಲ್‌ ಹಾಕಿಸಿಕೊಂಡು ಹಣ ಕೇಳಿದ್ದಕ್ಕೆ ಬಂಕ್‌ ಮಾಲೀಕ, ಸಿಬ್ಬಂದಿ ಮೇಲೆ ಅಟ್ಯಾಕ್‌

Published On : ಮಾರ್ಚ್ 31, 2026

Published By : ನಿತಿನ್‌ ಆರ್‌.ಕೈದೊಟ್ಲು 

ಭದ್ರಾವತಿ: ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದಿದ್ದನ್ನು ಪ್ರಶ್ನಿಸಿದ ಪೆಟ್ರೋಲ್ ಬಂಕ್ (petrol bunk) ಸಿಬ್ಬಂದಿ ಹಾಗೂ ಮಾಲೀಕರ ಮೇಲೆ ಕಿಡಿಗೇಡಿಗಳ ಗುಂಪು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಬಂಕ್‌ನಲ್ಲಿದ್ದ ಉಪಕರಣಗಳನ್ನು ಧ್ವಂಸಗೊಳಿಸಲಾಗಿದೆ. ತಾಲೂಕಿನ ಕುಡ್ಲಿಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ.

ಬಂಕ್ ಸಿಬ್ಬಂದಿ ಶ್ರೇಯಸ್ ಎನ್. ಅವರು ನೀಡಿದ ದೂರಿನ ಪ್ರಕಾರ, ಬೈಕ್‌ನಲ್ಲಿ ಇಬ್ಬರು ಯುವಕರು ಬಂಕ್‌ಗೆ ಬಂದು ₹50 ಪೆಟ್ರೋಲ್‌ ಹಾಕಿಸಿಕೊಂಡಿದ್ದಾರೆ. ಹಣ ಕೇಳಿದಾಗ ಕೊಡುವುದಿಲ್ಲ ಲೆಕ್ಕಕ್ಕೆ ಬರೆದಿಕೊ ಎಂದು ಹೇಳಿದ್ದಾರೆ. ಈ ಸಂಬಂಧ ಸಿಬ್ಬಂದಿ ಶ್ರೇಯಸ್‌, ಬಂಕ್‌ ಮಾಲೀಕ ಶ್ರೀನಿವಾಸ್‌ ಅವರಿಗೆ ವಿಷಯ ತಿಳಿಸಿದ್ದಾರೆ. ಹಣ ನೀಡುವಂತೆ ಬಂಕ್‌ ಮಾಲೀಕ ಶ್ರೀನಿವಸ್‌ ಕೇಳಿದ್ದರೆ. ಸಿಟ್ಟಿಗೆದ್ದ ಯುವಕರು ಅಲ್ಲಿಂದ ತೆರಳಿದ್ದು 25 ಜನರ ಗುಂಪನ್ನು ಬಂಕ್‌ಗೆ ಕರೆತಂದು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Crime-News-General-Image

ಈ ವೇಳೆ ಶ್ರೇಯಸ್ ಹಾಗೂ ಬಂಕ್ ಮಾಲೀಕ ಶ್ರೀನಿವಾಸ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲಾಗಿದೆ. ಆರೋಪಿಗಳು ಶ್ರೇಯಸ್ ಬಳಿಯಿದ್ದ ₹500 ನಗದು ಕಿತ್ತುಕೊಂಡು, ಪೆಟ್ರೋಲ್ ಹಾಕುವ ಗನ್ ಮುರಿದು ಹಾಗೂ ಸಿಸಿಟಿವಿ ಕೇಬಲ್‌ಗಳನ್ನು ಎಳೆದು ಹಾಕಿ ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ : ಲಾರಿಯ ಚಕ್ರದಡಿ ಸಿಲುಕಿ ದಂಪತಿ ಸಾವು, ಹೇಗಾಯ್ತು ಘಟನೆ?

ಗಾಯಾಳುಗಳು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunrise Facility Services, Sri sai Trust Shimoga

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 31, 2026

Leave a Comment